ಪುತ್ತೂರು, ಜು.24: ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸುಮಾರು ಐವತ್ತು ವರ್ಷಗಳ ಕಾಲ ಅಹರ್ನಿಶಿ ದುಡಿದು ಸಮಾಜಕ್ಕೆ ಸಾವಿರಾರು ಶಿಷ್ಯಂದಿರನ್ನು ಸಮರ್ಪಿಸಿ ನಮ್ಮಿಂದಗಲಿದ ಕುಂಬಳೆಯ ಇಮಾಂ ಶಾಫಿ ಅಕಾಡಮಿಯ ಸಂಸ್ಥಾಪಕ ಮರ್ಹೂಂ ಕುಂಬಳೆ ಖಾಸಿಮ್ ಉಸ್ತಾದರ ಕನ್ನಡಿಗ ಶಿಷ್ಯರ ಬಳಗ ರೌಳತುಲ್ ಉಲೂಂ ಕರ್ನಾಟಕ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಇದರ ಅಧ್ಯಕ್ಷರಾಗಿ ಕೆಮ್ಮಾರದ ಶಂಸುಲ್ ಉಲಮಾ ಮೇಮೋರಿಯಲ್ ಶರೀಅತ್ ಕಾಲೇಜಿನ ಮುಖ್ಯಸ್ಥ ಎಸ್.ಬಿ.ದಾರಿಮಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಉಪಾಧ್ಯಕ್ಷರಾಗಿ ಅನಸ್ ತಂಙಳ್, ಎಸ್.ಬಿ.ಉಸ್ಮಾನ್ ದಾರಿಮಿ, ಅನ್ಸಾರುದ್ದೀನ್ ಫೈಝಿ, ಮುಫತ್ತಿಶ್ ಉಮರುಲ್ ಫಾರೂಕ್ ದಾರಿಮಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಮಜೀದ್ ದಾರಿಮಿ ಕೆ.ವಿ., ಜೊತೆ ಕಾರ್ಯದರ್ಶಿಗಳಾಗಿ ಮಜೀದ್ ನಿಝಾಮಿ, ಹುಸೈನ್ ಫೈಝಿ, ಹಕೀಂ ಫೈಝಿ, ಸಮೀರ್ ಪೈಝಿ, ಅಝೀಝ್ ಅಶ್ಶಾಫಿ, ಕೋಶಾಧಿಕಾರಿಯಾಗಿ ಅಯ್ಯೂಬ್ ಮುಸ್ಲಿಯಾರ್ ನೆಲ್ಯಾಡಿ, ಸಂಚಾಲಕರಾಗಿ ಕರಾಯ ಅಶ್ರಫ್ ಹನೀಫಿ, ಮುಹಮ್ಮದ್ ಈಶ್ವರಮಂಗಳ, ಆದಂ ಆತೂರು,
ಉಮರ್ ದಾರಿಮಿ ಆತೂರು, ನಾಸಿರ್ ಅಶ್ಶಾಫಿ, ಮೀಡಿಯಾ ವಿಂಗ್ ಪದಾಧಿಕಾರಿಗಳಾಗಿ ಟಿ.ಎಂ.ರಝಾಕ್ ದಾರಿಮಿ, ಇರ್ಷಾದ್ ಅಝ್ಹರಿ, ಇಸ್ಮಾಯೀಲ್ ಅಶ್ಯಾಫಿ, ಖಾದರ್ ಅಶ್ಯಾಫಿ, ಹಣಕಾಸು ನಿರ್ವಹಕರಾಗಿ ಕೆ.ಕೆ.ರಫೀಕ್ ಫೈಝಿ,
ನಝೀರ್ ಅಝ್ಹರಿ, ಹನೀಫ್ ಅಝ್ಹರಿ, ಇಬ್ರಾಹೀ ಅತ್ತೂರು, ಫಾರೂಕ್ ನಿಝಾಮಿ, ಶಾಫಿ ಫೈಝಿ, ಅಶ್ರಪ್ ಫೈಝಿ ಕೊಯ್ಯೂರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶರೀಫ್ ಅಝ್ಹರಿ, ಸುಲೈಮಾನ್ ಮುಸ್ಲಿಯಾರ್
ಶರೀಫ್ ಅಶ್ಯಾಫಿ, ಶಾಹುಲ್ ಹಮೀದ್ ಮುಸ್ಲಿಯಾರ್, ಜಬ್ಬಾರ್ ಅಶ್ಯಾಫಿ ಆಯ್ಕೆಯಾಗಿದ್ದಾರೆ.
ಸಲಹಾಗಾರರಾಗಿ ಉಸ್ತಾದ್ ಬಿ.ಕೆ.ಬಂಬ್ರಾಣ, ಕೆ.ಎಲ್.ಅಬ್ದುಲ್ ಖಾದಿರ್ ಅಲ್ ಖಾಸಿಮಿ, ಎಂ.ಪಿ.ಮುಹಮ್ಮದ್ ಸಅದಿ ಪಟ್ಟೋರಿ, ಮುಸ್ತಫಾ ಸಅದಿ ಮೂಳೂರು ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: