ಸಂಸದ ಪ್ರತಾಪ್ ಸಿಂಹ ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅತಿ ಬುದ್ದಿವಂತ ನೀನು ಹೋಗು ಎಂದ ಬೈಯ್ದ ವಿಚಾರ.
ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ.
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಿಎಂ ಬಳಿ ಪತ್ರ ಕೊಟ್ಟೆ.
ಸಿಎಂ ಸಂಪುಟದ ಮುಂದೆ ಇಡಲು ಪತ್ರದ ಮೇಲೆ ನೋಟ್ ಬರೆದರು.
ಆ ಫೈಲ್ ಫಾಲೋ ಆಫ್ಹ್ ಮಾಡಲು ಆ ಲೇಟರ್ ನ ಫೋಟೋ ತೆಗೆದು ಕೊಳ್ಳಲು ಕೇಳಿದೆ.
ಆಗ ಸಿಎಂ ಕಾರ್ಯದ ಒತ್ತಡದಲ್ಲಿ ಸಣ್ಣದಾಗಿ ಸಿಡುಕಿದರು.
ಸಿಎಂಗೆ ನನ್ನ ಮೇಲೆ
ಸಿಡುಕುವುದಕ್ಕೆ, ಕೋಪಿಸಿ ಕೊಳ್ಳುವುದುಕ್ಕೆ ಹಕ್ಕಿದೆ.
ಸಿಎಂ ನನಗೆ ಪೆಟ್ಟು ಕೊಟ್ಟರು ನನಗೆ ಬೇಸರವಿಲ್ಲ.
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಿಎಂ ನಾನು ಕೇಳಿದ್ದಕ್ಕೆಲ್ಲಾ ಹಣ ಕೊಟ್ಟಿದ್ದಾರೆ.
ನಾನು ಕೇಳಿದ್ದಕ್ಕೆಲ್ಲಾ ಹಣ ಕೊಟ್ಟ ಏಕೈಕ ಸಿಎಂ ಬೊಮ್ಮಾಯಿ.
ಜನರ ಕೆಲಸದ ಸೇವಕ ನಾನು. ಕಾಲಿಗೆ ಬಿದ್ದು ಕೈ ಮುಗಿದು ಜನರ ಕೆಲಸ ಮಾಡಿ ಕೊಡುತ್ತೇನೆ.
ನಾನು ಯಾವುದೋ ವರ್ಗಾವಣೆ , ಕಂಟ್ರಾಕ್ಟರ್ ಫೈಲ್ ತೆಗೆದು ಕೊಂಡು ಹೋಗಿದ್ದಾಗ ಹೀಗೆ ಆಗಿದ್ದರೆ ಅದು ಅವಮಾನ.
ಸೋಮಣ್ಣ ಅವರ ಹುಟ್ಟುಹಬ್ಬ ಇದ್ದ ಕಾರಣ.
ಅವರಿಗೆ ವಿಷ್ ಮಾಡಲು ಹೋಗಿದ್ದೆ.
ಹೀಗಾಗಿ ಮೈಸೂರಿಗೆ ಸಿಎಂ ಬಂದಾಗ ಬರಲು ಆಗಲಿಲ್ಲ.
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: