MYSORE ; ಫೋನ್ ಮಾಡಿ ಕರೆಸಿಕೊಂಡು ಜೆಸಿಬಿ ಚಾಲಕನ ಭೀಕರ ಹತ್ಯೆ

ಮೈಸೂರು: ಫೋನ್ ಮಾಡಿ ಕರೆಸಿಕೊಂಡು ಜೆಸಿಬಿ ಚಾಲಕನ ಭೀಕರ ಹತ್ಯೆ

ಜೆಸಿಬಿ ಚಾಲಕನನ್ನು ಫೋನ್ ಮಾಡಿ ಕರೆಸಿಕೊಂಡ ದುಷ್ಕರ್ಮಿಗಳು ಅಟ್ಟಾಡಿಸಿ ಇರಿದಿದ್ದೂ ಅಲ್ಲದೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಂದಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ನಗರದ ಹೊರವಲಯದ ರಮ್ಮನಹಳ್ಳಿಯಲ್ಲಿ ಅರ್ಜುನ್ (24) ಕೊಲೆಯಾದ ಯುವಕ.

ಜೆಸಿಬಿ ವಾಹನ ಚಾಲಕನಾಗಿದ್ದ ಅರ್ಜುನ್ ನನ್ನು ಕಳೆದ ರಾತ್ರಿ ಫೋನ್ ಮಾಡಿ ಕರೆಸಿಕೊಂಡ ಪರಿಚಯಿಸ್ಥರೇ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಚಾಕುವಿನಿಂದ ಮನಬಂದಂತೆ ಚುಚ್ಚಿ ಅಟ್ಟಾಡಿಸಿ ಕೊಲೆಗೆ ಯತ್ನಿಸಿರುವ ದುಷ್ಕರ್ಮಿಗಳು, ಕೊನೆಗೆ ಹಳ್ಳಕ್ಕೆ ತಳ್ಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಅಡಿಷನಲ್ ಎಸ್ಪಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೈಸೂರು ಮೆಡಿಕಲ್ ಕಾಲೇಜು ಶವಾಗಾರದಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಸ್ವೀಕರ್‌ ರಮೇಶ್‌ ಕುಮಾರ್‌ ಹೇಳಿಕೆಗೆ ವ್ಯಾಪಕ ಖಂಡನೆ:ರಮೇಶ್ ಕುಮಾರ್ ಅವರು ಕ್ಷೇಮ ಕೇಳ್ಬೇಕು :ಎಂ ಪಿ ರೇಣುಕಾಚಾರ್ಯ ಆಗ್ರಹ

Fri Dec 17 , 2021
ರಮೇಶ್ ಕುಮಾರ್ ಸಭಾಧ್ಯಕ್ಷರು, ಹಿರಿಯರು. ಅವರ ಅನುಭವವನ್ನ ರಾಜ್ಯ ಸರ್ಕಾರಕ್ಕೆ ಕೊಡುವ ಬದಲು ಅಸಬ್ಧವಾಗಿ ಮಾತನಾಡಿದ್ದಾರೆ…..ರಮೇಶ್ ಕುಮಾರ್ ಅವರು ಕ್ಷೇಮ ಕೇಳ್ಬೇಕು ಎಂದು ಎಂ.ಪಿ ರೇಣುಕಾಚಾರ್ಯ ಅವರು ಆಗ್ರಹಿಸಿದ್ದಾರೆ…ಅವರ ಮಾತಿಗೆ ಕಾಂಗ್ರೆಸ್ ಪಕ್ಷ ಹೊಣೆ ಹೊರಬೇಕು.ಕಾಂಗ್ರೇಸ್ ಪಕ್ಷದಿಂದ ವಜಾ ಮಾಡಬೇಕು.ನಾವು ಅನ್ನ ನ ತಾಯಿ ಸಮಾನ ನೋಡುತ್ತೇವೆ.ತಾಯಿಗೆ ಅನುಮಾನ ಮಾಡ್ತಿದ್ದಾರೆ ಅವರನ್ನ ವಜಾ ಮಾಡ್ಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ… Please follow and like us:

Advertisement

Wordpress Social Share Plugin powered by Ultimatelysocial