ನಾರಾವಿಯಲ್ಲಿ ರಸ್ತೆ ಅಪಘಾತ; ದ್ವಿಚಕ್ರ ವಾಹನ ಸವಾರ ಬಲಿ, ಇನ್ನೋರ್ವ ಗಂಭೀರ

ಬೆಳ್ತಂಗಡಿ, ಫೆ.5: ದ್ವಿಚಕ್ರ ವಾಹನಕ್ಕೆ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಇಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನಡೆದಿದ್ದು, ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾನೆ. ಇನ್ನೋರ್ವ ಗಂಭೀರ ಗಾಯಗೊಂಡಿದ್ದಾನೆ.ಮೃತರನ್ನು ಬೈಕ್ ಸವಾರ, ಮಡಿಕೇರಿ ತಾಲೂಕಿನ ಊರುಬೈಲ್ ಚೆಂಬ್ ಗ್ರಾಮದ ಮುಕ್ಕುಯಿ ಮನೆ ನಿವಾಸಿ ಲಾರೆನ್ಸ್ ಎಂ.ಜಿ.(38) ಎಂದು ಗುರುತಿಸಲಾಗಿದೆ. ಸಹ ಸವಾರ ಬೆಳ್ತಂಗಡಿ ತಾಲೂಕಿನ ನೆಲ್ಲಿಕಾರು ನಿವಾಸಿ ಜಾನ್(81) ಎಂಬವರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರಿಬ್ಬರು ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಇಂದು ಬೆಳಗ್ಗಿನ ಜಾವ ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ ಎಂದು ತಿಳಿದುಬಂದಿದೆ.ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

COVID:ಭಾರತದಲ್ಲಿ 1.27 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ;

Sat Feb 5 , 2022
ದೈನಂದಿನ ಸಕಾರಾತ್ಮಕತೆಯ ದರವು ಹಿಂದಿನ ದಿನ 9.27 ಶೇಕಡಾದಿಂದ 7.9 ಕ್ಕೆ ಇಳಿದಿದೆ. ಶನಿವಾರದಂದು ಭಾರತದ ಸಕ್ರಿಯ COVID-19 ಕ್ಯಾಸೆಲೋಡ್ 13,31,648 ಕ್ಕೆ ಇಳಿದಿದೆ, ಆದರೆ ರಾಷ್ಟ್ರೀಯ COVID ಚೇತರಿಕೆ ದರವು 95.64 ಶೇಕಡಾಕ್ಕೆ ಹೆಚ್ಚಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸಾಪ್ತಾಹಿಕ ಸಕಾರಾತ್ಮಕತೆಯ ದರವು 11.21 ಶೇಕಡಾದಲ್ಲಿ ದಾಖಲಾಗಿದೆ. ಸಾವಿನ ಪ್ರಮಾಣ ನಿನ್ನೆಗಿಂತ ಸ್ವಲ್ಪ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತವು 1,059 ಕೋವಿಡ್ ಸಾವುಗಳನ್ನು ವರದಿ ಮಾಡಿದೆ, ಕೇಂದ್ರ […]

Advertisement

Wordpress Social Share Plugin powered by Ultimatelysocial