ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೂಳಕರ್ ಪರ ಮತದಾರರಿಗೆ ಹಣ ಹಂಚುತ್ತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೂಳಕರ್ ಸಹೋದರ ರಾಮಚಂದ್ರ ಮನ್ನೂಳಕರ್ ಮತದಾರರಿಗೆ ಹಣದ ಆಮಿಷ ನೀಡಿದ್ದಾರೆ. ರಾಮಚಂದ್ರ ಮನ್ನೂಳಕರ್ ಹಾಲಿ ಗ್ರಾ ಪಂಚಾಯತಿ ಸದಸ್ಯ. ಇಷ್ಟು ರಾಜಾರೋಷವಾಗಿ ಅಂಬೆವಾಡಿ ಗ್ರಾಮದಲ್ಲಿ ಹಣ ಹಂಚ್ಚುತ್ತಿದ್ರು ಚುನಾವಣಾ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತರವ ಕೆಲಸ ಎಂದು ಸಾಮಾನ್ಯ ಜನರು ಮಾತನಾಡುತ್ತಿದ್ದಾರೆ. ಇನ್ನಾದ್ರು ಚುನಾವಣಾ ಅಧಿಕಾರಿಗಳು ಎಚ್ಚೇತ್ತುಕೊಂಡು ಕ್ರಮ ಕೈ ಗೊಳ್ಳುತ್ತಾರಾ ಕಾಯ್ದು ನೋಡಬೇಕು.
https://play.google.com/store/apps/details?id=com.speed.newskannada