ನಟ ನಾನಿಗೆ ಸಿನಿಮಾ ವೇಸ್ಟ್, ಕಿರಾಣಿ ವ್ಯಾಪಾರ ಬೆಸ್ಟ್: ನಟಿ ರೋಜಾ ಆಕ್ರೋಶ;

ಆಂಧ್ರ ಪ್ರದೇಶದಲ್ಲಿ ಸಿನಿಮಾ ಟಿಕೆಟ್ ಸಮಸ್ಯೆ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಈ ವಿಚಾರದ ಬಗ್ಗೆ ನಾನಿ ಕೂಡ ವಿರೋಧ ವ್ಯಕ್ತಪಡಿಸಿದ್ದರು. ‘ಸಿನಿಮಾ ಥಿಯೇಟರ್‌ಗಳಿಗಿಂತ ದಿನಸಿ ಅಂಗಡಿಯಲ್ಲಿ ಹೆಚ್ಚು ಕಲೆಕ್ಷನ್ ಆಗುತ್ತದೆ. ಸ್ವಲ್ಪ ದರ ಏರಿಸಿದರೂ ಕೂಡ ಪ್ರೇಕ್ಷಕರು ಬಂದು ಸಿನಿಮಾ ನೋಡುತ್ತಾರೆ.

ಟಿಕೆಟ್ ದರ ಇಳಿಸಿರೋದು ಪ್ರೇಕ್ಷಕರಿಗೆ ಮಾಡಿದ ಅವಮಾನ, ಸರ್ಕಾರದ ಈ ನಡೆ ಸರಿ ಇಲ್ಲ ಎಂದು ನ್ಯಾಚುರಲ್​ ಸ್ಟಾರ್​ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು.

ನಾನಿ ಈ ಮಾತುಗಳನ್ನು ಕೇಳಿ ನಟಿ, ರಾಜಕಾರಣಿ ರೋಜಾ ಅವರು ಕೆಂಡಾಮಂಡಲವಾಗಿ ತಿರುಗೇಟು ಕೊಟ್ಟಿದ್ದಾರೆ. ದಿನಸಿ ಅಂಗಡಿಗೂ, ಥಿಯೇಟರ್‌ಗೂ ಹೋಲಿಕೆ ಮಾಡಿದ್ದ ನಾನಿ ಮಾತುಗಳು ಅನೇಕರಿಗೆ ಸಿಟ್ಟು ತರಿಸಿದೆ. ಅದರಲ್ಲೂ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿಗೆ ಇನ್ನಷ್ಟು ಕೋಪ ತಂದಿದೆ.ಈ ವಿಚಾರವಾಗಿ ರೋಜಾ ಮಾತನಾಡಿ ‘ಥಿಯೇಟರ್‌ನಲ್ಲಿ ಲಾಭ ಇಲ್ಲ ಅಂದರೆ ದಿನಸಿ ಅಂಗಡಿ ಇಟ್ಟುಕೊಳ್ಳಲಿ.

ಸರ್ಕಾರ ಎಲ್ಲ ಪರಿಶೀಲನೆ ಮಾಡಿ ಈ ಕ್ರಮಕೈಗೊಂಡಿದೆ. ನಾನಿಯಂತಹ ನಟರು ದೊಡ್ಡ ದೊಡ್ಡ ಸಿನಿಮಾಗಳ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ಸಣ್ಣ ಸಿನಿಮಾಗಳ ಬಗ್ಗೆ ಗಮನ ಕೊಡಲ್ಲ ಎಂದು ತಿರುಗೇಟು ನೀಡಿದ್ದಾರೆ. ಸದ್ಯ ನಾನಿ, ಸಾಯಿ ಪಲ್ಲವಿ, ಕೃತಿ ಶೆಟ್ಟಿ ಅಭಿನಯದ ‘ಶ್ಯಾಮ್ ಸಿಂಗ್ ರಾಯ್’ ಚಿತ್ರ ಇತ್ತೀಚೆಗೆ ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RRR ಬಳಿಕ ಮತ್ತೊಂದು ತೆಲುಗು ಸಿನಿಮಾಕ್ಕೆ ಆಲಿಯಾ ಭಟ್ ಗ್ರೀನ್ ಸಿಗ್ನಲ್;

Sun Jan 2 , 2022
ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದೇ ಕಾಲಿಟ್ಟಿದ್ದು, ಆಲಿಯಾ ಭಟ್ ಈ ಚಿತ್ರರಂಗಕ್ಕೆ ಫಿದಾ ಆದಂತಿದೆ. ರಾಜಮೌಳಿ ಅದೇನು ಮೋಡಿ ಮಾಡಿ ಕರೆದುಕೊಂಡು ಬಂದರೋ ಗೊತ್ತಿಲ್ಲ. ಸೌತ್ ಸಿನಿಮಾ ಮೇಲೆ ಭಾರೀ ಪ್ರೀತಿ ಬಂದಿದೆಯಂತೆ. ಅದಕ್ಕೆ ಆಲಿಯಾ ಭಟ್ ಇನ್ನೊಂದು ತೆಲುಗು ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಬೇಜಾನ್ ದೊಡ್ಡ ಸುದ್ದಿ ಮಾಡುತ್ತಿದೆ. ಬಾಲಿವುಡ್ ನಟಿ ಆಲಿಯಾ ಭಟ್ ನಟಿಸಿದ ದಕ್ಷಿಣದ ಮೊದಲ ಸಿನಿಮಾ RRR. […]

Advertisement

Wordpress Social Share Plugin powered by Ultimatelysocial