ಆಂಧ್ರ ಪ್ರದೇಶದಲ್ಲಿ ಸಿನಿಮಾ ಟಿಕೆಟ್ ಸಮಸ್ಯೆ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಈ ವಿಚಾರದ ಬಗ್ಗೆ ನಾನಿ ಕೂಡ ವಿರೋಧ ವ್ಯಕ್ತಪಡಿಸಿದ್ದರು. ‘ಸಿನಿಮಾ ಥಿಯೇಟರ್ಗಳಿಗಿಂತ ದಿನಸಿ ಅಂಗಡಿಯಲ್ಲಿ ಹೆಚ್ಚು ಕಲೆಕ್ಷನ್ ಆಗುತ್ತದೆ. ಸ್ವಲ್ಪ ದರ ಏರಿಸಿದರೂ ಕೂಡ ಪ್ರೇಕ್ಷಕರು ಬಂದು ಸಿನಿಮಾ ನೋಡುತ್ತಾರೆ.
ಟಿಕೆಟ್ ದರ ಇಳಿಸಿರೋದು ಪ್ರೇಕ್ಷಕರಿಗೆ ಮಾಡಿದ ಅವಮಾನ, ಸರ್ಕಾರದ ಈ ನಡೆ ಸರಿ ಇಲ್ಲ ಎಂದು ನ್ಯಾಚುರಲ್ ಸ್ಟಾರ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು.
ನಾನಿ ಈ ಮಾತುಗಳನ್ನು ಕೇಳಿ ನಟಿ, ರಾಜಕಾರಣಿ ರೋಜಾ ಅವರು ಕೆಂಡಾಮಂಡಲವಾಗಿ ತಿರುಗೇಟು ಕೊಟ್ಟಿದ್ದಾರೆ. ದಿನಸಿ ಅಂಗಡಿಗೂ, ಥಿಯೇಟರ್ಗೂ ಹೋಲಿಕೆ ಮಾಡಿದ್ದ ನಾನಿ ಮಾತುಗಳು ಅನೇಕರಿಗೆ ಸಿಟ್ಟು ತರಿಸಿದೆ. ಅದರಲ್ಲೂ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಗೆ ಇನ್ನಷ್ಟು ಕೋಪ ತಂದಿದೆ.ಈ ವಿಚಾರವಾಗಿ ರೋಜಾ ಮಾತನಾಡಿ ‘ಥಿಯೇಟರ್ನಲ್ಲಿ ಲಾಭ ಇಲ್ಲ ಅಂದರೆ ದಿನಸಿ ಅಂಗಡಿ ಇಟ್ಟುಕೊಳ್ಳಲಿ.
ಸರ್ಕಾರ ಎಲ್ಲ ಪರಿಶೀಲನೆ ಮಾಡಿ ಈ ಕ್ರಮಕೈಗೊಂಡಿದೆ. ನಾನಿಯಂತಹ ನಟರು ದೊಡ್ಡ ದೊಡ್ಡ ಸಿನಿಮಾಗಳ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ. ಸಣ್ಣ ಸಿನಿಮಾಗಳ ಬಗ್ಗೆ ಗಮನ ಕೊಡಲ್ಲ ಎಂದು ತಿರುಗೇಟು ನೀಡಿದ್ದಾರೆ. ಸದ್ಯ ನಾನಿ, ಸಾಯಿ ಪಲ್ಲವಿ, ಕೃತಿ ಶೆಟ್ಟಿ ಅಭಿನಯದ ‘ಶ್ಯಾಮ್ ಸಿಂಗ್ ರಾಯ್’ ಚಿತ್ರ ಇತ್ತೀಚೆಗೆ ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada