ದೇಶದ ರೈತರಿಗೆ ನ್ಯೂ ಇಯರ್ ಗಿಫ್ಟ್!

ದೇಶದ ರೈತರಿಗೆ ಸಿಹಿಸುದ್ದಿ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಮತ್ತೊಂದು ಕಂತಿನ ಹಣವನ್ನ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ.ಪಿಎಂ ಕಿಸಾನ್ ಯೋಜನೆಯಡಿ ಲಾಭ ಪಡೆಯುವ ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ 13ನೇ ಕಂತಿನ ಹಣವನ್ನ ಶೀಘ್ರದಲ್ಲೇ ಪಡೆಯುವ ಸಾಧ್ಯತೆಯಿದೆ.ಅದ್ರಂತೆ, ಡಿಸೆಂಬರ್’ನಿಂದ ಮಾರ್ಚ್ ಅವಧಿಗೆ ಅನ್ನದಾತರಿಗೆ 2 ಸಾವಿರ ರೂ. ಶೀಘ್ರದಲ್ಲೇ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲಿದೆ.ಮೋದಿ ಸರಕಾರ ರೈತರ ಬ್ಯಾಂಕ್ ಖಾತೆಗೆ ಇದುವರೆಗೆ 12 ಕಂತುಗಳ ಹಣವನ್ನ ಜಮಾ ಮಾಡಿದೆ. ಅಂದರೆ ಪ್ರತಿ ರೈತರಿಗೆ ಈಗಾಗಲೇ ರೂ. 24 ಸಾವಿರ ಸಿಕ್ಕಿದೆ ಎನ್ನಬಹುದು. ಹೊಸ ವರ್ಷದಲ್ಲಿ ಇನ್ನೂ ರೂ. 2 ಸಾವಿರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.ಪಿಎಂ ಕಿಸಾನ್ 13 ನೇ ಕಂತಿನ ಹಣವನ್ನ ಜನವರಿ 15ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬಹುದು ಎಂದು ವರದಿಗಳು ಹೇಳುತ್ತವೆ. ಅಂದರೆ ಹೊಸ ವರ್ಷದಲ್ಲಿ ರೈತರಿಗೆ ಸಿಹಿಸುದ್ದಿ ಸಿಗಲಿದೆ. ವರದಿಗಳ ಪ್ರಕಾರ ಸಂಕ್ರಾಂತಿ ಹಬ್ಬದ ಮುನ್ನವೇ ರೈತರಿಗೆ ಹಣ ತಲುಪಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

 

Please follow and like us:

Leave a Reply

Your email address will not be published. Required fields are marked *

Next Post

ಇಂಡೋ ಸ್ಪಿರಿಟ್ಸ್ ನಲ್ಲಿ ಕೆಸಿಆರ್ ಪುತ್ರಿ ಕವಿತಾ ಪಾಲು ಎಂಬ ಸ್ಫೋಟಕ

Wed Dec 21 , 2022
ನವದೆಹಲಿ:  ಜಾರಿ ನಿರ್ದೇಶನಾಲಯ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ವಿರುದ್ಧ ಗಂಭೀರ ಆರೋಪ ಮಾಡಿದೆ.ತೆಲಂಗಾಣ ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾ ಮತ್ತು ಅವರ ಪಾಲುದಾರ ಒಟ್ಟಾಗಿ ಲಿಕ್ಕರ್ ಕಂಪೆನಿ ಇಂಡೊ ಸ್ಪಿರಿಟ್ ನಲ್ಲಿ ಶೇಕಡಾ 65ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ ವರದಿಯಲ್ಲಿ ಹೇಳಿದೆ. ಕವಿತಾ ಅವರ ಹೆಸರು ಆರಂಭದಿಂದಲೂ ದೆಹಲಿ ಲಿಕ್ಕರ್ ಹಗರಣದಲ್ಲಿ ಕೇಳಿಬರುತ್ತಿದೆ. ಕಳೆದ ತಿಂಗಳು ಕೋರ್ಟ್ […]

Advertisement

Wordpress Social Share Plugin powered by Ultimatelysocial