‘ಮುಖ್ಯ ಆರ್ಥಿಕ ಜ್ಯೋತಿಷಿ”ಯನ್ನು ನೇಮಿಸಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಚಿದಂಬರಂ ವ್ಯಂಗ್ಯ

 

ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸ್ವಂತ ಕೌಶಲ್ಯ ಹಾಗೂ ಆರ್ಥಿಕ ಸಲಹೆಗಾರರ ​​​​ಕೌಶಲ್ಯದ ಮೇಲಿನ ಭರವಸೆಯನ್ನು ಬಿಟ್ಟು ಆರ್ಥಿಕತೆಯ ರಕ್ಷಣೆಗೆ ಗ್ರಹಗಳನ್ನು ಆಹ್ವಾನಿಸಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಗುರುವಾರ ಹೇಳಿದ್ದಾರೆ.

ನಾಸಾ ತನ್ನ ಹೊಸ ಶಕ್ತಿಯುತ ಬಾಹ್ಯಾಕಾಶ ದೂರದರ್ಶಕದಿಂದ ಅನಾವರಣಗೊಳಿಸಿದ ಚಿತ್ರಗಳನ್ನು ಮಂಗಳವಾರ ಮರುಟ್ವೀಟ್ ಮಾಡಿದ ನಿರ್ಮಲಾ ಸೀತಾರಾಮನ್ ಅವರ ಮೇಲೆ ಚಿದಂಬರಂ ವಾಗ್ದಾಳಿ ನಡೆಸಿದರು

“ತನ್ನ ಸ್ವಂತ ಕೌಶಲ್ಯ ಹಾಗೂ ತನ್ನ ಆರ್ಥಿಕ ಸಲಹೆಗಾರರ ​​ಕೌಶಲ್ಯದ ಮೇಲೆ ಭರವಸೆಯನ್ನು ಕಳೆದುಕೊಂಡ ನಂತರ, ಆರ್ಥಿಕತೆಯನ್ನು ರಕ್ಷಿಸಲು ವಿತ್ತ ಸಚಿವರು ಗ್ರಹಗಳನ್ನು ಕರೆದಿದ್ದಾರೆ” ಎಂದು ಮಾಜಿ ಹಣಕಾಸು ಸಚಿವರು ವ್ಯಂಗ್ಯವಾಡಿದರು.

ಮೊದಲಿಗೆ, ವಿತ್ತ ಸಚಿವರು ಹೊಸ “ಸಿಇಎ: ಮುಖ್ಯ ಆರ್ಥಿಕ ಜ್ಯೋತಿಷಿ” ಯನ್ನು ನೇಮಿಸಬೇಕು ಎಂದು ಚಿದಂಬರಂ ಸಲಹೆ ನೀಡಿದರು.

ದೇಶದ ಆರ್ಥಿಕತೆಯನ್ನು ಚೇತರಿಕೆಯತ್ತ ಕೊಂಡೊಯ್ಯುವುದಕ್ಕಿಂತ ಶುಕ್ರ ಹಾಗೂ ಪ್ಲುಟೊದಲ್ಲಿ ಸೀತಾರಾಮನ್ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಕಾಂಗ್ರೆಸ್ ಬುಧವಾರ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಸೇರಿದಂತೆ 3 ಪದಕಗಳನ್ನು ಗೆದ್ದ 94 ವರ್ಷದ ಮಹಿಳೆ

Thu Jul 14 , 2022
ದೆಹಲಿ : ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಸೇರಿದಂತೆ 3 ಪದಕಗಳನ್ನು ಗೆದ್ದ 94 ವರ್ಷದ ಮಹಿಳೆ ಭಗ್ವಾನಿ ದೇವಿ ದಾಗರ್ ಜುಲೈ 12 ರಂದು ಭಾರತಕ್ಕೆ ಮರಳಿದ್ದಾರೆ. ಫಿನ್ ಲ್ಯಾಂಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಗ್ವಾನಿ ದೇವಿ ದಾಗರ್ ಅವರು ಒಂದು ಚಿನ್ನ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದರು. ಭಗ್ವಾನಿ ದೇವಿ ದಾಗರ್ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತ ಮಾಡಲಾಯಿತು ಮತ್ತು ಅವರು ತಮ್ಮ […]

Advertisement

Wordpress Social Share Plugin powered by Ultimatelysocial