ರಾಮನಗರ ವೇದಿಕೆ ಮೇಲೆ ಸಿ.ಟಿ.ರವಿ ಮಾತನಾಡಿ, ನಾನು ಮುಖ್ಯಮಂತ್ರಿ ಖುರ್ಚಿಗೆ ಟವಲ್ ಹಾಕಿ ರಾಮನಗರಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಖುರ್ಚಿಬ ಖಾಲಿ ಇಲ್ಲ. ಆದರೂ ಕೆಲವರು ಟವಲ್ ಹಾಕಿದ್ದಾರೆ. ನಾನು ಹಿಂದುತ್ವದಕ್ಕೆ ಬದ್ದನಾಗಿದ್ದೆನೆ ಎಂದು ಹೇಳಲು ಅಷ್ಟೆ ಬಂದಿದ್ದೆನೆ.
ಅಧಿಕಾರ ಶಾಶ್ವತವಲ್ಲ. ದೇಶಪ್ರೇಮವಷ್ಟೆ ಶಾಶ್ವತವಾಗಿರಬೇಕು. ಆಲೋಚನೆಗೆ ತಕ್ಕಂತೆ ಅಧಿಕಾರ ಬಳಸುತ್ತೆನೆ . ಆದರೆ , ಕೆಲವರು ಕುಟುಂಬಕ್ಕಾಗಿ, ಹಣಕ್ಕಾಗಿ , ಪ್ರತಿಷ್ಟೆಗಾಗಿ ಅಧಿಕಾರ ಕೇಳುತ್ತಿದ್ದಾರೆ.
ಭಾರತವನ್ನು ಭಾರತವನ್ನಾಗಿ ಉಳಿಸಲು, ಉದಯಪುರ ಹಾಗೂ ಮಹಾರಾಷ್ಟ್ರದಲ್ಲಿ ಘಟನೆ ನಮ್ಮಲ್ಲಿ ಆಗದಿರಲು ನಮಗೆ ಅಧಿಕಾರ ಕೊಡಿ ಎಂದರು.
ನಮಗೆ ಹೃದಯದಲ್ಲಿ ಜಾಗ ಕೊಡಿ. ನಮಗೆ ಮುಖ್ಯ ಮಂತ್ರಿ ಖುರ್ಚಿ ಬೇಡ ಎಂದರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್ ಗೆ ನಂಬಿಕೆ ಇಲ್ಲ. ಇಡಿ ಸುಮ್ಮನೆ ಯಾರ ಮೇಲೂ ತನಿಖೆ ನಡೆಸುವುದಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣ ನಡೆಸುವುವರು ಅಮಾಯಕರಾ?
ಕಾಂಗ್ರೆಸ್ನ ನಾಯಕರು ಪ್ರಮಾಣಿಕವಾಗಿದ್ದರೆ ಇಡಿಗೆ ಏಕೆ ಹೆದರಿಕೊಳ್ಳಬೇಕು. ಬಂಡವಾಳ ತಮ್ಮ ಹಾಕದೇ ೨೦ ಸಾವಿರ ಕೋಟಿ ವರ್ಗಾವಣೆ ಮಾಡಿಕೊಲ್ಳುವುದು ಸರಿನಾ?
ನಾನು ಒಕ್ಕಲಿಗ ಜಾತಿಯವನೆ. ನಾನು ಜಾತಿ ರಾಜಕೀಯ ಮಾಡುವುದಿಲ್ಲ. ಜಾತಿ ಹಸರಿನಲ್ಲಿ ಕುಟುಂಬವನ್ನು ಬಲ ಪಡಿಸಿಕೊಳ್ಳುತ್ತಿದ್ದಾರೆ. ನಾನು ಅಂತಹ ರಾಜಕೀಯ ಮಾಡುವುದಿಲ್ಲ ಎಂದರು.
ನಮಗೆ ಸಿಎಂ ಖುರ್ಚಿ ಆಸೆ ಇಲ್ಲ. ರಾಜ್ಯದ ಜನ ಯಾರ ಮೇಲೆ ನಂಬಿಕೆ ಇಡಬೇಕು ಎಂಬುದು ಜನರಿಗೆ ಗೊತ್ತಿದೆ. ಯಾವ ಭಯವು ಇಲ್ಲ. ಒಂದು ಜಾತಿಯಲ್ಲಿ ರಾಜಕೀಯ ಮಾಡಿ , ಗೆಲಲ್ಲು ಸಾಧ್ಯವಿಲ್ಲ. ಒಕ್ಕಲಿಗರು ನೀತಿವಂತರು. ಅವರು ರಾಷ್ಟ್ರ ಪ್ರೇಮಿಗಳು ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: