ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ದಂಪತಿಗಳನ್ನು ಅಪರಿಚಿತರು ಬರ್ಬರ ಹತ್ಯೆಗೈಯ್ದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುದ್ನಾಳ ವ್ಯಾಪ್ತಿಯಲ್ಲಿ ನಡೆದಿದೆ. ಹತ್ಯೆಗೋಳಗಾದವರು ಶಾಂತಿಲಾಲ ದೇವಲಪ್ಪ ರಾಠೋಡ ಮತ್ತು ಮಡದಿ ರುಕ್ಮಿಣಿ ಶಾಂತಿಲಾಲ ರಾಠೋಡ .ದಂಪತಿಗಳು ಇಬ್ಬರು ಮುದ್ನಾಳ ಹಳ್ಳದ ತಾಂಡಾದ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಹಾಗೂ ನಾರಾಯಣಪುರದ ಬಸರಿಗಿಡ ತಾಂಡಾದ ನಿವಾಸಿಗಳೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅನುಪಮ ಅಗರವಾಲ್ ಭೇಟಿ ಪರಿಶೀಲನೆ ನಡೆಸಿದ್ದರು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ದಂಪತಿಗಳ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇದನ್ನ ಓದಿ:ಶಂಕರ್ ಸಿನಿಮಾದಲ್ಲಿ ಮಿಂಚಲಿರುವ ರಾಕಿಂಗ್ ಸ್ಟಾರ್..!