ಪೆಟ್ರೋಲ್ ಬಂಕ್ ನಲ್ಲಿ ಲಾರಿಯ ಚಾಲಕನೋರ್ವನಿಗೆ ತಲ್ವಾರ ಹಾಗೂ ರಾಡಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ,ತಾಲೂಕಿನ ಅಂಚಟಗೇರಿ ನಡೆದಿದೆ.ಅಂಚಟಗೇರಿಯ ಪರಶುರಾಮ ಪೆಟ್ರೋಲ್ ಬಂಕ್ ಸಮೀಪದಲ್ಲಿಯೇ ದುರ್ಘಟನೆ ನಡೆದಿದೆ ಸುನೀಲ ಚೆಲವರಂ ಎಂಬ ಸರ್ದಾರಜಿಗೆ ಹೊಡೆಯಲಾಗಿದೆ.ಯಾವ ಕಾರಣಕ್ಕೆ ಹೀಗೆ ಮಾಡಲಾಗಿದೆ ಎಂಬುದು ಇನ್ನು ತಿಳಿದು ಬಂದಿಲ್ಲ.ಕೆಲವರ ಪ್ರಕಾರ ಸರ್ದಾರಜಿಯನ್ನ ಹೊಡೆದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆಂದು ಹೇಳಲಾಗುತ್ತಿದೆ.ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ಗಾಯಾಳುವನ್ನು ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ.ಕಿಮ್ಸನ ತುರ್ತು ಚಿಕಿತ್ಸಾ ಘಟಕದಲ್ಲಿಟ್ಟು […]

ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಿಗೆ ಪುನರ್ ನಾಮಕರಣ ಮಾಡಲಾಗಿದೆ. ಇನ್ನು ಈ ಬಗ್ಗೆ ಸರ್ಕಾರದಿಂದ ಆದೇಶ ಕೂಡ ಹೊರಡಿಸಲಾಗಿದೆ.ಪರಿಶಿಷ್ಟ ಜಾತಿಯ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಒಂದರಿಂದ ಐದನೇ ತರಗತಿವರೆಗೆ ಶಿಕ್ಷಣ ನೀಡಲು 68 ವಸತಿ ಶಾಲೆಗಳನ್ನು ತೆರೆಯಲಾಗಿದೆ. ಇನ್ನು ಈ ಶಾಲೆಯಲ್ಲಿ ೮೫೦೦ ವಿದ್ಯಾರ್ಥಿಗಳು ವ್ಯಾಸಂಘ ಮಾಡುತ್ತಿದ್ದು, ಇವರೆಲ್ಲರು ಓದುತ್ತಿರುವ ಶಾಲೆಗೆ ಅಂಬೇಡ್ಕರ್ ಹೆಸರನ್ನು ನಾಮಕರಣ ಮಾಡಲಾಗಿದೆ. […]

ಚೀನಾದಲ್ಲಿ ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿದ್ದರೂ ಇತ್ತಿಚಿನ ದಿನಗಳಲ್ಲಿ  ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿವೆ. ಷಿಯಾನ್ ನಗರದಲ್ಲಿನ ಕೋವಿಡ್-19 ಪ್ರಕರಣಗಳ ಏರಿಕೆ ದೇಶಾದ್ಯಂತ ಹರಡುವ ಆತಂಕ ಉಂಟುಮಾಡಿದ್ದು, ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ಹೊರಗೆ ಹೋಗದಂತೆ ಚೀನಾದಲ್ಲಿ ಸೂಚನೆ ನೀಡಲಾಗಿದೆ. ಇದಲ್ಲದೆ ಜನರ ವಾಹನ ಚಾಲನೆಯನ್ನೂ ಸಹ ನಿಷೇಧ ಮಾಡಲಾಗಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನ ಚೀನಾದಲ್ಲಿ ಕೈಗೊಳ್ಳಲಾಗುತ್ತಿದೆ.ಷಿಯಾನ್ ನಗರದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು ಈ ಭಾಗದಲ್ಲಿ 10 ದಿನಗಳ ವರೆಗೆ ಲಾಕ್ […]

ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದ ಸಮೀಪವಿರುವ ತೋಟದ ಮನೆಯೊಳಗೆ ನುಗ್ಗಿದ ಚಿರತೆ,ರೈತ ಸೋಮೇಶ್ ಎಂಬುವವರ ತೋಟದ ಮನೆಗೆ ನುಗ್ಗಿದ ಚಿರತೆ  ಮನೆಯೊಳಗೆ ನುಗ್ಗಿದ ಚಿರತೆ ಕಂಡು ಹೌಹಾರಿದ ರೈತ ವಿಚಲಿತನಾಗದೇ ಮನೆ ಬೀಗ ಹಾಕಿ ಹೊರಬಂದು ಅಕ್ಕಪಕ್ಕದ ಜನರ ಸಹಾಯ ಪಡೆದಕೊಂಡು ರೈತ ಬಿ.ಆರ್.ಟಿ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದ್ದು,ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂಧಿಗಳು ಸುಮಾರು 4 ರಿಂದ 5 ವರ್ಷದ ಗಂಡು ಚಿರತೆ ಸೆರೆ  […]

ನಾಗಮಂಗಲ ತಾಲ್ಲೂಕಿನ  ಕೆಂಪನಕೊಪ್ಪಲು ಗ್ರಾಮದ ಗೇಟ್‌ನ ಚಾಮರಾಜನಗರ – ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ, ಸ್ವಿಫ್ಟ್‌ ಕಾರು ಮತ್ತು ಮಿನಿ ಬಸ್‌ಗಳು ಮುಖಾಮುಖಿಯಾಗಿ ಡಿಕ್ಕಿಯಾದ ಕಾರಣ, ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಸಾವನ್ನಪ್ಪಿದ ವ್ಯಕ್ತಿಗಳನ್ನು ಕೊಡಗು ಜಿಲ್ಲೆ ಸೋಮವಾರಪೇಟೆ ಮೂಲದ ೩೫ ವರ್ಷದ ಸುದೀಪ್ , ೩೦ ವರ್ಷದ ಶ್ರೀಜಾ  ಮತ್ತು ೫೫ ವರ್ಷದ ಸಂಗಮ್ಮ  ಎಂದು ಗುರುತಿಸಲಾಗಿದ್ದು, ಕಾರಿನಲ್ಲಿದ್ದ ೧೫ ವರ್ಷದ ಬಾಲಕಿ ಶ್ರೇಯಾ  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು […]

ಹೊಸದಿಲ್ಲಿ: ನಟಿ ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಾಸ್ ಅವರೊಂದಿಗೆ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ಫೋಟೋಗೆ ಸಾಮಾಜಿಕ ತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಗಾಯಕ ನಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಚೆಂದದ ಫೋಟೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಿಯಾಂಕಾ ಚೋಪ್ರಾ ನಿಕ್ ತೊಡೆಯ ಮೇಲೆ ಕುಳಿತು ಕೆನ್ನೆಗೆ ಸಿಹಿ ಮುತ್ತನ್ನು ಪಡೆಯುತ್ತಿದ್ದಾರೆ. ಸಂಭ್ರಮದ ನಗು ಬೀರುತ್ತಿದ್ದಾರೆ. ಜೊತೆಯಲ್ಲಿ ತನ್ನ ನಾಯಿ ಡಯಾನಾವನ್ನು ತನ್ನ ತೋಳುಗಳಲ್ಲಿ ಹಿಡಿದಿದ್ದಾರೆ . ದಂಪತಿಯ ಇನ್ನೆರಡು ನಾಯಿಗಳಾದ […]

ಹಾಲಿವುಡ್: ಜನಪ್ರಿಯ ಮ್ಯಾಟ್ರಿಕ್ಸ್ ಸರಣಿಯ ನಾಲ್ಕನೇ ಅವತರಣಿಕೆ ‘ಮ್ಯಾಟ್ರಿಕ್ಸ್- ರಿಸರೆಕ್ಷನ್ಸ್’ ಸಿನಿಮಾ ಇತ್ತೀಚಿಗಷ್ಟೆ ವಿಶ್ವಾದ್ಯಂತ ತೆರೆ ಕಂಡಿತ್ತು. ಆ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನಟಿಸಿದ್ದರು. ಆ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಇಂಟರ್ನೆಟ್ ನಲ್ಲಿ ಟ್ರೋಲಿಂಗ್ ಗೆ ಒಳಗಾಗಿದ್ದರು. ಈ ಬಗ್ಗೆ ಕಿಡಿಕಾರಿರುವ ಪ್ರಿಯಾಂಕಾ ಚೋಪ್ರಾ ತಾವು ಪಾತ್ರದ ಅವಧಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮಗೆ ಪಾತ್ರದ ತೂಕವಷ್ಟೆ ಮುಖ್ಯ ಎಂದು […]

ಭೋಪಾಲ್: ನಟಿ ಸನ್ನಿ ಲಿಯೋನ್ ಮತ್ತು ಗಾಯಕರಾದ ಶರೀಬ್ ಮತ್ತು ತೋಶಿ ಅವರು ಕ್ಷಮೆಯಾಚಿಸಬೇಕು ಮತ್ತು ಮೂರು ದಿನಗಳ ಒಳಗೆ ತಮ್ಮ ಸಂಗೀತ ವೀಡಿಯೊ ‘ಮಧುಬನ್ ಮೇ ರಾಧಿಕಾ, ಜೈಸೆ ಜಂಗಲ್ ಮೆ ನಾಚೆ ಮೋರ್’ ಹಿಂತೆಗೆದುಕೊಳ್ಳುವಂತೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಭಾನುವಾರ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಸಚಿವರು ಆರೋಪಿಸಿದ್ದು,. “ಕೆಲವು ವಿಧರ್ಮಿಗಳು ನಿರಂತರವಾಗಿ ಹಿಂದೂ […]

ನಟಿ, ಗಾಯಕಿ, ಮಾಜಿ ಬಿಗ್‌ಬಾಸ್ ಸ್ಪರ್ಧಿ ಶೆಹನಾಜ್ ಗಿಲ್‌ ಜೀವನದಲ್ಲಿ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಇದೇ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಅಚಾನಕ್ಕಾಗಿ ಪ್ರಿಯತಮನನ್ನು ಕಳೆದುಕೊಂಡ ಶೆಹನಾಜ್ ಗಿಲ್‌ರ ತಂದೆಯ ಮೇಲೆ ಇದೀಗ ಕೆಲವು ಅಗಂತುಕರು ಗುಂಡಿನ ದಾಳಿ ನಡೆಸಿದ್ದಾರೆ. ಶೆಹನಾಜ್ ಗಿಲ್ ತಂದೆ ಸಂತೋಶ್ ಸಿಂಗ್ ಸುಖ್ ಅವರ ಮೇಲೆ ಶನಿವಾರ ರಾತ್ರಿ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದ್ದು, ಪವಾಡ ಸದೃಶ ರೀತಿಯಲ್ಲಿ ಅವರು ಪಾರಾಗಿದ್ದಾರೆ. ರಾಜಕೀಯದಲ್ಲಿ ಸಕ್ರಿಯರಾಗಿರುವ […]

Advertisement

Wordpress Social Share Plugin powered by Ultimatelysocial