ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯ ವಿವರಿಸಲು ಅಸಾಧ್ಯ. ವಿಪರೀತ ನಿಷ್ಠೆಗೆ ಹೆಸರಾದ ನಾಯಿ ಬೇಷರತ್ತಾಗಿ ತನಗೆ ಅನ್ನ ಹಾಕಿದವರನ್ನು ನೆನಪಿಡುತ್ತದಂತೆ. ಇಂಥದ್ದೇ ಒಂದು ಅತ್ಯಾಪ್ತ ಸುದ್ದಿ ಇಲ್ಲಿದೆ. ಗಾಲಿ ಕುರ್ಚಿಯಲ್ಲಿ ಕುಳಿತ ವಿಶೇಷ ಚೇತನ ಹೊಂದಿದ ಹುಡುಗನನ್ನು ನಾಯಿಯೊಂದು ತನ್ನ ಮುಂಗಾಲುಗಳಿಂದ ದಬ್ಬಿಕೊಂಡು ಹೋಗುವ ವಿಡಿಯೋ ವೈರಲ್ ಆಗಿದೆ. ನ್ಯೂಜಿಲೆಂಡ್ ನ ತಾನಿಯಾ ಬಟ್ಲರ್ ತನ್ನ ಬಾಕ್ಸರ್ ಗೆ ತುರ್ತು ಸಂದರ್ಭದಲ್ಲಿ ಯಾವ ರೀತಿ ಸ್ಪಂದಿಸಬೇಕೆಂದು ತರಬೇತಿ ಕೊಟ್ಟಿದ್ದ […]

ಚಿಕ್ಕಮಗಳೂರು: ಕನ್ನಡ ಸಿನಿಮಾ ನಟ ಜಗ್ಗೇಶ್ ಹಾಗೂ ನಟ ಕೋಮಲ್ ಅವರು ಇಂದು ಚಿಕ್ಕಮಗಳೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಜಗದ್ಗುರುಗಳ ಆಶೀರ್ವಾದವನ್ನು ಪಡೆದರು. ಖಾಸಗಿ ಕಾರ್ಯಕ್ರಮದ ನಿಮಿತ್ತ ಚಿಕ್ಕಮಗಳೂರಿಗೆ ಜಗ್ಗೇಶ್ ಹಾಗೂ ಕೋಮಲ್ ಇಂದು ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡ ನಂತರ ಇದೇ ಸಂದರ್ಭ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೂ ಭೇಟಿ ನೀಡಿ ಗುರುಗಳ ದರ್ಶನವನ್ನು ಪಡೆದುಕೊಂಡರು. ಮಠದಲ್ಲೇ ಕೆಲ ಹೊತ್ತು ತಂಗಿದ್ದು, ಜಗದ್ಗುರುಗಳೊಂದಿಗೆ ಮಾತುಕತೆ ನಡೆಸಿದರು.

ನವದೆಹಲಿ:  ನಮ್ಮ ದೇಶದ ಹೆಸರನ್ನು ಇಂಡಿಯಾ ಬದಲಿಗೆ ಭಾರತ ಎಂದು ಬದಲಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಕೋರ್ಟ್ ಇಂದು ವಜಾಗೊಳಿಸಿದೆ.ಇಂಡಿಯಾಗೆ ಭಾರತ ಎಂಬ ಮತ್ತೊಂದು ಹೆಸರು ಇದೆಯೆಂದು ಭಾರತೀಯ ಸಂವಿಧಾನದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ನ್ಯಾಯಾಲಯದ ಮುಂದೆ ಈ ವಿಷಯವನ್ನು ತರುವ ಅಗತ್ಯವಿಲ್ಲ ಎಂದು ಹೇಳಿ ಸರ್ವೋಚ್ಛ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು. ಭವ್ಯ ಸಂಸ್ಕøತಿ ಹೊಂದಿರುವ ನಮ್ಮ ದೇಶಕ್ಕೆ ಇಂಡಿಯಾ ಎಂಬ ಪರಕೀಯ ಪದದ […]

ಚಿಕ್ಕಬಳ್ಳಾಪುರ: ಜಮಿನು ನೋಂದಣಿ ಮಾಡಲು ೧೨ ಲಕ್ಕ ಬೇಡಿಕೆ ಇಟ್ಟ ಆರ್.ಐ ಮತ್ತು ಗ್ರಾಮಲೆಕ್ಕಿಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ಮೂಲದ ನಾರಾಯಣಮೂರ್ತಿ ಎಂಬುವವರು ಶಿಡ್ಲಘಟ್ಟ ತಾಲ್ಲೂಕಿನ ಕಸಬಾ ಹೋಬಳಿಯ ಮಲ್ಲಿಶೆಟ್ಟಿಪುರ ಗ್ರಾಮದ ಸುಮಾರು ೧೨ ಎಕರೆ ಜಮೀನು ಪಡೆದುಕೊಂಡು ತಮ್ಮ ಹೆಸರಿಗೆ ಖಾತೆ ಬದಲಾಯಿಸಲು ಹೋದಾಗ ಆರ್ ಐ ಮತ್ತು ಗ್ರಾಮಲೆಕ್ಕಿಗ ೧೨ಲಕ್ಷ ರೂ ಬೇಡಿಕೆ ಇಡ್ಡಿದ್ದಾರೆ. ಕೊನೆಗೆ ೭.೫೦ ಲಕ್ಷಕ್ಕೆ ವ್ಯವಹಾರ ಕುದರಿಸಿಕೊಂಡು […]

ಸಾಮಾನ್ಯವಾಗಿ ಪ್ರತಿ ದಿನ ಬೆಳಿಗ್ಗೆ ಮನೆ ಬಾಗಿಲು ತೆರೆಯುತ್ತಿದ್ದಂತೆ ಜಾಗಿಂಗ್ ಹೋಗುವವರೋ, ಪತ್ರಿಕೆ, ಹಾಲು ವಿತರಕರನ್ನು ನೋಡಬಹುದು. ಆದರೆ ಇಲ್ಲೊಬ್ಬ ಮಹಿಳೆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ದಿಗ್ಭ್ರಾಂತರಾಗಿದ್ದಾರೆ. ಏಕೆಂದರೆ ಅವರ ಮನೆಯ ಮುಂಬಾಗಿಲಲ್ಲಿ ಹೋರಾಟದ ಮನೋಭಾವದಲ್ಲಿದ್ದ ಎರಡು ಮೊಸಳೆ ಕಾಣಿಸಿದೆ. ಫ್ಲೋರಿಡಾದ ಸುಸಾನ್ ಎಂಬುವರಿಗೆ ಬೆಳಗ್ಗೆ ೬:೪೫ಕ್ಕೆ ತಮ್ಮ ಮನೆ ಮುಂಭಾಗದ ಬಾಗಿಲು ಬಡಿದ ಶಬ್ದವಾಗಿದೆ. ಅನಿರೀಕ್ಷಿತ ಅತಿಥಿ ಇರಬಹುದೆಂದು ಬಾಗಿಲು ತೆರೆದಾಗ ಸುಮಾರು ಏಳು ಅಡಿ ಉದ್ದದ ಎರಡು […]

ನವದೆಹಲಿ: ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ನಸುಕಿನ ಜಾವ ಅಗ್ನಿದುರಂತ ಸಂಭವಿಸಿ ೧೨೦ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿವೆ. ತುಘಲಕಾಬಾದ್‌ನ ವಾಲ್ಮೀಕಿ ಮೊಹಲ್ಲಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಅಗ್ನಿ ಹೊತ್ತಿ ಉರಿಯಲಾರಂಭಿಸಿದ ಕೂಡಲೇ ಕಳೆದ ಮಧ್ಯರಾತ್ರಿ ೧.೩೦ರ ಹೊತ್ತಿಗೆ ೨೨ ಅಗ್ನಿಶಾಮಕ ಎಂಜಿನ್ ಗಳು ಬಂದು ಬೆಂಕಿಯನ್ನು ನಂದಿಸಿದವು. ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಕೆಲ ದಿನಗಳ ಹಿಂದೆ ಕೂಡ ಇದೇ ಪ್ರದೇಶದಲ್ಲಿ ಬೆಂಕಿ ಹತ್ತಿ ಉರಿತು ೨೫೦ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿದ್ದವು.

ಒಡಿಶಾದ ವಲಸೆ ಕಾರ್ಮಿಕನೊಬ್ಬ ಬೆಂಗಳೂರಿನಿAದ ತನ್ನ ಊರಿಗೆ ತೆರಳುವ ಉದ್ದೇಶದಿಂದ ಪತ್ನಿಯ ಮಂಗಳ ಸೂತ್ರ ಮಾರಾಟ ಮಾಡಿರುವ ಹಣದಲ್ಲಿ ಸೈಕಲ್ ಖರೀದಿಸಿದ್ದಾನೆ. ನಾವು ಹಣವಿಲ್ಲದೆ ಪರದಾಡುತ್ತಿದ್ದಾಗ, ನನ್ನ ಹೆಂಡತಿ ಎರಡು ಬೈಸಿಕಲ್ ಗಳನ್ನು ಖರೀದಿಸಲು ತನ್ನ ಮಂಗಳಸೂತ್ರವನ್ನು ಮಾರಿದಳು. ಬಳಿಕ ಸೈಕಲ್ ಖರೀದಿಸಿ ಬೆಂಗಳೂರಿನಿAದ ಹೊರಟೆವು ಎಂದು ಚಂದನ್ ಹೇಳಿದ್ದಾರೆ. ಎರಡು ತಿಂಗಳಿನಿAದ ಯಾವುದೇ ಸಂಪಾದನೆ ಇರಲಿಲ್ಲ. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದೆವು, ಕೊನೆಯ ಉಪಾಯವಾಗಿ, ತಲಾ ೫,೦೦೦ ರೂ.ಗೆ […]

ನವದೆಹಲಿ: ತಮ್ಮ ಮದುವೆಗೆ ಕುಟುಂಬ ಸದಸ್ಯರ ವಿರೋಧ ಇರುವ ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ನೀಡಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರಿದ ನವ ವಧುವರನಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ. ತಮ್ಮ ಮದುವೆಗೆ ಕುಟುಂಬಸ್ಥರ ವಿರೋಧವಿದ್ದು, ತಮಗೆ ರಕ್ಷಣೆ ಕೊಡಲು ಸೂಚನೆ ನೀಡಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ವೇಳೆ ನ್ಯಾಯಾಧೀಶರು ವಿವಾಹದ ಫೋಟೋ ಗಮನಿಸಿದ ಸಂದರ್ಭದಲ್ಲಿ ಇಬ್ಬರೂ ಮಾಸ್ಕ್ ಧರಿಸಿಲ್ಲ ಎಂಬುದನ್ನು ಪತ್ತೆ […]

ನವದೆಹಲಿ: ಸಮುದ್ರದಲ್ಲಿ ಮುಳುಗುತ್ತಿರುವ ಕಾರನ್ನು ಉಳಿಸಲು ಮಾಲೀಕನೊಬ್ಬ ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಡೈಲಿ ಮೇಲ್ ವರದಿಯ ಪ್ರಕಾರ, ಯುನೈಟೆಡ್ ಕಿಂಗ್‌ಡನ್‌ನ ಲೀ ಡಾಲ್ಬಿ ಆಫ್ ಕೆಂಟ್ ವಿಡಿಯೋವನ್ನು ಚಿತ್ರೀಕರಿಸಿದ್ದು, ವ್ಯಕ್ತಿಯೊಬ್ಬ ಸಮುದ್ರದಲ್ಲಿ ಅರ್ಧ ಮುಳುಗಿರುವ ವೋಕ್ಸ್ವ್ಯಾಗನ್ ಗಾಲ್ಫ್ ಕಾರನ್ನು ಉಳಿಸಿಕೊಳ್ಳವ ಪ್ರಯತ್ನಕ್ಕೆ ಮುಂದಾಗಿರುವುದು ಸೆರೆಯಾಗಿದೆ. ಸಮುದ್ರ ತಟದಲ್ಲಿ ನೀರಿನ ಹತ್ತಿರದಲ್ಲೇ ನಿಲ್ಲಿಸಿದ್ದ ಕಾರನ್ನು ಭಾರಿ ಗಾತ್ರದ ಅಲೆಯೊಂದು ಸಮುದ್ರದೊಳಗೆ ಎಳೆದೊಯ್ಯಿತು. ದುರಾದೃಷ್ಟಕರವೆಂದರೆ ಎಷ್ಟೇ ಪ್ರಯತ್ನ […]

ನವದೆಹಲಿ: ಭಾರತ-ಚೀನಾ ನಡುವೆ ಆಫ್ರಿಕಾದಲ್ಲಿ ಕುತೂಹಲಕಾರಿ ಕದನವೊಂದು ನಡಿತಿದೆ.  ಆಫ್ರಿಕಾ ಖಂಡದಲ್ಲಿನ ಬೈಕ್ ಉದ್ಯಮದಲ್ಲಿ ಈಗ ಎರಡು ಭಾರತೀಯ ಕಂಪನಿಗಳು ಸೇರಿ ಚೀನಾದ ೨೦೦ ಕಂಪನಿಗಳನ್ನು ಸೋಲಿಸಿವೆ. ಬಜಾಜ್ ಆಟೊ, ಟಿವಿಎಸ್ ಆರ್ಭಟಕ್ಕೆ ಬೆಚ್ಚಿಬಿದ್ದ ಚೀನಿ ಕಂಪನಿಗಳು ಒಂದೊAದಾಗಿ ಹಿಂದೆ ಸರಿಯುತ್ತಿವೆ. ೧೦ ವರ್ಷಗಳ ಹಿಂದೆ ಇದ್ದ ೨೦೦ ಕಂಪನಿಗಳು ಈಗ ೪೦ಕ್ಕಿಳಿದಿವೆ. ಅಷ್ಟು ಮಾತ್ರವಲ್ಲ. ಈ ಎರಡು ಭಾರತೀಯ ಕಂಪನಿಗಳೇ ಮಾರುಕಟ್ಟೆಯಲ್ಲಿ ಶೇ.೫೦ರಷ್ಟು ಪಾಲು ಹೊಂದಿವೆ. ೧೦ ವರ್ಷಗಳ […]

Advertisement

Wordpress Social Share Plugin powered by Ultimatelysocial