ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ಪಟ್ಟಣದಲ್ಲಿರುವ ಪುರಸಭೆಯ ಮುಖ್ಯಾಧಿಕಾರಿ ದೇವೆಂದ್ರಪ್ಪ ಹೆಗಡೆ ವಿರುದ್ಧ ಪುರಸಭೆ ಸದಸ್ಯರು ಕೆಂಡ ಮಂಡಲವಾಗಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿಯನ್ನು ಅಧಿಕಾರದಿಂದ ತೆಗೆಯುವಂತೆ ಪ್ರತಿಭಟನೆ ನಡೆಸಿದ್ದಾರೆ. ಇವರಿಂದ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲವೆಂಬ ಗಂಭೀರ ಆರೋಪ ಮತ್ತು ಒಂದು ವರ್ಷವಾದರೂ ಯಾವುದೇ ಸಾಮಾನ್ಯ ಸಭೆಯಾಗಲಿ ತುರ್ತು ಸಭೆಯಾಗಲಿ ಕರೆದಿಲ್ಲ. ಕೂಡಲೇ ಇವರನ್ನು ತೆಗೆದುಹಾಕುವಂತೆ ಪುರಸಭೆಯ ಸರ್ವ ಸದಸ್ಯರ ಆಗ್ರಹ ಮಾಡಿದ್ದಾರೆ. ಒಂದು ವೇಳೆ ಇವರನ್ನು ತೆಗೆದು […]

ಇತ್ತೀಚೆಗಷ್ಟೇ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ನಟಿ, ಸಂಸದೆ ಸುಮಲತಾ ಅಂಬರೀಶ್​ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದ್ದ ಅವರು, ‘ನಾನು ಕರೊನಾದಿಂದ ಗುಣಮುಖ ಆಗಿದ್ದೇನೆ ಎನ್ನುವ ಒಂದು ಸುದ್ದಿ ಹರಿದಾಡುತ್ತಿದೆ. ಆದರೆ, ನಾನು ಸಂಪೂರ್ಣವಾಗಿ ಗುಣಮುಖವಾಗಿರುವುದು, ಕ್ವಾರಂಟೈನ್ ಅವಧಿ ಮುಗಿದು, ಪರೀಕ್ಷೆಯ ಬಳಿಕವೇ ತಿಳಿಯುವುದು. ಸದ್ಯಕ್ಕೆ ಔಷಧಿ ಹಾಗೂ ಸುಶ್ರುಷೆ ಮುಂದುವರೆದಿದೆ. ನಾನು ಗುಣಮುಖ ಆಗಲೆಂದು ನೀವೆಲ್ಲರೂ ಮಾಡಿದ ಆಶೀರ್ವಾದ, ಹಾರೈಕೆಗಳಿಗೆ ಋಣಿ. ಇನ್ನು ಕೆಲವೇ ದಿನಗಳಲ್ಲಿ […]

ಮಧುಗಿರಿ ತಾಲ್ಲೂಕು ಕಚೇರಿಯಲ್ಲಿ ಸಾಲ ನೀಡಿರುವ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ತಹಸೀಲ್ದಾರ್ ಡಾ. ಜಿ. ವಿಶ್ವನಾಥ್ ಅವರು ಇತ್ತೀಚಿಗೆ ಕೋವಿಡ್ 19 ಹರಡುತ್ತಿರುವ ಸಂದರ್ಭದಲ್ಲಿ ಲಾಕ್ ಡೌನ್ ಮಾಡಿರುವ ಹಿನ್ನಲೆಯಲ್ಲಿ ಮಧ್ಯಮ ವರ್ಗದವರು ಹಾಗೂ ಬಡವರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ಸಾಲ ಮರುಪಾವತಿಸಲು ಬಲವಂತ ಮಾಡಿದರೆ ಅವರ ಪರಿಸ್ಥಿತಿ ಏನಾಗಬೇಕು. ಆದ್ದರಿಂದ ಸಂಘ-ಸಂಸ್ಥೆಗಳು ಇವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆರ್ಥಿಕ ಸಂಕಷ್ಟದಲ್ಲಿರುವ ಅವರಿಗೆ ಸಹಾಯ […]

ಕೋಲಾರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ, ಜಿಲ್ಲೆಯಲ್ಲಿ ಒಂದೇ ದಿನ ಜಿಲ್ಲೆಯಲ್ಲಿ 32 ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಜಿಲ್ಲೆಯಲ್ಲಿ ಇದುವರೆಗೂ 437 ಕ್ಕೆ ಏರಿಕೆಯಾಗಿದೆ. ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 9 ಕ್ಕೆ ಏರಿಕೆಯಾಗಿದೆ. ಒದೇ ದಿನದಲ್ಲಿ 13 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದು,  ಇದುವರೆಗೂ 156 ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ.  ಜಿಲ್ಲಾ ಆರೋಗ್ಯ ಇಲಾಖೆಯಿಂದ […]

ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಮಾರ್ಚ್ ತಿಂಗಳಿನಿಂದ ಆರಂಭವಾದ ಲಾಕ್ ಡೌನ್ ಮಧ್ಯಭಾಗದಲ್ಲಿ ಸ್ವಲ್ಪ ಸಮಯ ಸಡಿಲಿಕೆ ನೀಡಿದ್ದರೂ ಮತ್ತೆ ಬೆಂಗಳೂರು ನಗರ ಸೇರಿದಂತೆ ಹಲವೆಡೆ ಲಾಕ್ ಡೌನ್ ಮುಂದುವರಿದಿದೆ.ಸಾಮೂಹಿಕ ಮದುವೆ ಕಾರ್ಯಕ್ರಮಗಳು, ಬೃಹತ್ ಸಂಖ್ಯೆಯಲ್ಲಿ ಮದುವೆಗೆ ಜನ ಸೇರುವುದಕ್ಕೆ ಸರ್ಕಾರ ತಡೆ ನೀಡಿದರೂ ಕೂಡ , ಮಾರ್ಚ್ ನಿಂದ ಜೂನ್ ತಿಂಗಳವರೆಗೆ ಕರ್ನಾಟಕ ಸರ್ಕಾರದ ದಾಖಲೆಗಳ ಪ್ರಕಾರ 40 ಸಾವಿರಕ್ಕೂ ಹೆಚ್ಚು ಮದುವೆಗಳಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಅತಿ ಹೆಚ್ಚು12 […]

ರಾಜ್ಯದಲ್ಲಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ನಿಯಂತ್ರಿಸಲು ಸರ್ಕಾರ ಕೆಲವು ಜಿಲ್ಲೆಗಳಲ್ಲಿ ಒಂದು ವಾರ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಕೆಲವು ಕಡೆ ಸ್ವಲ್ಪ ಗೊಂದಲ ಬಿಟ್ಟರೆ. ಬೇರೆ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ ಹೌದು ಬೆಂಗಳೂರಿನ ದೇವನಹಳ್ಳಿಯಲ್ಲಿ ಲಾಕ್ ಡೌನ್ ಗೆ ಜನರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.ಎಲ್ಲ ರೀತಿಯ ವ್ಯವಹಾರ ಬಂದ್ ಮಾಡಿ ಮತ್ತು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ತಮ್ಮನ್ನು ತಾವೇ […]

ಮೈಸೂರಿನ ಆರ್.ಆರ್.ಗ್ರೂಪ್ಸ್  ಪ್ರತಿವರ್ಷ ಏರ್ಪಡಿಸುವ ಸೌಂದರ್ಯ ಸ್ಪರ್ಧೆಯಲ್ಲಿ ಈ ವರ್ಷದ ಮಿಸೆಸ್ ಕರ್ನಾಟಕ -2020 ಕಿರೀಟವನ್ನು ಸುಳ್ಯದ ಸುಪ್ರೀತ ಕೆ.ಎಸ್ ಅವರು ಗೆದ್ದುಕೊಂಡಿದ್ದಾರೆ. ಜು.11 ರಂದು ಮೈಸೂರಿನ ಕಂಟ್ರಿ ಇನ್ ಹೋಟೆಲ್ ನ ಸಭಾಂಗಣದಲ್ಲಿ ಸ್ಪರ್ಧೆ ನಡೆದಿದ್ದು, ಗೆದ್ದ ಸುಪ್ರೀತಾರವರಿಗೆ ಆರ್.ಆರ್.ಗ್ರೂಪ್ಸ್‌ನ ಎಂ.ಡಿ ರಾಜೇಶ್ ಸಿದ್ಧಮಲ್ಲಪ್ಪವಂಶ ಕಿರೀಟ ತೊಡಿಸಿ, ಕಪ್ ನೀಡಿ ಗೌರವಿಸಿದರು.ಮಿಸೆಸ್ ಕರ್ನಾಟಕ ಆಗಿ ಆಯ್ಕೆಯಾಗಿರುವ ಸುಪ್ರೀತಾರವರು ಸುಳ್ಯ ಬೀರಮಂಗಲ ನಿವಾಸಿ ಕೆ.ವಿ.ಜಿ. ಇಂಜಿನಿಯರಿಂಗ್  ಕಾಲೇಜಿನ ಉಪನ್ಯಾಸಕ ಅಜಿತ್ […]

ನವಿ ಮುಂಬೈನ  ಕ್ವಾರಂಟೈನ್‌  ಕೇಂದ್ರವೊಂದರಲ್ಲಿ 40 ವರ್ಷದ  ವಿವಾಹಿತ  ಮಹಿಳೆ  ಮೇಲೆ  ಅತ್ಯಾಚಾರ ಎಸಗಲಾಗಿದೆ  ಎಂದು  ಮಹಾರಾಷ್ಟ್ರ  ಪೊಲೀಸರು  ತಿಳಿಸಿದ್ದಾರೆ. ಅತ್ಯಾಚಾರಕ್ಕೆ  ಒಳಗಾದ  ಮಹಿಳೆಯು ಪನ್ವೇಲ್‌  ಪೊಲೀಸ್  ಠಾಣೆಯಲ್ಲಿ  ದೂರು  ದಾಖಲಿಸಿದ್ದು, ಆರೋಪಿಯನ್ನು  25 ವರ್ಷದ  ಶುಭಮ್  ಖಾಟು ಎಂದು  ಗುರುತಿಸಲಾಗಿದೆ. ಇಂಡಿಯಾ  ಬುಲ್ಸ್‌ ಹೆಸರಿನ  ಕ್ವಾರಂಟೈನ್‌  ಕೇಂದ್ರದ  ಐದನೇ  ಮಹಡಿಯಲ್ಲಿ ಮಹಿಳೆಯನ್ನು  ಇರಿಸಲಾಗಿತ್ತು.  ಎರಡನೇ  ಮಹಡಿಯಲ್ಲಿ  ಆರೋಪಿ  ಇದ್ದನೆಂದು  ತಿಳಿದುಬಂದಿದೆ.ತಾನು  ವೈದ್ಯನೆಂದು  ಹೇಳಿಕೊಂಡು  ಮಹಿಳೆ  ವಾಸವಿದ್ದ  ಕೋಣೆಯನ್ನು  ಪ್ರವೇಶಿಸಿರುವ […]

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 34,884 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ದೇಶದಲ್ಲಿ ಒಟ್ಟು 10.38 ಲಕ್ಷಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಕೊರೊನಾ ವೈರಸ್ ಗೆ 671 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಮೃತಪಟ್ಟವರ ಸಂಖ್ಯೆ 26,273ಕ್ಕೆ ಏರಿಕೆಯಾಗಿದೆ. 10,38,716 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 6,53,751ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 3,58,692 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಎಂದು ಆರೋಗ್ಯ ಮತ್ತು ಕುಟುಂಬ […]

ಕನ್ನಡದ  ಹಿರಿಯ  ಪೋಷಕ  ನಟ  ಹುಲಿವಾನ್  ಗಂಗಾಧರಯ್ಯ (70)  ನಿನ್ನೆ ರಾತ್ರಿ  ಬೆಂಗಳೂರಿನ  ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ. ಅವರಿಗೆ  ಕೊರೊನಾ  ಪಾಸಿಟಿವ್ ​ ದೃಢಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು. ಕಿರುತೆರೆಯ  ಪ್ರೇಮಲೋಕ  ಧಾರವಾಹಿಯಲ್ಲಿ  ಅವರು  ನಟಿಸ್ತಾ ಇದ್ದರು. ಇತ್ತೀಚೆಗೆ  ಧಾರಾವಾಹಿಯ  ಶೂಟಿಂಗ್​ನಲ್ಲೂ  ಅವರು  ಭಾಗಿಯಾಗಿದ್ದರು. ಹಲವಾರು  ಸಿನಿಮಾ, ಧಾರವಾಹಿಗಳಲ್ಲಿ  ಪೋಷಕ  ಪಾತ್ರಗಳಲ್ಲಿ  ನಟಿಸಿ ತಮ್ಮದೇ  ಆದ  ಛಾಪು  ಮೂಡಿಸಿದ್ದರು. ರಂಗಭೂಮಿ, ಸಿನಿಮಾ, ಧಾರಾವಾಹಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಹುಲಿವನ ಗಂಗಾಧರ್ ತೆಂಗುಬೆಳೆಗಾರರೂ ಆಗಿದ್ದರು.

Advertisement

Wordpress Social Share Plugin powered by Ultimatelysocial