ಪಾಕಿಸ್ತಾನ್ ಸಂಸತ್ ವಿಸರ್ಜನೆ: 3 ತಿಂಗಳಲ್ಲಿ ಚುನಾವಣೆಗೆ ಅಧ್ಯಕ್ಷರ ಸೂಚನೆ!

 

ಇಸ್ಲಾಮಾಬಾದ್: ಇಂದಿನ ಅವಿಶ್ವಾಸ ನಿರ್ಣಯ ಮಂಡನೆಯಾಗದ ನಡುವೆಯೂ ಪಾಕಿಸ್ತಾನ ರಾಜಕೀಯ ಬೆಳವಣಿಗೆಯಲ್ಲಿ ಮಹತ್ವದ ಘಟನೆ ನಡೆದಿದೆ. ಪಾಕಿಸ್ತಾನ್ ಅಧ್ಯಕ್ಷರು, ಅಸೆಂಬ್ಲಿಯನ್ನು ವಿಸರ್ಜನೆ ಮಾಡಿದ್ದು, ಮೂರು ತಿಂಗಳಿನಲ್ಲಿ ಚುನಾವಣೆ ನಡೆಸೋದಕ್ಕೆ ಸೂಚನೆ ನೀಡಿದ್ದಾರೆ.

ಪಾಕಿಸ್ತಾನ್ ರಾಜಕೀಯ ಹೈಡ್ರಾಮಾ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇಂದು ಸಂಸತ್ ನಲ್ಲಿ ಮಂಡನೆಯಾಗಬೇಕಿದ್ದಂತ ಅವಿಶ್ವಾಸ ನಿರ್ಣಯವು ಸಂಸತ್ ಮುಂದೂಡಿಕೆ ಕಾರಣ, ಮುಂದೂಡಲ್ಪಟ್ಟಿದೆ. ಈ ಮೂಲಕ ಪಿಎಂ ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ನಡುವೆ ಪಾಕಿಸ್ತಾನ್ ಅಸೆಂಬ್ಲಿಯನ್ನು ವಿಸರ್ಜಿಸಿ, ಹೊಸದಾಗಿ ಚುನಾವಣೆ ನಡೆಸುವಂತೆ ಅಧ್ಯಕ್ಷರಿಗೆ ಪ್ರಧಾನಿ ಇಮ್ರಾನ್ ಖಾನ್ ಪತ್ರ ಬರೆದಿದ್ದರು. ಈ ಬೆನ್ನಲ್ಲೆ, ಅಸೆಂಬ್ಲಿಯನ್ನು ಅಧ್ಯಕ್ಷರು ವಿಸರ್ಜನೆ ಮಾಡಿದ್ದಾರೆ.

ಈ ಬಗ್ಗೆ ಪಾಕಿಸ್ತಾನ್ ಅಧ್ಯಕ್ಷರಿಗೆ ಪತ್ರ ಬರೆದಿರುವಂತ ಪಿಎಂ ಇಮ್ರಾನ್ ಖಾನ್, ಕೂಡಲೇ ಅಸೆಂಬ್ಲಿಯನ್ನು ವಿಸರ್ಜಿಸಿ, ಹೊಸದಾಗಿ ಚುನಾವಣೆ ನಡೆಸುವಂತೆ ಒತ್ತಾಯಿಸಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಪಾಕ್ ಅಸೆಂಬ್ಲಿಯನ್ನು ಅಧ್ಯಕ್ಷರು ವಿಸರ್ಜನೆ ಮಾಡಿದ್ದು, 3 ತಿಂಗಳೊಳಗಾಗಿ ಚುನಾವಣೆ ನಡೆಸೋದಕ್ಕೆ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಲಾಲ್ ಕಟ್ V/s ಜಟ್ಕಾ ಕಟ್ ವಿವಾದದ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದೇನು?

Sun Apr 3 , 2022
ಉಡುಪಿ : ರಾಜ್ಯದಲ್ಲಿ ಹಲಾಲ್ ಕಟ್ V/s ಜಟ್ಕಾ ಕಟ್ ವಿವಾದದ ಕುರಿತಂತೆ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಹಲಾಲ್- ಜಟ್ಕಾ ಕಟ್ ವಿವಾದವನ್ನು ಕೆಲವು ವ್ಯಕ್ತಿಗಳು ಸೃಷ್ಠಿ ಮಾಡಿ ಸಮಾಜವನ್ನು ಒಡೆಯುವ ಕುತಂತ್ರ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾವ ರೀತಿ ಪೂಜೆ ಮಾಡುತ್ತಾರೆಯೋ ಮಾಡಿಕೊಳ್ಳಲಿ. ಯಾವ ಪದ್ಧತಿ ಇದೆಯೋ ಮಾಡಿಕೊಂಡು ಹೋಗಲಿ. ಮುಸ್ಲಿಮರು ಹಲಾಲ್ ಮೂಲಕ ಮಾಡುವುದಾದರೆ ಮಾಡಲಿ. ಹಿಂದೂಗಳು ಜಟ್ಕಾ […]

Advertisement

Wordpress Social Share Plugin powered by Ultimatelysocial