ಪತ್ನಿಯನ್ನು ಉಸಿರು ಗಟ್ಟಿಸಿ ಹತ್ಯೆ ಮಾಡಿ ಪತಿ ಆತ್ಮಹತ್ಯೆ

ವಿಜಯಪುರ: ಪತ್ನಿಯನ್ನು ಉಸಿರು ಗಟ್ಟಿಸಿ ಹತ್ಯೆ ಮಾಡಿ ಪತಿ ಆತ್ಮಹತ್ಯೆ

ವಿಜಯಪುರ: ಶೀಲ ಶಂಕಿಸಿ ಪತ್ನಿಯನ್ನು ಉಸಿರು ಗಟ್ಟಿಸಿ ಹತ್ಯೆ ಮಾಡಿದ ಪತಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಬೇನಾಳ ಆರ್.ಎಸ್. ಗ್ರಾಮದ ಹೊರ ವಲಯಕ್ಕೆ ಪತ್ನಿಯನ್ನು ಕರೆದೊಯ್ದ ಶಿವಪ್ಪ ಹೊರ ಭಾಗದ ಜಮೀನಿನ ಶೆಡ್ ನಲ್ಲಿ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.

ನಂತರ ಭಯಗೊಂಡು ಜಮೀನಿನ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿಡಗುಂದಿ ತಾಲೂಕಿನ ಬೇನಾಳ ಅರ್.ಎಸ್. ಪುನರ್ವಸತಿ ಕೇಂದ್ರದ ಹುನುಮವ್ವ (38) ಹತ್ಯೆಯಾದ ದುರ್ದೈವಿ. ಶಿವಪ್ಪ ಮನಗೂಳಿ(45 ) ಶೀಲ ಶಂಕಿಸಿ ಪತ್ನಿಯನ್ನು ಉಸಿರು ಗಟ್ಟಿಸಿ ಹತ್ಯೆ ಮಾಡಿದ ಬಳಿಕ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿರುವ ನಿಡಗುಂದಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಿಯಿಂದ ಸಾಕಿದ ಬೆಕ್ಕನ್ನು ಸಾಯಿಸಿದ ನೆರೆಮನೆಯವ

Thu Dec 16 , 2021
ಥಲಾಯಝಾಂ: ಬೆಕ್ಕನ್ನು ಸಾಯಿಸಿದ ಆರೋಪದ ಅಡಿಯಲ್ಲಿ ದಂಪತಿ ಪಕ್ಕದ ಮನೆಯವನ ವಿರುದ್ಧ ದೂರು ದಾಖಲಿಸಿ ಆತನನ್ನು ಜೈಲಿಗಟ್ಟಿದ ಘಟನೆಯು ಕೇರಳದ ವೈಯಕ್ಕೊಂನ ಥಲಾಯಝಾಂನಲ್ಲಿ ನಡೆದಿದೆ. ಸಂಬಂಧಿಕರ ಮನೆಗೆ ತೆರಳಿದ್ದ ರಾಜು ಹಾಗೂ ಸುಜಾತಾ ದಂಪತಿ ವಾಪಸ್​ ಮನೆಗೆ ಮರಳುವ ವೇಳೆಯಲ್ಲಿ ಪ್ರೀತಿಯಿಂದ ಸಾಕಿದ ಬೆಕ್ಕು ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕೂಡಲೇ ಅವರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಕೊಟ್ಟಾಯಂ ಪಶು ಆಸ್ಪತ್ರೆಯಲ್ಲಿ ಬೆಕ್ಕಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೂ ಅದು ಮೃತಪಟ್ಟಿತ್ತು ರಾಜು ಹಾಗೂ ಸುಜಾತಾ […]

Related posts

Advertisement

Wordpress Social Share Plugin powered by Ultimatelysocial