ಜೆಡಿಎಸ್‌ ಸೇರ್ಪಡೆಗೆ ಆಹ್ವಾನ.

ತಿಪಟೂರು:ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ. ಬಿಜೆಪಿಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಟಿಕೆಟ್‌ ಖಚಿತವಾಗಿದ್ದು, ಕಾಂಗ್ರೆಸ್‌ನಿಂದ ಮಾಜಿ‌ ಶಾಸಕ‌ ಕೆ.

ಷಡಕ್ಷರಿ, ನಿವೃತ್ತ ಎಸಿಪಿ ಲೋಕೇಶ್ವರ, ಸಿ.ಬಿ. ಶಶಿಧರ್, ಕೆ.ಟಿ. ಶಾಂತಕುಮಾರ್ ಟಿಕೆಟ್‌ ಆಕಾಂಕ್ಷಿಗಳ ರೇಸ್‌ನಲ್ಲಿದ್ದಾರೆ. ಆದರೆ, ಜೆಡಿಎಸ್ ಸಮರ್ಥ ಅಭ್ಯರ್ಥಿ ಇಲ್ಲದೇ ಹುಡುಕಾಟದಲ್ಲಿದೆ.

ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದಿದ್ದರೆ ಕೆ.ಟಿ. ಶಾಂತಕುಮಾರ್ ಕೈ ಪಾಳಯದಿಂದ ಹೊರಬರುವ ಸಾಧ್ಯತೆ ಹೆಚ್ಚಾಗಿದೆ. ಜೆಡಿಎಸ್ ಇದರ ಪ್ರಯೋಜನ ಪಡೆಯಲು ಕಾದು ಕುಳಿತಿದೆ. ಅವರು ಜೆಡಿಎಸ್‌ ಸೇರ್ಪಡೆಗೊಂಡರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ನಿಶ್ಚಿತ.

ಅದಕ್ಕಾಗಿಯೇ ಸ್ವತಃ ಜೆಡಿಎಸ್ ತಾಲ್ಲೂಕು ಕಾರ್ಯಕರ್ತರು ರತ್ನಗಂಬಳಿ ಹಾಸಿ ಹಲವು ಬಾರಿ ಶಾಂತಕುಮಾರ್‌ ಅವರಿಗೆ ಆಹ್ವಾನ ನೀಡಿದ್ದಾರೆ. ಆದರೆ, ಕಾಂಗ್ರೆಸ್‌ ವರಿಷ್ಠರು ಟಿಕೆಟ್ ನೀಡುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪಕ್ಷ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಎಚ್‌ಡಿಕೆ ಭೇಟಿ: ತಿಪಟೂರು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಸಮರ್ಥ ಅಭ್ಯರ್ಥಿ ಇಲ್ಲದೇ ನಾವಿಕನಿಲ್ಲದ ದೋಣಿಯಂತೆ ಆಗಿರುವ ಜೆಡಿಎಸ್. ಹಾಗಾಗಿ, ಪಕ್ಷದ ಕಾರ್ಯಕರ್ತರು ವರಿಷ್ಠರನ್ನು ಮಾಡಿ ಶಾಂತಕುಮಾರ್ ಅವರನ್ನು ಪಕ್ಷಕ್ಕೆ ಆಹ್ವಾನ ನೀಡುವಂತೆ ಒತ್ತಾಯಿಸಿದ್ದಾರೆ. ಇದರಿಂದ ಕೆಲ ಕಾರ್ಯಕರ್ತರು ಖುಷಿಯಾಗಿದ್ದರೆ ಕೆಲವರಲ್ಲಿ ಅಸಮಾಧಾನವೂ ಇದೆ. ಪಕ್ಷದ ವರಿಷ್ಠರು ನಿರ್ಧಾರ ಮಾಡಿದ ನಂತರದಲ್ಲಿ ಒಪ್ಪುತ್ತೇವೆ ಎಂಬ ನಿಲುವು ಅವರದು.

ಈ ನಡುವೆಯೇ ಗುರುವಾರ ಜೆಡಿಎಸ್‌ ಪದಾಧಿಕಾರಿಗಳು ಕೆ.ಟಿ. ಶಾಂತಕುಮಾರ್ ಅವರನ್ನು ಪಟ್ಟಣದಲ್ಲಿ ಭೇಟಿ ಮಾಡಿ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡುವುದು ಕುತೂಹಲ ಮೂಡಿಸಿದೆ.

‘ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್‌ಗೆ ದುಡಿದಿದ್ದು ಟಿಕೆಟ್ ಸಿಗುವ ಭರವಸೆ ಇದೆ. ಈಗಾಗಲೇ, ತಾಲ್ಲೂಕಿನ ಜನತೆಯ ಆಶೀರ್ವಾದ ಇರುವುದರಿಂದ ಪಕ್ಷ ಬಿಡುವ ಚಿಂತನೆ ಇಲ್ಲ. ಒಂದು ವೇಳೆ ಟಿಕೆಟ್ ದೊರೆಯದಿದ್ದರೆ ಜೆಡಿಎಸ್‌ಗೆ ಹೋಗುತ್ತೇನೆ’ ಎಂದು ಶಾಂತಕುಮಾರ್ ತಿಳಿಸಿದ್ದಾರೆ.

‘ಕಾಂಗ್ರೆಸ್ ಪಕ್ಷದ ಟಿಕೆಟ್ ಕೆ. ಷಡಕ್ಷರಿಗೆ ಖಾತರಿ ಆಗಿದೆ. ಕೆಟಿಎಸ್ ಜೆಡಿಎಸ್ ಸೇರುವುದು ಖಚಿತ. ಈಗಾಗಲೇ, ಕಾರ್ಯಕರ್ತರಲ್ಲಿ ಹುರುಪು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

26 ವರ್ಷಕ್ಕೆ ಈ ಬಾಬಾ ಸಖತ್ ಫೇಮಸ್.

Fri Jan 20 , 2023
  ಮಿರ್ಚಿ ಬಾಬಾ, ಜಿಲೇಬಿ ಬಾಬಾನ ನಂತರ ಇದೀಗ ಉತ್ತರದಲ್ಲಿ ಮತ್ತೊಬ್ಬ ಹೊಸ ಬಾಬಾ ಹೆಸ್ರು ಜೋರಾಗಿ ಸದ್ದಾಗ್ತಿದೆ. ಕೇವಲ 26 ವರ್ಷಕ್ಕೆ ಈ ಬಾಬಾ ಸಖತ್ ಫೇಮಸ್. ದೇಶದ ಟಾಪ್​ಮೋಸ್ಟ್​ ಲೀಡರ್ಸ್​ ಅವರನ್ನ ಹುಡುಕಿಕೊಂಡು ಬರ್ತಾರೆ. ಅವರು ಬೇರೆ ಯಾರು ಅಲ್ಲ. ಮಧ್ಯಪ್ರದೇಶದ ಬಾಗೇಶ್ವರ ಧಾಮದ ಪೀಠಾಧೀಶ್ವರ ಧೀರೇಂದ್ರ ಶಾಸ್ತ್ರಿ ಅಲಿಯಾಸ್ ಬಾಗೇಶ್ವರ್ ಬಾಬಾ. ಬಾಗೇಶ್ವರ್​ ವಿರುದ್ಧ ಮೂಢನಂಬಿಕೆ ಬಿತ್ತುತ್ತಿರೋ ಆರೋಪ..! ಬಾಗೇಶ್ವರ್​ ಬಾಬಾ ಮೇಲೆ ಘನಘೋರ ಆರೋಪ […]

Advertisement

Wordpress Social Share Plugin powered by Ultimatelysocial