ಹಲವಾರು ಸಮಸ್ಯೆಗಳಿಗೆ ಪ್ರಕೃತ್ತಿಯಲ್ಲಿಯೇ ಮದ್ದು ಇರುತ್ತದೆ. ಆದರೆ ನಮಗೆ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲ್ಲ, ಗಂಭೀರ ಸಮಸ್ಯೆಗಳನ್ನೂ ಗುಣಪಡಿಸುವ ಮದ್ದುಗಳಿರುತ್ತದೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮನೆಮದ್ದುಗಳನ್ನು ಮಾಡಲಾಗುತ್ತಿತ್ತುದಾಳಿಂಬೆ ಸಿಪ್ಪೆ ಕಹಿ ಹಾಗೂ ಒಗರು-ಒಗರಾಗಿರುತ್ತದೆ. ಇದು ಊತ ಕಡಿಮೆ ಮಾಡಲು. ಉರಿಯೂತ, ಬೇಧಿ, ರಕ್ತಸ್ರಾವ , ಅಜೀರ್ಣ , ಲಿವರ್ ಆರೋಗ್ಯಕ್ಕೆ ಬಳಸಲಾಗುವುದು. ಇದರ ಸಿಪ್ಪೆ ದಾಳಿಂಬೆ ಬೀಜಗಿಂತ ಪ್ರಯೋಜನಕಾರಿಯಂತೆ, ಇದರಲ್ಲಿ ಆಯಂಟಿಆಕ್ಸಿಡೆಂಟ್ ಅಂಶ ಅಧಿಕವಿರುತ್ತದೆ.ಮೊಡವೆ ನಿವಾರಣೆಗೆ ಕೂಡ ಅತ್ಯುತ್ತಮವಾದ ಮನೆಮದ್ದುಆಯುರ್ವೇದ ಪ್ರಕಾರ ದಾಳಿಂಬೆ ಸಿಪ್ಪೆ ಆಯಂಟಿವೈರಲ್ (ಸೋಂಕುಗಳ ವಿರುದ್ಧ ಹೋರಾಡುವ), ಆಯಂಟಿಬ್ಯಾಕ್ಟಿರಿಯಾ (ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ) , ಆಯಂಟಿಇನ್ಫ್ಲೇಮಟರಿ (ಉರಿಯೂತದ ಸಮಸ್ಯೆ ಕಡಿಮೆ ಮಾಡುವ) ಗುಣವನ್ನು ಹೊಂದಿದೆ. ತುಂಬಾ ಮೊಡವೆ ಸಮಸ್ಯೆ ಇರುವವರು ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ದಿನಾ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆಯ ಬೇಕು, ಹೀಗೆ ಮಾಡುವುದರಿಂದ ಮೊಡವೆ ಕಡಿಮೆಯಾಗುವುದು. ಅಲ್ಲದೆ ಮೊಡವೆ ಕಲೆಗಳು ಕೂಡ ಕಡಿಮೆಯಾಗುವುದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada