ದರ ನಿಗದಿ ಸಲಹಾ ಸಮಿತಿ ಸಭೆಯಲ್ಲಿ ಗಲಾಟೆ.
ಕೆಐಎಡಿಬಿ ಭೂಸ್ವಾಧೀನ ದರ ನಿಗದಿ ಸಲಹಾ ಸಮಿತಿ ಸಭೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಆರ್.ಲತಾ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ.
ಜಮೀನು ನೀಡಲು ರೈತರ ನಡುವೆ ಪರ ವಿರೋಧ ಜಗಳ.
ಪರಸ್ಪರ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪರಿಸ್ಥಿತಿ.
ಸಭೆಯಲ್ಲಿ ಕೆಐಎಡಿಬಿ ವಿಶೇಷ ಡಿಸಿ ದಯಾನಂದ ಬಂಡಾರಿ, ಎಸ್ ಎಲ್ ಓ ಬಾಳಪ್ಪ ಹಂದಗುಂದ ಸೇರಿದಂತೆ ಹಲವರು ಭಾಗಿ.
ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯಲ್ಲಿ 867 ಎಕರೆ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕೆಐಎಡಿಬಿ.
ಅರವನಹಳ್ಳಿ, ದೊಡ್ಡಗೊಲ್ಲಹಳ್ಳಿ, ಚಪ್ಪರದಹಳ್ಳಿ ಹಾಗೂ ಬೈರದೇನಹಳ್ಳಿ ಗ್ರಾಮಗಳ ಜಮೀನು.
ಕೆಐಎಡಿಬಿ ಗೆ ಜಮೀನು ನೀಡುವುದಿಲ್ಲವೆಂದು ಪಟ್ಟುಹಿಡಿದ ರೈತರು.
ಪ್ರಾಣ ಹೋದರು ಸಿದ್ದ ಜಮೀನು ನೀಡುವುದಿಲ್ಲವೆಂದ ರೈತರು.
ಚಪ್ಪರದಕಲ್ಲು ಬಳಿ ನಡೆಯುತ್ತಿರುವ ಸಭೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada