ಪ್ರೇಮಿಗಳ ದಿನದಂದೇ ಪತಿ ಮನೆಯಿಂದ ಮಗಳನ್ನು ಕಿಡ್ನಾಪ್‌ ಮಾಡಿದ ಅಪ್ಪ? ಗಂಡನಿಂದ ದೂರು ದಾಖಲು!

ಬೆಂಗಳೂರು: ಇಂದು ಎಲ್ಲೆಡೆ ಪ್ರೇಮಿಗಳ ದಿನವನ್ನು ಹಲವರು ಭರ್ಜರಿಯಿಂದ ಆಚರಿಸುತ್ತಿದ್ದಾರೆ. ನವದಂಪತಿ ಕೂಡ ಈ ದಿನವನ್ನು ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಇದೇ ದಿನದಂದು ನವದಂಪತಿಯನ್ನು ಯುವತಿಯ ಪಾಲಕರೇ ದೂರ ಮಾಡಿರುವ ಘಟನೆ ನಡೆದಿದ್ದು, ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.

ಬೆಂಗಳೂರಿನ ನಿವಾಸಿಗಳಾದ ನಿಖಿಲ್ ರಾಜ್ ಮತ್ತು ಮಹಿಮಾ ದಂಪತಿ ಪ್ರೇಮಿಗಳ ದಿನದಲ್ಲಿ ಖುಷಿಯಿಂದ ಇರುವಾಗಲೇ ದೂರ ದೂರವಾಗಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಪ್ರೀತಿಸಿ ವಿವಾಹವಾಗಿರುವ ಈ ಜೋಡಿಯನ್ನು ಖುದ್ದು ಮಹಿಮಾ ಅವರ ಪಾಲಕರೇ ಪ್ರತ್ಯೇಕ ಮಾಡಿರುವ ಆರೋಪ ಕೇಳಿಬಂದಿದೆ. ಮಗಳ ಮದುವೆಗೆ ವಿರೋಧ ಒಡ್ಡಿದ್ದ ಹಿನ್ನೆಲೆಯಲ್ಲಿ ಮಹಿಮಾ ಪಾಲಕರೇ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಪತಿ ನಿಖಿಲ್‌ ದೂರಿದ್ದಾರೆ.

ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಇವರು ವಾರದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಪಾಲಕರ ಭಾರಿ ವಿರೋಧವಿತ್ತು. ಇದರ ಹೊರತಾಗಿಯೂ ಮದುವೆಯಾದ ಹಿನ್ನೆಲೆಯಲ್ಲಿ ಮಹಿಮಾ ಪಾಲಕರು ಗಂಡನ ಮನೆಯಿಂದ ಮಗಳನ್ನು ಪ್ರೇಮಿಗಳ ದಿನದಂತೆ ಕಿಡ್ನಾಪ್‌ ಮಾಡಿರುವುದಾಗಿ ಹೇಳಲಾಗುತ್ತಿದೆ.

ಮದುವೆಗೂ ಮುನ್ನ ತನ್ನ ಪಾಲಕರು ಮದುವೆಗೆ ಅಡ್ಡಿ ಪಡಿಸುತ್ತಿರುವುದಾಗಿ ಖುದ್ದು ಮಹಿಮಾ ಅವರೇ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜತೆಗೆ, ತಾವು ಸ್ವಇಚ್ಛೆಯಿಂದ ಮದುವೆಯಾಗಿದ್ದು, ಯಾರ ಬಲವಂತವೂ ಇಲ್ಲ ಎಂದೂ ಠಾಣೆಯಲ್ಲಿ ಹೇಳಿದ್ದರು. ನಂತರ ಇವರ ವಿವಾಹ ನೋಂದಣಿಯನ್ನೂ ಮಾಡಲಾಗಿತ್ತು. ಇದಕ್ಕೂ ಮುನ್ನ ಆಕೆಯ ತಂದೆಯನ್ನು ಪೊಲೀಸರು ಕರೆಸಿ ಮಾತುಕತೆ ನಡೆಸಿದ್ದರು. ಮಗಳು- ಅಳಿಯನಿಗೆ ತೊಂದರೆ ಕೊಡಬಾರದು ಎಂದೂ ಹೇಳಿದ್ದರು.

ಇದರ ನಡುವೆಯೂ ತಮ್ಮ ಪತ್ನಿಯನ್ನು ತಂದೆ ಅಪಹರಿಸಿದ್ದಾರೆ ಎಂದು ಇದೀಗ ಪತಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಮನೆಗೆ ನುಗ್ಗಿ ಮಗಳನ್ನ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

7 ರಾಜ್ಯಗಳ 14 ಮಂದಿಯನ್ನು ಮದ್ವೆಯಾದ ಭೂಪ: ಬಲೆಗೆ ಬಿದ್ದವರೆಲ್ಲಾ ವೈದ್ಯರು, ವಕೀಲರು, ಉನ್ನತ ಅಧಿಕಾರಿಗಳು!

Tue Feb 15 , 2022
(ಒಡಿಶಾ): ಎಷ್ಟೋ ಯುವಕರು ವಯಸ್ಸಾದರೂ ತಮಗೆ ಇನ್ನೂ ಮದ್ವೆಯಾಗಿಲ್ಲ ಎಂಬ ಚಿಂತೆಯಲ್ಲಿ ಇದ್ದಾರೆ. ಎಷ್ಟು ನೋಡಿದರೂ ಸೂಕ್ತ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗು ಅವರದ್ದು. ಆದರೆ ಇಲ್ಲೊಬ್ಬ ಭೂಪ ಒಂದಲ್ಲ… ಎರಡಲ್ಲ 14 ಮದುವೆಯಾಗಿದ್ದಾನೆ. ಅದೂ ಏಳು ಬೇರೆ ಬೇರೆ ರಾಜ್ಯಗಳ ಹೆಣ್ಣುಮಕ್ಕಳನ್ನು. ಅಷ್ಟೇ ಅಲ್ಲ, ಹೀಗೆ ಮದ್ವೆಯಾದವರೆಲ್ಲರೂ ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದವರು! 65 ವರ್ಷ ವಯಸ್ಸಿನ ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಗ್ರಾಮದ ನಿವಾಸಿ ಕಳೆದ 48 ವರ್ಷಗಳಿಂದ […]

Advertisement

Wordpress Social Share Plugin powered by Ultimatelysocial