ಮಾಜಿ-ಹಾಲಿ ಶಾಸಕರ ನಡುವಿನ ಆಣೆ-ಪ್ರಮಾಣಕ್ಕೆ ಕೊನೆಗೂ ಮುಕ್ತಾಯಗೊಂಡಿದೆ.

 

ಶಿವಮೊಗ್ಗ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ   ಮಾಡಿದಂತ ಭ್ರಷ್ಟಾಚಾರ ಆರೋಪ ಕುರಿತಂತೆ ಶಾಸಕ ಹರತಾಳು ಹಾಲಪ್ಪ   ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿಧಿಗೆ ತೆರಳಿ, ತಾವು, ತಮ್ಮ ಕುಟುಂಬ ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಅಂತ ಆಣೆ ಮಾಡಿದ್ದಾರೆ.ಈ ಮೂಲಕ ಮಾಜಿ-ಹಾಲಿ ಶಾಸಕರ ನಡುವಿನ ಆಣೆ-ಪ್ರಮಾಣಕ್ಕೆ ಕೊನೆಗೂ ಮುಕ್ತಾಯಗೊಂಡಿದೆ.ಇಂದು ಬೆಳಿಗ್ಗೆ ಶಾಸಕ ಹರತಾಳು ಹಾಲಪ್ಪ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ, ನಾವು ಯಾವುದೇ ಮರಳು ಲಾರಿ ಮಾಲೀಕರಿಂದ ಕಮೀಷನ್ ಹಾಗೂ ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಿದ್ದಾರೆ.ಇಂದು ಬೆಳಿಗ್ಗೆ ಶಾಸಕ ಹರತಾಳು ಹಾಲಪ್ಪ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ, ನಾವು ಯಾವುದೇ ಮರಳು ಲಾರಿ ಮಾಲೀಕರಿಂದ ಕಮೀಷನ್ ಹಾಗೂ ಹಣ ಪಡೆದಿಲ್ಲವೆಂದು ಪ್ರಮಾಣ ಮಾಡಿದ್ದಾರೆ.ಇನ್ನೂ ಮುಂದುವರೆದು, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾಡಿರುವಂತ ಆರೋಪಗಳ ಬಗ್ಗೆ ಸಾಕ್ಷಿಗಳಿದ್ದರೇ ಲೋಕಾಯುಕ್ತಕ್ಕೆ ಇಲ್ಲವೇ ಎಸಿಬಿಗೆ ದೂರು ನೀಡಲಿ. ಆ ಮೂಲಕ ಕೇಸ್ ದಾಖಲಿಸಲಿ ಎಂದು ಸವಾಲ್ ಹಾಕಿದ್ದಾರೆ.ಇತ್ತ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಆಣೆ-ಪ್ರಮಾಣಕ್ಕಾಗಿ ಧರ್ಮಸ್ಥಳಕ್ಕೆ ತೆರಳಿದ್ದು, ಶಾಸಕ ಹರತಾಳು ಹಾಲಪ್ಪ ಕುರಿತಂತೆ ಮಾಡಿದಂತ ಆರೋಪದ ಬಗ್ಗೆ ಏನ್ ಆಣೆ-ಪ್ರಮಾಣ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಈ ಮೂಲಕ ಮಾಜಿ-ಹಾಲಿಗಳ ಆಣೆ-ಪ್ರಮಾಣ ಮುಕ್ತಾಯವಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಚಕುಲ: ಸೇವಕಿಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಐಪಿಎಸ್ ಅಧಿಕಾರಿಯ ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ

Sat Feb 12 , 2022
  ಪಂಚಕುಲದಲ್ಲಿರುವ ಹರಿಯಾಣ ಪೊಲೀಸ್ ಪ್ರಧಾನ ಕಛೇರಿಯಲ್ಲಿ ನಿಯೋಜಿತರಾಗಿರುವ ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯೊಬ್ಬರ ಪತ್ನಿ, ತಮ್ಮ ಮನೆಗೆಲಸದವರಿಗೆ ಚಿತ್ರಹಿಂಸೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ. 22 ವರ್ಷ ವಯಸ್ಸಿನ ದೂರುದಾರರು ಅಧಿಕಾರಿಯ ಪತ್ನಿಯ ಮೇಲೆ ಹಲ್ಲೆ ನಡೆಸಿ ಪಂಚಕುಲದ ನಿವಾಸದಲ್ಲಿ ಬಂಧಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಸ್ಸಾಂ ಮೂಲದ ಮಹಿಳೆ, 2021 ರ ಮಾರ್ಚ್‌ನಲ್ಲಿ ಐಪಿಎಸ್ ಅಧಿಕಾರಿ ರಾಜೇಶ್ ಕಾಲಿಯಾ ಅವರ ಪತ್ನಿ ಮನಿಶಾ ಅವರು ₹ 20,000 […]

Advertisement

Wordpress Social Share Plugin powered by Ultimatelysocial