ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ವಾರ್ಡ್ ನಂ 3 ಗಿರಿಜಾಶಂಕರ್ ಕಾಲೊನಿಯ ನಿವಾಸಿಗಳಿಗೆ ಸರಿಯಾದ ಕುಡಿಯಲು ನೀರು ಇಲ್ಲ ಹಾಗೂ ಶೌಚಾಲಯ .ರಸ್ತೆ ಚರಂಡಿ . ಎಲ್ಲಾ ಸೌಕರ್ಯಗಳು ಕಲ್ಪಿಸಿಕೊಡುವಲ್ಲಿ ವಿಫಲವಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ವಿರುದ್ಧ ಅಲ್ಲಿನ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ ಮುಂದಿನ ದಿನಗಳಲ್ಲಿಯಾದರೂ ಸರಿಯಾಗಿ ಸೌಕರ್ಯಗಳನ್ನು ಕಲ್ಪಿಸಿ ಕೊಡುವರೇ ಎಂದು ಕಾದು ನೋಡಬೇಕು ಎಂದು ತಿಳಿಸಿದರು .
ತದನಂತರ ಮಾತನಾಡಿದ ಸ್ಥಳೀಯ ನಿವಾಸಿ ನಾವು ಶುದ್ಧವಾದ ಕುಡಿಯುವ ನೀರು ತರಬೇಕೆಂದರೆ 1ಕಿಲೊಮೀಟರ್ ಆಚೆ ಹೋಗಿ ತರುವ ಪರಿಸ್ಥಿತಿ ಎದುರಾಗಿದ್ದು ಪೈಪ್ ಗಳನ್ನು ಅಳವಡಿಸಿ 3 ತಿಂಗಳು ಗತಿಸಿದರೂ ಇನ್ನೂ ನಮಗೆ ನೀರು ಕೊಡದ ಪಟ್ಟಣ ಪಂಚಾಯಿತಿ ಮಕ್ಕಳು ನಾವು ಸೇರಿ 1ಕಿಲೋ ಮೀಟರ್ ನಿಂದ ನೀರು ತಂದು ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: