ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಹೆಣ ಹೂಣಲು ಜಾಗವಿಲ್ಲ ಗ್ರಾಮವಿದು
ರಾಯಚೂರು ಜಿಲ್ಲಾಡಳಿತದ ದಿವ್ಯ ನಿರ್ಲಕ್ಷಜಾಗ ನೀಡುವಂತೆ ಮಾನ್ವಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಮಾನ್ವಿ ತಾಲೂಕಿನ ಕೋಳಿಕ್ಯಾಂಪ್ ನಿವಾಸಿಗಳಿಂದ ಮುತ್ತಿಗೆಹೆಣ ಹೂಣಲು ಕಂಡವರ ಕೈಕಾಲು ಹಿಡಿಯಬೇಕಾದ ಪರಿಸ್ಥಿತಿ ಇದು ಕಂದಾಯ ಕಚೇರಿಗೆ ಹೆಣ ತಂದು ಹೂಳುತ್ತೇವೆಂದು ಎಚ್ಚರಿಕೆ ಶಾಸಕ ರಾಜಾ ವೆಂಕಟಪ್ಪನಾಯಕಗೆ ಮನವಿ ಸಲ್ಲಿಸಿದರು ಪ್ರಯೋಜನವಿಲ್ಲ ಊರು ಅಂದ ಮೇಲೆ ಸುಡುಗಾಡು ಇರಬೇಕು. ಆದರೆ ಈ ಗ್ರಾಮದಲ್ಲಿ ಸುಡುಗಾಡೆ ಇಲ್ಲ, ಅರೆರೆ ಅದೆಲ್ಲಿ ಅಂತೀರಾ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿಕ್ಯಾಂಪ್ ಗ್ರಾಮದಲ್ಲಿ ಸುಡುಗಾಡು ಇಲ್ಲವಾಗಿದೆ.ಈ ಗ್ರಾಮದಲ್ಲಿ ಯಾರಾದರು ಸತ್ತರೆ ಕಾಲುವೆ ಪಕ್ಕ ಹಾಗೂ ಕಂಡವರ ಜಮೀನನ್ನು ಬೇಡಿಕೊಂಡು ಹೆಣ ಹೂಳಬೇಕಾಗಿದೆ. ರಾಯಚೂರು ಜಿಲ್ಲಾಡಳಿತಕ್ಕೆ ಹಾಗೂ ಶಾಸಕ ರಾಜಾ ವೆಂಕಟಪ್ಪನಾಯಕ ಅವರಿಗೆ ಮನವಿ ಸಲ್ಲಿಸಿದರು ಸಹ ಪ್ರಯೋಜನ ಇಲ್ಲವಾಗಿದೆ. ನಿನ್ನೆ ತಾನೆ ಒಬ್ಬರು ಈ ಗ್ರಾಮದಲ್ಲಿ ತೀರಿಕೊಂಡಿದ್ದರು, ಹೀಗಾಗಿ ಹೆಣ ಹೂಣಲು ಗ್ರಾಮಸ್ಥರು ಹೆಣಗಾಡಿದ್ದಾರೆ. ಆದರೆ ಇದನ್ನು ಮನಗಂಡ ಕೋಳಿಕ್ಯಾಂಪ್ ನಿವಾಸಿಗಳು ರೊಚ್ಚಿಗೆದ್ದು ಮಾನ್ವಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ನಮಗೆ ಸುಡುಗಾಡು ಜಾಗ ನೀಡಿ ಎಂದು ಆಕ್ರೋಶ ಭರಿತರಾಗಿ ಮುತ್ತಿಗೆ ಹಾಕಿದ್ದಾರೆ. ಈ ಗ್ರಾಮಸ್ಥರಿಗೆ ಸುಎಚ್ಚರಿಸಿದರು.ಇಲ್ಲವೆಂದಾದರೆ ಇಲ್ಲಿನ ಶಾಸಕ ರಾಜಾ ವೆಂಕಟಪ್ಪನಾಯಕ ಹಾಗೂ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಏನು ಮಾಡುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಶಾಶ್ವತವಾಗಿ ನಮ್ಮ ಗ್ರಾಮಕ್ಕೆ ಸುಡುಗಾಡು ವ್ಯವಸ್ಥೆಯ ಜಾಗ ಮಾಡಿಕೊಳ್ಳಬೇಕು ಒಂದು ವೇಳೆ ನಿರ್ಲಕ್ಷ ಆದಲ್ಲಿ ಜಿಲ್ಲಾಡಳಿತದ ಮುಂದೆ ಹೆಣ ಇಟ್ಟುಕೊಂಡು ಪ್ರತಿಭಟನೆ ಮಾಡಬೇಕಾಗುತ್ತದೆ.
https://play.google.com/store/apps/details?id=com.speed.newskannada