ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 2023-24ರ ಬಜೆಟ್ ಅನ್ನು ಇಂದು ಮಂಡಿಸಬೇಕಿತ್ತು. ಆದರೆ ವಿಧಾನಸಭೆಯಲ್ಲಿ ಹಿಂದಿನ ಬಜೆಟ್ ಅನ್ನು ಓದಿ ನಗೆಪಾಟಲಿಗೀಡಾಗಿದ್ದಾರೆ.
ತಕ್ಷಣವೇ ಸಚಿವ ಮಹೇಶ್ ಜೋಶಿ ಗೆಹ್ಲೋಟ್ರನ್ನು ಮಧ್ಯದಲ್ಲೇ ತಡೆದರು, ಇದರಿಂದ ಸನದಲ್ಲಿ ಭಾರಿ ಕೋಲಾಹಲ ಉಂಟಾಯಿತು ಮತ್ತು ಮಂಡನೆಯನ್ನು ಮುಂದೂಡಬೇಕೆಂದು ಒತ್ತಾಯಿಸಿತು.
ಗೆಹ್ಲೋಟ್ ಅವರು ಆರಂಭದಲ್ಲಿ ಸುಮಾರು 7 ನಿಮಿಷಗಳ ಕಾಲ ಬಜೆಟ್ ಓದಿದರು, ಆಗ ಹಿಂದೆ ಕುಳಿತಿದ್ದ ಸಚಿವರು ಅವರ ಹಿಂದೆ ಬಂದು ಕಿವಿಯಲ್ಲಿ ಬಜೆಟ್ ಮಂಡನೆ ನಿಲ್ಲಿಸುವಂತೆ ಹೇಳಿದರು. ತದನಂತರ ಸಿಎಂ ದಿನಾಂಕವನ್ನು ಗಮನಿಸಿ ತಬ್ಬಿಬ್ಬಾಗಿದ್ದಾರೆ. ನಂತರ ಅವರೇ ನಗಲು ಪ್ರಾರಂಭಿಸಿದರು. ಬಜೆಟ್ ಸೋರಿಕೆಯಾಗಿದೆ ಎಂದು ಈಗಾಗಲೇ ದಾಳಿ ನಡೆಸುತ್ತಿರುವ ಬಿಜೆಪಿ ಗದ್ದಲವನ್ನು ತೀವ್ರಗೊಳಿಸಿದರು. ಹಲವು ಬಾರಿ ಮನವಿ ಮಾಡಿದರೂ ಗದ್ದಲ ನಿಲ್ಲದ ಕಾರಣ ಕಲಾಪವನ್ನು ಅರ್ಧ ಗಂಟೆ ಮುಂದೂಡಲಾಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada