ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 2023-24ರ ಬಜೆಟ್‌ ಅನ್ನು ಇಂದು ಮಂಡಿಸಬೇಕಿತ್ತು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 2023-24ರ ಬಜೆಟ್‌ ಅನ್ನು ಇಂದು ಮಂಡಿಸಬೇಕಿತ್ತು. ಆದರೆ ವಿಧಾನಸಭೆಯಲ್ಲಿ ಹಿಂದಿನ ಬಜೆಟ್‌ ಅನ್ನು ಓದಿ ನಗೆಪಾಟಲಿಗೀಡಾಗಿದ್ದಾರೆ.

ತಕ್ಷಣವೇ ಸಚಿವ ಮಹೇಶ್ ಜೋಶಿ ಗೆಹ್ಲೋಟ್​ರನ್ನು ಮಧ್ಯದಲ್ಲೇ ತಡೆದರು, ಇದರಿಂದ ಸನದಲ್ಲಿ ಭಾರಿ ಕೋಲಾಹಲ ಉಂಟಾಯಿತು ಮತ್ತು ಮಂಡನೆಯನ್ನು ಮುಂದೂಡಬೇಕೆಂದು ಒತ್ತಾಯಿಸಿತು.

ಗೆಹ್ಲೋಟ್‌ ಅವರು ಆರಂಭದಲ್ಲಿ ಸುಮಾರು 7 ನಿಮಿಷಗಳ ಕಾಲ ಬಜೆಟ್‌ ಓದಿದರು, ಆಗ ಹಿಂದೆ ಕುಳಿತಿದ್ದ ಸಚಿವರು ಅವರ ಹಿಂದೆ ಬಂದು ಕಿವಿಯಲ್ಲಿ ಬಜೆಟ್​ ಮಂಡನೆ ನಿಲ್ಲಿಸುವಂತೆ ಹೇಳಿದರು. ತದನಂತರ ಸಿಎಂ ದಿನಾಂಕವನ್ನು ಗಮನಿಸಿ ತಬ್ಬಿಬ್ಬಾಗಿದ್ದಾರೆ. ನಂತರ ಅವರೇ ನಗಲು ಪ್ರಾರಂಭಿಸಿದರು. ಬಜೆಟ್​ ಸೋರಿಕೆಯಾಗಿದೆ ಎಂದು ಈಗಾಗಲೇ ದಾಳಿ ನಡೆಸುತ್ತಿರುವ ಬಿಜೆಪಿ ಗದ್ದಲವನ್ನು ತೀವ್ರಗೊಳಿಸಿದರು. ಹಲವು ಬಾರಿ ಮನವಿ ಮಾಡಿದರೂ ಗದ್ದಲ ನಿಲ್ಲದ ಕಾರಣ ಕಲಾಪವನ್ನು ಅರ್ಧ ಗಂಟೆ ಮುಂದೂಡಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ.

Fri Feb 10 , 2023
ಕೋತಿಯನ್ನು ಅತ್ಯಂತ ಚೇಷ್ಟೆಯ ಪ್ರಾಣಿ ಎಂದು ಪರಿಗಣಿಸಲಾಗಿದೆ. ಪ್ರತಿ ಸಂದರ್ಭದಲ್ಲೂ ಕಿಡಿಗೇಡಿತನ ಮಾಡಲು ಕೋತಿಗಳು ಒಂದಲ್ಲಾ ಒಂದು ಮಾರ್ಗ ಕಂಡುಕೊಳ್ಳುತ್ತವೆ. ಬೇರೆ ಪ್ರಾಣಿಗೆ ತೊಂದರೆ ಕೊಡುವುದು, ಯಾರಿಗಾದರೂ ಕಪಾಳಮೋಕ್ಷ ಮಾಡುವುದು, ಕೋತಿಗಳು ಇಂತಹ ಚೇಷ್ಟೆಯ ಕೆಲಸಗಳನ್ನು ಮಾಡುತ್ತವೆ. ಕೋತಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಕೋತಿ ಪಾತ್ರ ತೊಳೆಯುತ್ತಿರುವುದನ್ನು ಕಾಣಬಹುದು. ಒಬ್ಬ ಮಹಿಳೆ ಬಂದು ಕೋತಿ ಮತ್ತಷ್ಟು ಪಾತ್ರೆಗಳನ್ನು ತೊಳೆಯಲು ನೀಡುತ್ತಾಳೆ. ಮಂಗ ಕೂಡ ಸುಮ್ಮನೆ ಈ […]

Advertisement

Wordpress Social Share Plugin powered by Ultimatelysocial