ರಾಜ್ಯ ಸರ್ಕಾರದಿಂದ ಬಜರಂಗದಳದ ಕಾರ್ಯಕರ್ತ ‘ಹರ್ಷ ಕುಟುಂಬ’ಕ್ಕೆ ’25 ಲಕ್ಷ ಪರಿಹಾರ’ ಘೋಷಣೆ

ಬೆಂಗಳೂರು: ಫೆ.20ರಂದು ಹತ್ಯೆಗೀಡಾದಂತ ಬಜರಂಗದಳದ ಕಾರ್ಯಕರ್ತ ಹರ್ಷ ( Harsha Murder Case ) ಅವರ ಕುಟುಂಬಸ್ಥರಿಗೆ, ರಾಜ್ಯ ಸರ್ಕಾರ ಇದೀಗ 25 ಲಕ್ಷ ಪರಿಹಾರವನ್ನು ಘೋಷಿಸಿದೆ.ಈ ಕುರಿತಂತೆ ಮಾಹಿತಿ ನೀಡಿದಂತ ಸಚಿವ ಈಶ್ವರಪ್ಪ ( Minister KS Eshwarappa ) ಅವರು, ಶಿವಮೊಗ್ಗ ನಗರದಲ್ಲಿ ಹತ್ಯೆಗೀಡಾದಂತ ಹರ್ಷ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರವನ್ನು ಘೋಷಿಸಿದೆ.ಮಾರ್ಚ್ 6ರಂದು ಹರ್ಷ ಮನೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಾನು ಹೋಗಿ ಪರಿಹಾರ ನೀಡುವುದಾಗಿ ತಿಳಿಸಿದರು.ಅಂದಹಾಗೇ ಹರ್ಷ ಹತ್ಯೆಯ ಬಳಿಕ, ಉದ್ವಿಗ್ನ ಸ್ಥಿತಿ ಶಿವಮೊಗ್ಗ ನಗರದಲ್ಲಿ ಉಂಟಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಶಾಲಾ-ಕಾಲೇಜು ಬಂದ್ ಕೂಡ ಮಾಡಲಾಗಿತ್ತು. ಈ ಬಳಿಕ ಶಾಲಾ-ಕಾಲೇಜುಗಳನ್ನು ಪುನರಾರಂಭಿಸಲಾಗಿತ್ತು. ಇದೀಗ ನಗರ ಸಹಜ ಸ್ಥಿತಿಗೆ ತಲುಪಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಸೋಲಿಸಲು ಮುರುಗೇಶ್ ನಿರಾಣಿ 2 ಕೋಟಿ ರೂ. ಖರ್ಚು ಮಾಡಿದ್ದಾರೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Thu Mar 3 , 2022
ವಿಜಯಪುರ : ಸಚಿವ ಮುರುಗೇಶ್ ನಿರಾಣಿ ಅವರು ನನ್ನನ್ನು ಸೋಲಿಸಲು ಬರೋಬ್ಬರಿ 2 ಕೋಟಿ ರೂ.ಖರ್ಚು ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸಚಿವ ಮುರುಗೇಶ್ ನಿರಾಣಿ 2 ಕೋಟಿ ರೂ.ಖರ್ಚು ಮಾಡಿದ್ದಾರೆ. ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ ಅವರನ್ನು ಕ್ಷೇತ್ರದಿಂದ ನಿಲ್ಲಿಸಿ ಎರಡು ಕೋಟಿ ಹಣ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.ಮುರುಗೇಶ್ ನಿರಾಣಿ ಅವರು […]

Advertisement

Wordpress Social Share Plugin powered by Ultimatelysocial