ರೈತ ದಿನದಂದು ಶ್ರೀಮಂತಾ ಟೀಸರ್ ಲಾಂಚ್‌

ಸೋನು ಸೂದ್‌ ಹೀರೋ ಆಗಿರೋ ಮೊದಲ ಸಿನಿಮಾ ಟ್ರೇಲರ್‌ ಲಾಂಚ್‌
ಶ್ರೀಮಂತ ಟ್ರೇಲರ್‌ ಲಾಂಚ್‌ ಮಾಡ್ತಿದ್ದಾರೆ ಸೋನು ಸೂದ್‌
ಹೀರೋ ಆಗಿ ಕನ್ನಡದಿಂದ ಲಾಂಚ್‌ ಆಗ್ತಿರೋ ಸೋನು ಸೂದ್‌
ರೈತನಾಗಿ ತೆರೆಗೆ ಬರ್ತಿರೋ ಶ್ರೀಮಂತ ಟ್ರೇಲರ್‌ ರೈತರ ದಿನದಂದು ಲಾಂಚ್‌ಕನ್ನಡ ಸೇರಿದಂತೆ ಭಾರತದ ಸಾಕಷ್ಟು ಭಾಷೆಗಳಲ್ಲಿ ನಟಿಸಿ, ಎಲ್ಲಾ ಭಾಷಿಕರ ನೆಚ್ಚಿನ ನಟ, ಹೃದಯವಂತ ನಟ ಸೋನು ಸೂದ್‌ ಮೊದಲ ಬಾರಿಗೆ ನಾಯಕ ನಟನಾಗಿ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಸೋನು ಸೂದ್‌ ನಾಯಕ ನಟನಾಗಿ ಕನ್ನಡದಲ್ಲಿ ನಟಿಸುತ್ತಿರೋ ಸಿನಿಮಾ ʻಶ್ರೀಮಂತʼ. ನಾದಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆ ಮಾಡ್ತಿರೋ ಈ ಸಿನಿಮಾದಲ್ಲಿ, ರೈತನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಸೋನು ಸೂದ್‌. ಇದೇ ಡಿ.23ರಂದು ರಾಷ್ಟ್ರೀಯ ರೈತರ ದಿನದ ಅಂಗವಾಗಿ ʻಶ್ರೀಮಂತʼ ಸಿನಿಮಾದ ಟ್ರೇಲರ್‌ ಲಾಂಚ್‌ ಆಗ್ತಾ ಇದೆ. ʻಶ್ರೀಮಂತʼ ಸಿನಿಮಾದ ಟ್ರೇಲರ್‌ ಲಾಂಚ್‌ ಮಾಡಲಿದ್ದಾರೆ ಸೋನು ಸೂದ್‌. ಈ ಚಿತ್ರದಲ್ಲಿ ಸೋನು ಸೂದ್‌ಗೆ ನಾಯಕಿಯರಾಗಿ ವೈಷ್ಣವಿ ಪಟ್ಟವರ್ಧನ್‌ ಹಾಗೂ ವೈಷ್ಣವಿ ಚಂದ್ರನ್‌ ನಟಿಸಿದ್ದಾರೆ. ಹಾಸನ್‌ ರಮೇಶ್‌ ನಿರ್ದೇಶನ ಮಾಡಿರೋ ಸಿನಿಮಾದಲ್ಲಿ 9 ಹಾಡುಗಳಿದ್ದು, ಈಗಾಗ್ಲೆ ರಿಲೀಸ್‌ ಆಗಿರೋ ಹಂಸಲೇಖ ಸಾಹಿತ್ಯ ಹಾಗೂ ಸಂಗೀತವಿದ್ದ, ಎಸ್‌.ಪಿ ಬಾಲಸುಬ್ರಹ್ಮಣ್ಯಂ ಹಾಡಿದ ಕೊನೆಯ ಹಾಡು ರಿಲೀಸ್‌ ಆಗಿ ಈಗಾಗ್ಲೆ ವೈರಲ್‌ ಆಗಿದೆ. ಸಿನಿಮಾ ಶೀಘ್ರದಲ್ಲೇ ರಿಲೀಸ್‌ ಆಗ್ತಾ ಇದ್ದು. ರೈತರ ದಿನದ ಅಂಗವಾಗಿ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡ್ತಿದೆ ಸಿನಿಮಾ ಟೀಮ್‌.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಗದಗ ಜಿಲ್ಲೆ.

Tue Dec 20 , 2022
ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಗದಗ ಜಿಲ್ಲೆ. ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬದು ನಿರ್ಮಾಣ ಕಾಮಗಾರಿಗೆ ಬಂದಂತ ಜನರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು ಹಾಗೂ ಜಾಗೃತಿ ಕಾರ್ಯಕ್ರಮ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಬಟ್ಟೂರ ಗ್ರಾಮ ಪಂಚಾಯತಿಯ ಅಧ್ಯಕ್ಷರು. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು. ಗ್ರಾಮ ಪಂಚಾಯತಿ ಸದಸ್ಯರು. BFT ಸಿಬ್ಬಂದಿ ವರ್ಗದವರು. ಕಾಯಕ ಮಿತ್ರದವರು […]

Advertisement

Wordpress Social Share Plugin powered by Ultimatelysocial