ಕೊನೆಗೂ ನಿರ್ದೇಶಕ, ನಟ ರಿಷಬ್ ಶೆಟ್ಟಿ ‘ಕಾಂತಾರ’ ಗುಂಗಿನಿಂದ ಹೊರಬಂದಿದ್ದಾರೆ. ನಾಲ್ಕೈದು ತಿಂಗಳಿನಿಂದ ಸಿನಿಮಾ ಪ್ರಚಾರ, ರಿಲೀಸ್, ವಿಜಯಯಾತ್ರೆ ಅಂತೆಲ್ಲಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಶೆಟ್ರು ಬಿಡುವಯ ಮಾಡಿಕೊಂಡು ಫ್ಯಾಮಿಲಿ ಸಮೇತ ದುಬೈಗೆ ಹಾರಿದ್ದಾರೆ.’ಕಾಂತಾರ’ ಸಕ್ಸಸ್ ನಂತರ ಹೋದಲ್ಲಿ ಬಂದಲ್ಲಿ ವಾಟ್ ನೆಕ್ಸ್ಟ್? ಯಾವಾಗ ಹೊಸ ಸಿನಿಮಾ ಶುರು? ಏನ್ ಕಥೆ? ಅನ್ನುವ ಪ್ರಶ್ನೆಗಳು ಎದುರಾಗುತ್ತಲೇ ಇತ್ತು. ಆಗ ರಿಷಬ್ ಶೆಟ್ಟಿ ಕೊಡುತ್ತಿದ್ದ ಉತ್ತರ ಒಂದೇ, ಕೊಂಚ ಬಿಡುವು ಬೇಕು. ಫ್ಯಾಮಿಲಿ ಜೊತೆ ಒಂದೆರಡು ತಿಂಗಳು ಕಾಲ ಕಳೆಯಬೇಕು. ಕೊಂಚ ರಿಲ್ಯಾಕ್ಸ್ ಮಾಡಿ ನಂತರ ಮುಂದಿನ ಪ್ರಾಜೆಕ್ಟ್, ಕಥೆ ಬಗ್ಗೆ ಯೋಚಿಸುತ್ತೇನೆ ಎಂದಿದ್ದರು. ಹೇಳಿದಂತೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಡುತ್ತಿದ್ದಾರೆ. ಪತ್ನಿ, ಮಕ್ಕಳ ಸಮೇತ ದುಬೈನಲ್ಲಿ ಎಂಜಾಯ್ ಮಾಡ್ತಿದ್ದಾರೆ.
https://play.google.com/store/apps/details?id=com.speed.newskannada