ದುಬೈನಲ್ಲಿ ರಿಷಬ್ ಶೆಟ್ಟಿ ಫ್ಯಾಮಿಲಿ ಸಾಹಸ, ಸಂಭ್ರಮ.

ಕೊನೆಗೂ ನಿರ್ದೇಶಕ, ನಟ ರಿಷಬ್ ಶೆಟ್ಟಿ ‘ಕಾಂತಾರ’ ಗುಂಗಿನಿಂದ ಹೊರಬಂದಿದ್ದಾರೆ. ನಾಲ್ಕೈದು ತಿಂಗಳಿನಿಂದ ಸಿನಿಮಾ ಪ್ರಚಾರ, ರಿಲೀಸ್, ವಿಜಯಯಾತ್ರೆ ಅಂತೆಲ್ಲಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಶೆಟ್ರು ಬಿಡುವಯ ಮಾಡಿಕೊಂಡು ಫ್ಯಾಮಿಲಿ ಸಮೇತ ದುಬೈಗೆ ಹಾರಿದ್ದಾರೆ.’ಕಾಂತಾರ’ ಸಕ್ಸಸ್ ನಂತರ ಹೋದಲ್ಲಿ ಬಂದಲ್ಲಿ ವಾಟ್ ನೆಕ್ಸ್ಟ್? ಯಾವಾಗ ಹೊಸ ಸಿನಿಮಾ ಶುರು? ಏನ್ ಕಥೆ? ಅನ್ನುವ ಪ್ರಶ್ನೆಗಳು ಎದುರಾಗುತ್ತಲೇ ಇತ್ತು. ಆಗ ರಿಷಬ್ ಶೆಟ್ಟಿ ಕೊಡುತ್ತಿದ್ದ ಉತ್ತರ ಒಂದೇ, ಕೊಂಚ ಬಿಡುವು ಬೇಕು. ಫ್ಯಾಮಿಲಿ ಜೊತೆ ಒಂದೆರಡು ತಿಂಗಳು ಕಾಲ ಕಳೆಯಬೇಕು. ಕೊಂಚ ರಿಲ್ಯಾಕ್ಸ್ ಮಾಡಿ ನಂತರ ಮುಂದಿನ ಪ್ರಾಜೆಕ್ಟ್, ಕಥೆ ಬಗ್ಗೆ ಯೋಚಿಸುತ್ತೇನೆ ಎಂದಿದ್ದರು. ಹೇಳಿದಂತೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಡುತ್ತಿದ್ದಾರೆ. ಪತ್ನಿ, ಮಕ್ಕಳ ಸಮೇತ ದುಬೈನಲ್ಲಿ ಎಂಜಾಯ್ ಮಾಡ್ತಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಸ್ಟ್ರೇಲಿಯವನ್ನು ಹಿಂದಿಕ್ಕಿ 2 ಗಂಟೆ ಕಾಲ ನಂ.1 ಟೆಸ್ಟ್ ಸ್ಥಾನದಲ್ಲಿದ್ದ ಭಾರತ.

Wed Jan 18 , 2023
ಹೊಸದಿಲ್ಲಿ:ತವರಿನಲ್ಲಿ ಆಸ್ಟ್ರೇಲಿಯ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಮುಂಚಿತವಾಗಿ ವೆಬ್‌ಸೈಟ್‌ನಲ್ಲಿನ ತಾಂತ್ರಿಕ ದೋಷದಿಂದಾಗಿ ಟೀಮ್ ಇಂಡಿಯಾ ಐಸಿಸಿ ಟೆಸ್ಟ್ ತಂಡ ಶ್ರೇಯಾಂಕದಲ್ಲಿ 2 ಗಂಟೆ ಕಾಲ ಅಗ್ರಸ್ಥಾನದಲ್ಲಿತ್ತು ಐಸಿಸಿ ಟೆಸ್ಟ್ ಶ್ರೇಯಾಂಕಗಳು ಪ್ರತಿ ಸರಣಿಯ ಕೊನೆಯಲ್ಲಿ ಮಾತ್ರ ಬದಲಾಗುತ್ತವೆ ಮತ್ತು ಆಸ್ಟ್ರೇಲಿಯಾ ಅಥವಾ ಭಾರತವು ಪ್ರಸ್ತುತ ಯಾವುದೇ ಸರಣಿಯಲ್ಲಿ ಭಾಗಿಯಾಗಿಲ್ಲ. ಸ್ವದೇಶದಲ್ಲಿ ಇತ್ತೀಚೆಗೆ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಅಂತರದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ […]

Advertisement

Wordpress Social Share Plugin powered by Ultimatelysocial