25,000ಕ್ಕೂ ಅಧಿಕ ಕೋಳಿಗಳ ಹತ್ಯೆಗೆ ಥಾಣೆ ಜಿಲ್ಲಾಧಿಕಾರಿ ಆದೇಶ….

ಮುಂಬಯಿ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಕೆಲವು ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಯಾವುದೇ ರೀತಿಯಲ್ಲಿ ಭೀತಿ ಪಡಬೇಕಾದ ಅಗತ್ಯವಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ತಹಸೀಲ್ ನ ವೆಹ್ಲೋಳಿ ಗ್ರಾಮದ ಕೋಳಿ ಫಾರಂವೊಂದರಲ್ಲಿ ಸುಮಾರು 100 ಕೋಳಿಗಳು ಸಾವನ್ನಪ್ಪಿದ ನಂತರ ಶಹಾಪುರದಲ್ಲಿ ಹಕ್ಕಿಜ್ವರದ ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಸಾವನ್ನಪ್ಪಿರುವ ಕೋಳಿಯಿಂದ ಸಂಗ್ರಹಿಸಿದ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ಕೋಳಿಗಳು ಎಚ್ 5ಎನ್ 1 ಏವಿಯನ್ ವೈರಸ್ ನಿಂದ ಸಾವನ್ನಪ್ಪಿರುವುದಾಗಿ ಫಲಿತಾಂಶ ದೃಢಪಡಿಸಿದೆ ಎಂದು ಥಾಣೆ ಜಿಲ್ಲಾ ಪರಿಷತ್ ನ ಸಿಇಒ ಡಾ.ಭೌಸಾಹೇಬ್ ಡಾಂಗ್ಡೆ ತಿಳಿಸಿದ್ದಾರೆ.

ಶಹಾಪುರ್ ಗ್ರಾಮದ ಒಂದು ಕಿಲೋ ಮೀಟರ್ ಸುತ್ತಳತೆಯಲ್ಲಿರುವ ಕೋಳಿಫಾರಂಗಳಲ್ಲಿನ ಕೋಳಿಗಳನ್ನು ಕೊಲ್ಲುವಂತೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಥಾಣೆ ಜಿಲ್ಲಾಧಿಕಾರಿ ರಾಜೇಶ್ ನಾರ್ವೇಕರ್, ಸುಮಾರು 25,000ಕ್ಕೂ ಅಧಿಕ ಕೋಳಿಗಳನ್ನು ಕೊಲ್ಲುವಂತೆ ಶನಿವಾರ (ಫೆ.19) ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.

ಶಹಾನ್ ಪುರ್ ಹೊರತುಪಡಿಸಿ ಜಿಲ್ಲೆಯ ಬೇರೆ ಯಾವುದೇ ಭಾಗದಲ್ಲಿ ಹಕ್ಕಿಜ್ವರ ಪತ್ತೆಯಾಗಿಲ್ಲ. ಇದರಿಂದಾಗಿ ಜನರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತೀಯ ಸಂಸ್ಕರಣಾಗಾರಗಳ ಲಾಭದಾಯಕತೆಯು ವೆಚ್ಚದ ಚೇತರಿಕೆಯ ಮೇಲೆ ಅವಲಂಬಿತವಾಗಿದೆ

Sat Feb 19 , 2022
    ಹೊಸದಿಲ್ಲಿ, ಫೆ.19 ಭಾರತೀಯ ಸಂಸ್ಕರಣಾಗಾರಗಳ ಲಾಭವು ಚಿಲ್ಲರೆ ಬೆಲೆಗಳ ಹೆಚ್ಚಳದ ಮೂಲಕ ವೆಚ್ಚದ ಚೇತರಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ (ಇಂಡ್-ರಾ) ಹೇಳಿದೆ. ಗಮನಾರ್ಹವಾಗಿ, ತೈಲ ಮಾರುಕಟ್ಟೆ ಕಂಪನಿಗಳು ನವೆಂಬರ್ 2021 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಗಳನ್ನು ಹೆಚ್ಚಿಸಿಲ್ಲ. ಆದಾಗ್ಯೂ, ಹೆಚ್ಚಿನ ಕಚ್ಚಾ ತೈಲ ಬೆಲೆಗಳು Q4FY22 ನಲ್ಲಿ ಪ್ರಮುಖ ಸಂಸ್ಕರಣಾಗಾರ ಆಧಾರಿತ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಿರುವುದರಿಂದ ಪ್ರವೃತ್ತಿಯು ಬದಲಾಗಬಹುದು. […]

Advertisement

Wordpress Social Share Plugin powered by Ultimatelysocial