ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಟೆಂಪೋ ಟ್ರಾವೆಲರ್

 

ಇಲ್ಲಿನ ಸೂಳಗಿರಿಯ ಚಿನ್ನಾರ್ ಬಳಿ ಟೆಂಪೋ ಟ್ರಾವೆಲರ್‌ವೊಂದು ರಸ್ತೆ ಡಿವೈಡರ್‌ಗೆ ಡಿಕ್ಕಿ (Road Accident) ಹೊಡೆದ ಪರಿಣಾಮ ವಾಹನದ ಕೆಳಗೆ ಸಿಲುಕಿ ವ್ಯಕ್ತಿಯೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಕೃಷ್ಣಗಿರಿಗೆ ತರಕಾರಿ ತುಂಬಿಸಿಕೊಂಡು ಹೋಗುತ್ತಿದ್ದಾಗ ಈ ಅಪಘಾತವಾಗಿದೆ.ಟೆಂಪೋ ಟ್ರಾವೆಲರ್‌ನಲ್ಲಿದ್ದ ನಾಲ್ವರಲ್ಲಿ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮತ್ತಿಬ್ಬರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೂಳಗಿರಿ ಹೆದ್ದಾರಿಯಲ್ಲಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಆದ ಕಾರಣ ರಸ್ತೆ ಮೇಲೆ ತರಕಾರಿ ಹಾಗೂ ವಾಹನದ ಬಿಡಿ ಭಾಗ ಚೆಲ್ಲಾಡಿತ್ತು.ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.ಕಾಂಗ್ರೆಸ್ ವೋಟ್ ಬ್ಯಾಂಕ್, ಜಾತಿ ರಾಜಕಾರಣ ಮಾಡುವ ಮೂಲಕ ಜಾತಿ ಜಾತಿಗಳ ಮಧ್ಯೆ ಜಗಳ ತಂದಿಡುವ, ಕುಟುಂಬ ರಾಜಕಾರಣವನ್ನು ಬೆಳೆಸುವ ಕೆಲಸವನ್ನು ಮಾಡುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ರಿಪೋರ್ಟ್ ಕಾರ್ಡ್ ರಾಜಕಾರಣ ಆರಂಭಿಸಿದರು. ಕರ್ನಾಟಕದಲ್ಲಿ ನಾವು ರಿಪೋರ್ಟ್ ಕಾರ್ಡ್ ಆಧಾರದಲ್ಲಿ ಚುನಾವಣೆ (Karnataka Election) ಎದುರಿಸುತ್ತೇವೆ, ನಮ್ಮ ರಿಪೋರ್ಟ್ ಕಾರ್ಡ್ ಸಿದ್ಧವಾಗಿದೆ ಎಂದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಫೇಸ್ಬುಕನಲ್ಲಿ ಆರ್ಡರ್ ಮಾಡಿದ್ದೆ ಒಂದು ಮನೆಗೆ ಬಂದಿದ್ದೆ ಇನ್ನೊಂದು ಮೋಸ ಹೋದ ಯುವಕ.

Thu Jan 5 , 2023
ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಯುವಕ ಫೇಸ್ಬುಕ್ ನಲ್ಲಿ ಡಿಸ್ಕೌಂಟ್ ನಲ್ಲಿ 1550 ರೂಪಾಯಿಯ ಕ್ಯಾಮೆರಾ ಬೂಕ್ ಮಾಡಿದ್ದಾನೆ ನಾಲ್ಕೈದು ದಿನಗಳ ನಂತರ ಬಂದ ಪಾರ್ಸಲ್ ದುಡ್ಡು ಕೊಟ್ಟು ತೆಗೆದುಕೊಂಡು ಒಪನ್ ಮಾಡಿ ನೋಡಿದಾಗ ಕೆಲವ 200 ರೂಪಾಯಿಯ ಲ್ಯಾಂಪ್ ಇರುವುದು ಕಂಡು ಶಾಕ್ ಆಗಿದ್ದಾನೆ.ನಂತರ ಮರಳಿ ಕಳಿಸಲು ಆಧಾರವಿಲ್ಲದೆ ಅಸಹಾಯಕನಾಗಿ ತನಗೆ ಆದ ಮೋಸ ಬೇರೆ ಯಾರಿಗೂ ಆಗದಿರಲಿ ಯಾರು ಕೂಡ ಫೇಸ್ ಬುಕ್ ನಲ್ಲಿ ಯಾವದೆ ರೀತಿ […]

Advertisement

Wordpress Social Share Plugin powered by Ultimatelysocial