ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚಿ ಪರಾರಿ

ಬಾರ್ ಕ್ಯಾಷಿಯರ್ ಹಾಗೂ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ 7 ದರೋಡೆಕೋರರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.ಚಿಕ್ಕೆಗೌಡ, ಭರತ್ ಕುಮಾರ್, ಲಗ್ಗೆರೆಯ ತೇಜಸ್, ವಿನಯ್, ಕಾರ್ತಿಕ್, ವಿಕ್ರಂ, ಕೆಂಗೇರಿಯ ರಜತ್ ಹಾಗೂ ಬಾಶೆಟ್ಟಿಹಳ್ಳಿಯ ಚೇತನ್ ಬಂಧಿತ ಆರೋಪಿಗಳು. ಆರೋಪಿಗಳು ದರೋಡೆ, ಸುಲಿಗೆ, ಕಳುವು ಸೇರಿದಂತೆ 9 ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬಂಧಿತರಿಂದ 11 ಲಕ್ಷ 90 ಸಾವಿರ ರೂ. ಮೌಲ್ಯದ ಚಿನ್ನಾಭರಣ ,ಮೂರು ದ್ವಿಚಕ್ರ ವಾಹನ, ನಾಲ್ಕು ಲಾಂಗ್, ನಾಲ್ಕು ಚಾಕು, ಎರಡು ಮಚ್ಚು, ನಾಲ್ಕು ಪೆಪ್ಪರ್ ಸ್ಪ್ರೇ ಬಾಟಲ್, ಒಂದು ಕಬ್ಬಿಣದ ರಾಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ :K.S.R.T.C. ಬಸ್‌ ಹಾಗೂ ಟಿಪ್ಪರ್‌  ಡಿಕ್ಕಿ

Please follow and like us:

Leave a Reply

Your email address will not be published. Required fields are marked *

Next Post

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

Fri Feb 5 , 2021
ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿರುವ ಘಟನೆ ಕಲಬುರ್ಗಿಯ ಜೇವರ್ಗಿ ತಾಲೂಕಿನಲ್ಲಿ ನಡೆದಿದೆ. ಜೇವರಗಿ ಪಟ್ಟಣದ ಗಡ್ಡಿಪೂಲ ಬಳಿ ಸುಮಾರು 30 ರಿಂದ 35 ವರ್ಷದ ಅಪರಿಚಿತ ಶವ ದೊರೆತಿದ್ದು ಶವದ ಬಗ್ಗೆ ನಿಕಾರ ಮಾಹಿತಿ ತಿಳಿದುಬಂದಿಲ್ಲ. ಸದ್ಯ ಜೇವರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ :ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚಿ ಪರಾರಿ Please follow and like us:

Advertisement

Wordpress Social Share Plugin powered by Ultimatelysocial