ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಅದೇ ರೀತಿ ಕಳೆದ ಎರಡು ವರ್ಷಗಳಿಂದ ನಾವು ಕಾಣುತ್ತಿರುವಂತೆ ಕೊರೋನಾ ಜಗತ್ತಿನೆಲ್ಲೆಡೆ ಕಾಡುತ್ತಿದೆ. ಒಂದನೆಯ ಬಳಿಕ ಇದೀಗ ಎರಡನೆಯ ಅಲೆ ಕೂಡ ಜಗತ್ತಿಗೆ ಅಪ್ಪಳಿಸಿದೆ.ಸಾಮಾನ್ಯವಾಗಿ ಈ ಸಂದರ್ಭದಲ್ಲಿ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಭಯದಿಂದ ಜನರೆಲ್ಲರೂ ಆಯುರ್ವೇದ ಚಿಕಿತ್ಸೆ ಅಥವಾ ಮನೆ ಮದ್ದು ಮಾಡಿ ತಮ್ಮ ಜೀವಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಿದ್ದಾರೆ.ಈ ಬಗ್ಗೆ ಹೇಳುವುದಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸಲುವಾಗಿ ಕರಿಮೆಣಸಿನ ಕಷಾಯ ನೆಲನೆಲ್ಲಿ ಕಷಾಯ ವೈದ್ಯರ ಸಲಹೆಯಿಲ್ಲದೆ ತಮ್ಮಷ್ಟಕ್ಕೆ ತಾವು ಸೇವಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ.ಇಂತಹ ಕಷಾಯಗಳು ಎಲ್ಲರ ದೇಹಕ್ಕೆ ಹೊಂದಬಹುದು ಎಂದು ಹೇಳಲು ಸಾಧ್ಯವಿಲ್ಲ. ಕೆಲವರ ಶರೀರ ಉಷ್ಣ ಪ್ರಕೃತಿಯನ್ನು ಹೊಂದಿರುತ್ತದೆ.ಇಂತಹ ವ್ಯಕ್ತಿಗಳಿಗೆ ಆಯುರ್ವೇದ ಗಿಡಮೂಲಿಕೆಗಳ ಕಷಾಯವು ಮಾರಕವಾಗುವ ಸಾಧ್ಯತೆ ಇರುತ್ತವೆ. ತಮ್ಮ ದೇಹಕ್ಕೆ ಯಾವ ರೀತಿಯ ಔಷಧಿ ಸೇವಿಸಬೇಕೆಂದು ತಮ್ಮ ವೈದ್ಯರಿಗೆ ಮಾತ್ರ ತಿಳಿದಿರುತ್ತದೆ.ಅವರ ಸಲಹೆ ಮೇರೆಗೆ ನಾವು ಅಂತಹ ಔಷಧಿಗಳನ್ನು ಸೇವಿಸಬಹುದು.ಕೇವಲ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಎನ್ನುವ ಯೋಚನೆಯಲ್ಲಿ ಹೊಸದೊಂದು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಎಲ್ಲರ ದೇಹ ಸ್ಥಿತಿಗೆ ಎಲ್ಲ ರೀತಿಯ ಔಷಧಿಗಳು ಹೊಂದಿಕೊಳ್ಳುವುದು ಅಸಾಧ್ಯ.ಮೊದಲನೇ ಅಲೆ ಕೊರೋನಾ ಸಂದರ್ಭದಲ್ಲಿ ಬಿಸಿನೀರಿಗೆ ಇತರ ಗಿಡಮೂಲಿಕೆಗಳನ್ನು ಹಾಕಿ ಆವಿ ತೆಗೆದುಕೊಳ್ಳುವ ಪ್ರವೃತ್ತಿಯನ್ನು ಪಟ್ಟಣಗಳಲ್ಲಿ ಹಾಗೂ ಹಳ್ಳಿ ಮನೆಗಳಲ್ಲೂ ಆರಂಭಗೊಂಡಿತ್ತು. ಈ ಬಗ್ಗೆ ಹೇಳುವುದಾದರೆ ಪದೇ ಪದೇ ಈ ರೀತಿಯ ಆವಿಯನ್ನು ತೆಗೆದುಕೊಳ್ಳುವುದರಿಂದ ಮುಂದೆ ಬೇರೊಂದು ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada