ರೂಮ್ ನಂ. 208ರಲ್ಲಿ ಬಿದ್ದಿತ್ತು ಆಕೆಯ ಹೆಣ! ಶವದ ಮುಂದೆಯೇ ಊಟ ಮಾಡಿ ಹೋದ ಆ ಹಂತಕ ಯಾರು?

ಮುಂಬೈ: ಆಕೆ ಹಾಲುಗಲ್ಲದ ಚೆಲುವೆ, ಕಾಲೇಜ್‌ನಲ್ಲಿ (College) ಪ್ರೀತ್ಸೇ ಪ್ರೀತ್ಸೆ ಅಂತ ಹುಡುಗರೆಲ್ಲ (Boys) ಅವಳ ಹಿಂದೆ ಬೀಳುತ್ತಿದ್ದರು. ಆದರೆ ಆಕೆ ಮಾತ್ರ ಯಾರ ಕಡೆಯೂ ತಿರುಗಿಯೂ ನೋಡುತ್ತಿರಲಿಲ್ಲ. ಆತ ಆದೇ ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ.

ಯಾರಿಗೂ ಸೋಲದಿದ್ದ ಆಕೆ ಆತನಿಗೆ ಸೋತು ಬಿಟ್ಟಿದ್ದಳು. ಇಬ್ಬರು ಪ್ರೀತಿಸುತ್ತಾ (Love), ಕೆಲ ವರ್ಷಗಳೇ ಕಳೆದಿದ್ದರು. ಇನ್ನೇನು ಕಾಲೇಜ್ ಮುಗಿಸಿ, ಒಳ್ಳೆಯದ್ದೊಂದು ಕೆಲಸ (Job) ಸಿಕ್ಕ ಬಳಿಕ ಮದುವೆಯಾಗಬೇಕು (marriage) ಅಂತೆಲ್ಲ ಕನಸು ಕಂಡಿದ್ದರು. ಆದರೆ ಆ ಕನಸು ಇನ್ನು ಕನಸಾಗಿಯೇ ಉಳಿಯಲಿದೆ. ಅಸಲಿಗೆ ಇನ್ನು ಮುಂದೆ ಕನಸು ಕಾಣಲಿಕ್ಕೆ ಆ ಹುಡುಗಿಯೇ ಕಣ್ಮುಚ್ಚಿದ್ದಾಳೆ. ಪ್ರೀತಿಸಿದ್ದೀನಿ, ನಿನ್ನ ಮದುವೆಯಾಗಿ ಸುಖವಾಗಿ ನೋಡಿಕೊಳ್ಳುತ್ತೀನಿ ಎಂದಿದ್ದವನೇ ಆಕೆಯನ್ನು ಬರ್ಬರವಾಗಿ ಕೊಂದಿದ್ದಾನೆ (Murder).

ಆಕೆಯ ಹೆಸರು ಸಯ್ಯಾಲಿ, ಆತ ಸಾಗರ್

ಆಕೆ ಹೆಸರು ಸಯ್ಯಾಲಿ ಶಹನಾಸೆ, 27 ವರ್ಷದ ಮುಂಬೈನ ವಸೈ ಪ್ರದೇಶದ ನಿವಾಸಿ. ಆಕೆ ಕಂಪ್ಯೂಟರ್ ಇಂಜಿನಿಯರ್ ಆಗಿದ್ದಳು. ಆತ ಸಾಗರ್ ಅರುಣ್ ನಾಯಕ್. ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾನೆ. ಅವರಿಬ್ಬರೂ ಒಂದೇ ಕಾಲೇಜ್‌ನಲ್ಲಿ ಓದುತ್ತಾ ಇದ್ದಾಗ, ಪ್ರೀತಿಸುತ್ತಾ ಇದ್ದರು. ಕಾಲೇಜ್‌ ಮುಗಿದು ಕೆಲಸಕ್ಕೆ ಸೇರಿದ್ದ ಇಬ್ಬರೂ, ಮದುವೆ ಆಗೋದಕ್ಕೂ ನಿರ್ಧರಿಸಿದ್ದರು.

ಹೋಟೆಲ್‌ಗೆ ಕರೆಸಿಕೊಂಡು ಸಯ್ಯಾಲಿ ಹತ್ಯೆ ಮಾಡಿದ ಸಾಗರ್

ವಸೈ ವೆಸ್ಟ್‌ ಹೋಟೆಲ್‌ಗೆ ಕೊಠಡಿಗೆ ನಿನ್ನೆ ಸಾಗರ್ ಹಾಗೂ ಸಯ್ಯಾಲಿ ಬಂದಿದ್ದಾರೆ. ಇಬ್ಬರು ತುಂಬಾ ಹೊತ್ತು ಹೋಟೆಲ್‌ನಲ್ಲೇ ಇದ್ದಾರೆ. ಕೆಲ ಸಮಯದ ಬಳಿಕ ಸಾಗರ್ ಮಾತ್ರ ಅಲ್ಲಿಂದ ಹೋಗಿದ್ದಾನೆ. ಎಷ್ಟು ಹೊತ್ತಾದರೂ ಸಯ್ಯಾಲಿ ಕೋಣೆಯಿಂದ ಆಚೆ ಬರಲೇ ಇಲ್ಲ. ಅನುಮಾನಗೊಂಡ ಹೋಟೆಲ್‌ ಸಿಬ್ಬಂದಿ ಕೋಣೆಗೆ ಹೋಗಿ ನೋಡಿದ್ದಾರೆ. ಅಷ್ಟರಲ್ಲಿ ಸಯ್ಯಾಲಿ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು.

ಹಗ್ಗದಿಂದ ಸಯ್ಯಾಲಿ ಕತ್ತು ಬಿಗಿದು ಕೊಲೆ ಮಾಡಿದ ಸಾಗರ್

ಸಾಗರ್ ಸಯ್ಯಾಲಿ ಕತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾನೆ. ಆಕೆ ಇನ್ನೂ ಉಸಿರಾಡುತ್ತಿರುವುದನ್ನು ನೋಡಿ, ಅಲ್ಲೇ ಬಿದ್ದಿದ್ದ ಕೊಳಾಯಿ ಪೈಪ್‌ನಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಬಳಿಕ ಆಕೆ ಕೂಗಿಕೊಳ್ಳದಂತೆ ಆಕೆಯ ಬಾಯಿ, ಮೂಗು ಒತ್ತಿ ಹಿಡಿದು, ಆಕೆ ಪ್ರಾಣ ಬಿಡುವವರೆಗೂ ಒತ್ತಿ ಹಿಡಿದ್ದಾನೆ. ಎಡ ಭಾಗದ ಕಿವಿ, ತಲೆಯಿಂದ ರಕ್ತ ಸುರಿಸುತ್ತಲೇ ಸಯ್ಯಾಲಿ ಪ್ರಾಣ ಬಿಟ್ಟಿದ್ದಾಳೆ.

ಶವದ ಮುಂದೆಯೇ ಊಟ ಮಾಡಿದ ಹಂತಕ

ಸಯ್ಯಾಲಿ ನರಳಿ ನರಳಿ ಸಾಯುತ್ತಿದ್ದಂತೆ ಆಕೆಯ ಮೃತ ದೇಹದ ಎದುರೇ ಸಾಗರ್ ಊಟ ಮಾಡಿದ್ದಾನೆ. ಬಳಿಕ ಬಾಗಿಲು ಲಾಕ್ ಮಾಡಿ, ಏನೂ ಆಗಲಿಲ್ಲ ಎನ್ನುವಂತೆ ಹೊರಟಿದ್ದಾನೆ. ಆದಾದ ಮೇಲೆ ರೂಂ ಸರ್ವಿಸ್ ಬಿಲ್ ಪಾವತಿಸಿ, ತನ್ನ ಬೈಕನ್ನು ಅಲ್ಲಿಯೇ ಬಿಟ್ಟು ಸಾಗರ್ ಎಸ್ಕೇಪ್ ಆಗಿದ್ದಾನೆ.

7 ವರ್ಷಗಳಿಂದ ಇದೇ ಹೋಟೆಲ್‌ಗೆ ಬರುತ್ತಿದ್ದ ಜೋಡಿ

ಸಯ್ಯಾಲಿ ಹಾಗೂ ಸಾಗರ್ ಕಳೆದ 7 ವರ್ಷಗಳಿಂದಲೂ ವಸೈ ಪ್ರದೇಶದ ‘ದಿ ರೂಮ್ಸ್ ಆಫ್ ಸ್ಟೇಟಸ್’ ಹೋಟೆಲ್‌ಗೆ ಬರುತ್ತಿದ್ದರು ಅಂತ ಅದರ ಮಾಲೀಕರು ಹೇಳಿದ್ದಾರೆ. ಅವರಿಬ್ಬರು ಮಧ್ಯರಾತ್ರಿ ಕೊಠಡಿ 208ಗಾಗಿ ಆನ್‌ಲೈನ್ ಬುಕಿಂಗ್ ಮಾಡಿದ್ದಾರೆ. ತಿಂಗಳಿಗೆ ಎರಡು ಬಾರಿಯಾದರೂ ಖಾಯಂ ಆಗಿ ಅದೇ ರೂಂಗೆ ಬರುತ್ತಾರೆ.

ಸಾಗರ್ ಕೋಣೆಯಿಂದಲೇ ಕೆಲವು ಪಾನೀಯಗಳು ಮತ್ತು ಆಹಾರವನ್ನು ಆರ್ಡರ್ ಮಾಡಿದ. ಸಂಜೆ 5.30ಕ್ಕೆ ಬಿಲ್ ಕೇಳಿ 6 ಗಂಟೆಗೆ ಕೌಂಟರ್ ಗೆ ಇಳಿದು ಆಯಪ್ ಮೂಲಕ ಹಣ ಪಾವತಿಸಿ ಹೊರಟು ಹೋದ ಅಂತ ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

ರಾತ್ರಿಯಿಡೀ ಟಿವಿ ಆನ್‌ ಮಾಡೇ ಇಟ್ಟಿದ್ದ ಹಂತಕ

ರಾತ್ರಿಯಿಂದಲೂ ಟಿವಿ ಸೌಂಡ್ ಜೋರಾಗಿ ಇಟ್ಟಿದ್ದ ಸಾಗರ್,. ಕೋಣೆಯಿಂದ ಯಾರೂ ಹೊರಬಾರದೇ ಇರೋದ್ರಿಂದ ಇಂಟರ್‌ಕಾಮ್ ಕರೆ ಮಾಡಿದ್ದಾರೆ. ಆದರೆ ಯಾರೂ ಉತ್ತರಿಸದೇ ಇರೋದ್ರಿಂದ ಹೋಟೆಲ್ ಸಿಬ್ಬಂದಿ ಕೋಣೆಗೆ ಹೋಗಿ ನೋಡಿದಾಗ, ಬೆಡ್‌ ಶೀಟ್ ಮೇಲೆ ಸ್ಯಯಾಲಿ ರಕ್ತಸಿಕ್ತ ದೇಹ ಬಿದ್ದಿತ್ತು.

ವಸಾಯಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸಾಗರ್ ಬಂಧನದ ಬಳಿಕ ಸಯ್ಯಾಲಿ ಕೊಲೆಗೆ ಕಾರಣ ಏನು ಎನ್ನುವುದು ತಿಳಿಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ನಲ್ಲಿ ರಷ್ಯಾದ ಆಕ್ರಮಣದ ಮಧ್ಯೆ ಸಮಂತಾ ರುತ್ ಪ್ರಭು ಸ್ಪೂರ್ತಿದಾಯಕ 'ಜ್ಞಾಪನೆ'!

Wed Mar 2 , 2022
ಪ್ರತಿ ಹಾದುಹೋಗುವ ದಿನದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನತೆ ಹೆಚ್ಚುತ್ತಲೇ ಇರುವುದರಿಂದ, ಜೀವಹಾನಿ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ವಾಸಿಸುವ ಜನರ ಹಲವಾರು ವರದಿಗಳು ಬರುತ್ತಿವೆ. ದ್ವಿಪಕ್ಷೀಯ ಮಾತುಕತೆಗಳು ಮತ್ತು ಹಲವಾರು ದೇಶಗಳ ಮಧ್ಯಸ್ಥಿಕೆಗಳ ಹೊರತಾಗಿಯೂ, ರಷ್ಯಾ ಉಕ್ರೇನ್‌ನಲ್ಲಿ ತನ್ನ ವಿಶೇಷ ಮಿಲಿಟರಿ ಕಾರ್ಯಾಚರಣೆಗಳೊಂದಿಗೆ ಮುಂದುವರಿಯಿತು. ಉಕ್ರೇನ್ ಜನರ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ಜಗತ್ತು ಪ್ರಾರ್ಥಿಸುತ್ತಿದೆ. ರಾಜಕಾರಣಿಗಳಿಂದ ಹಿಡಿದು ಸ್ಥಳೀಯ ಜನರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಉಕ್ರೇನ್‌ಗೆ ತಮ್ಮ […]

Advertisement

Wordpress Social Share Plugin powered by Ultimatelysocial