ಭಾರತೀಯ ಕ್ರಿಕೆಟ್ಗೆ ಅವರ ಸೇವೆಗಳಿಗೆ ಮತ್ತು ಆಟಗಾರನಾಗಿ ಅವರು ಪಡೆದ ಯಶಸ್ಸೇ ಇದಕ್ಕೆ ಕಾರಣ ಎಂದಿದ್ದಾರೆ.
ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಸಹಾ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಹಾ, ದ್ರಾವಿಡ್ ನನಗೆ ನಿವೃತ್ತಿ ಬಗ್ಗೆ ಯೋಚಿಸುವಂತೆ ಸಲಹೆ ನೀಡಿದರು ಎಂದು ಆರೋಪಿಸಿದರು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭರವಸೆ ನೀಡಿದರೂ ತಂಡದಲ್ಲಿ ಸ್ಥಾನ ಸಿಗಲಿಲ್ಲ.
ಸಹಾ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ದ್ರಾವಿಡ್, ಅವರು ಭಾರತೀಯ ಕ್ರಿಕೆಟ್ನ ಯಶಸ್ಸಿನ ಭಾಗವಾಗಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದೆ. ಈ ಕ್ರಮದಲ್ಲಿ ನಾನು ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಈ ವಿಚಾರದಲ್ಲಿ ಅವರಿಗೆ ಸ್ಪಷ್ಟತೆ ಬೇಕಿದೆ. ವಾಸ್ತವವಾಗಿ ನಾನು ಎಲ್ಲ ಆಟಗಾರರೊಂದಿಗೆ ಯಾವಾಗಲೂ ಮಾತನಾಡಿದ ರೀತಿಯಲ್ಲೆ ಅವರೊಂದಿಗೆ ಮಾತನಾಡಿದ್ದೇನೆ. ಸ್ವಲ್ಪ ಪ್ರಾಮಾಣಿಕ ಪ್ರವರ್ತಿಸಬೇಕಿತ್ತು. ಈ ಮಾತುಗಳನ್ನು ಮಾಧ್ಯಮಗಳ ಮೂಲಕ ಕೇಳುತ್ತೇನೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಅದು ಏನೇ ಇರಲಿ, ನಾವು ಸಲಹೆ ನೀಡುವ ಪ್ರತಿ ಬಾರಿ, ಸಂದೇಶಗಳು ಪ್ರತಿ ಆಟಗಾರನಿಗೂ ಇಷ್ಟಪವಾಗಬೇಕೆಂದೇನು ಇಲ್ಲವಲ್ಲ! ಆದುದರಿಂದಲೇ ಅವರ ಮಾತಿನಿಂದ ನನಗೆ ಹೆಚ್ಚು ಬೇಸರವಾಗಲಿಲ್ಲ. ನಮ್ಮ ಅಭಿಪ್ರಾಯಗಳನ್ನು ಒಪ್ಪಲಿಲ್ಲ ಎಂದ ಮಾತ್ರಕ್ಕೆ ಅವರನ್ನು ದೂಷಿಸುವುದು ಸರಿಯಲ್ಲ ಎಂದಿದ್ದಾರೆ.
ಆಯ್ಕೆಯಾಗದವರಿಗೆ ಬೇಸರವಾಗುವುದು ಸಹಜ. ಆದರೂ ಅವರ ಮೇಲಿನ ಗೌರವ ಕಡಿಮೆಯಾಗುವುದಿಲ್ಲ. ನನ್ನ ತಂಡವು ಸಂಪೂರ್ಣವಾಗಿ ಪ್ರಾಮಾಣಿಕ ಮತ್ತು ಸ್ಪಷ್ಟವಾಗಿರಬೇಕು ಎಂದು ನಾನು ಬಯಸುತ್ತೇನೆ ಎಂದು ದ್ರಾವಿಡ್ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada