ಆಯುಷ್​​ ಶರ್ಮಾ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​;

 ಸಲ್ಮಾನ್​ ಖಾನ್​ ಮತ್ತು ಆಯುಷ್​​ ಶರ್ಮಾ ನಡುವೆ ಉತ್ತಮ ಬಾಂಧವ್ಯ ಇತ್ತು. ಆದರೆ ಈಗ ಕಿರಿಕ್​ ಶುರುವಾಗಿದೆ ಎಂದು ವರದಿ ಆಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್​ ಖಾನ್ ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ.

ಹಾಗಾಗಿ ಅವರಿಗೆ ತುರ್ತಾಗಿ ಒಂದು ಗೆಲುವು ಬೇಕಾಗಿದೆ ಸಲ್ಮಾನ್​ ಖಾನ್ ನಟಿಸುತ್ತಿರುವ ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾದ ಮೇಲೆ ಅಭಿಮಾನಿಗಳು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಲವು ಕಾರಣಗಳಿಂದಾಗಿ ಈ ಚಿತ್ರ ಸುದ್ದಿ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ನಟಿ ಪೂಜಾ ಹೆಗ್ಡೆ ಅವರು ‘ಕಭಿ ಈದ್​ ಕಭಿ ದಿವಾಲಿ’  ಸಿನಿಮಾದ ಶೂಟಿಂಗ್ ಆರಂಭಿಸಿದರು. ಇದೇ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ತಂಗಿ ಅರ್ಪಿತಾ ಖಾನ್​ ಅವರ ಗಂಡ ಆಯುಷ್​​ ಶರ್ಮಾ ಕೂಡ ನಟಿಸುತ್ತಿದ್ದಾರೆ. ಆದರೆ ಈಗ ಈ ಸಿನಿಮಾದ ಬಗ್ಗೆ ಕೆಲವು ಅಚ್ಚರಿಯ ಮಾಹಿತಿ ಕೇಳಿಬರುತ್ತಿವೆ. ಚಿತ್ರತಂಡದ ಜೊತೆ ಕಿರಿಕ್​ ಆಗಿದ್ದರಿಂದ ಆಯುಷ್​​ ಶರ್ಮಾ ಅವರು ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾ ತಂಡದಿಂದ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಈ ಬೆಳವಣಿಗೆ ಬಗ್ಗೆ ಮೂಲಗಳು ತಿಳಿಸಿವೆ ಎಂದು ‘ಬಾಲಿವುಡ್​ ಹಂಗಾಮ’ ವರದಿ ಮಾಡಿದೆ.

ಸಹೋದರಿ ಅರ್ಪಿತಾ ಖಾನ್​ ಅವರ ಗಂಡ ಆಯುಷ್​ ಶರ್ಮಾ ಜೊತೆಗೆ ಸಲ್ಮಾನ್​ ಖಾನ್​ ಅವರಿಗೆ ಉತ್ತಮ ಬಾಂಧವ್ಯ ಇದೆ. ಈ ಹಿಂದೆ ಆಯುಷ್​​ ಶರ್ಮಾ ನಟಿಸಿದ್ದ ಮೊದಲ ಚಿತ್ರ ‘ಲವ್​ ಯಾತ್ರಿ’ ನಿರ್ಮಾಣ ಆಗಿದ್ದೇ ಸಲ್ಮಾನ್​ ಖಾನ್​ ಅವರ ಬ್ಯಾನರ್​ ಮೂಲಕ. ಆಯುಷ್​​ ಶರ್ಮಾ ಅವರ ಎರಡನೇ ಸಿನಿಮಾ ‘ಅಂತಿಮ್​’ ಕೂಡ ಸಲ್ಲು ನಿರ್ಮಾಣದಲ್ಲಿ ಮೂಡಿಬಂತು. ಆ ಚಿತ್ರದಲ್ಲಿ ಬಾಮೈದನ ಜೊತೆ ಸಲ್ಮಾನ್​ ಖಾನ್​ ಕೂಡ ನಟಿಸಿದರು. ಈಗ ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾದಲ್ಲಿ ಆಯುಷ್​ ಶರ್ಮಾ ಮತ್ತು ಸಲ್ಮಾನ್​ ಖಾನ್​ ಒಟ್ಟಾಗಿ ನಟಿಸುತ್ತಿದ್ದರು. ಆದರೆ ಸಿನಿಮಾ ತಂಡದಿಂದಲೇ ಆಯುಷ್​​ ಶರ್ಮಾ ಹೊರನಡೆದಿದ್ದಾರೆ ಎಂಬ ಸುದ್ದಿ ಈಗ ಹರಡಿದೆ.

‘ಕ್ರಿಯೇಟಿವ್​ ವಿಚಾರಕ್ಕೆ ಆಯುಷ್​​ ಶರ್ಮಾ ಮತ್ತು ‘ಸಲ್ಮಾನ್​ ಖಾನ್​ ಫಿಲ್ಮ್ಸ್​’ ಬ್ಯಾನರ್​ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ. ಈ ಮೊದಲು ಸಾಜಿದ್​ ನಾಡಿಯದ್ವಾಲ ಅವರು ಕೂಡ ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಆದರೆ ಈಗ ಅವರು ಕೂಡ ಹಿಂದೆ ಸರಿದಿದ್ದಾರೆ ಎಂಬ ಮಾತು ಕೇಳಿಬಂದಿದೆ. ಹಾಗಾಗಿ ಸಲ್ಮಾನ್​ ಖಾನ್​ ಒಬ್ಬರೇ ಈ ಸಿನಿಮಾದ ನಿರ್ಮಾಣದ ಹೊಣೆ ಹೊತ್ತಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡವೇ ಈ ಬಗ್ಗೆ ಸ್ಪಷ್ಟನೆ ನೀಡುವವರೆಗೂ ಸತ್ಯ ಏನೆಂಬುದು ಅಭಿಮಾನಿಗಳಿಗೆ ತಿಳಿಯುವುದು ಕಷ್ಟ. ಹಾಗಾಗಿ ಸಲ್ಮಾನ್​ ಖಾನ್​ ಅಥವಾ ಆಯುಷ್​​ ಶರ್ಮಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಲಿ ಎಂದು ಫ್ಯಾನ್ಸ್​ ನಿರೀಕ್ಷಿಸುತ್ತಿದ್ದಾರೆ.

2022ರ ಡಿಸೆಂಬರ್​ಗೆ ರಿಲೀಸ್​ ಆಗಬೇಕು ಎಂಬ ಗುರಿ ಇಟ್ಟುಕೊಂಡು ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾದ ಶೂಟಿಂಗ್​ ಮಾಡಲಾಗುತ್ತಿತ್ತು. ಆದರೆ ಈಗ ಆಯುಷ್​​ ಶರ್ಮಾ ಚಿತ್ರತಂಡದಿಂದ ಹೊರನಡೆದಿರುವುದು ನಿಜವೇ ಹೌದಾದರೆ ರಿಲೀಸ್​ ದಿನಾಂಕ ಮುಂದೂಡಲ್ಪಡುವ ಸಾಧ್ಯತೆ ಹೆಚ್ಚಿದೆ. ಆಯುಷ್​​ ಶರ್ಮಾ ಬದಲಿಗೆ ಬೇರೆ ಯಾವ ನಟನಿಗೆ ಮಣೆ ಹಾಕಲಾಗುತ್ತದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆ ಪಾತ್ರಕ್ಕೆ ಹೊಸದಾಗಿ ಶೂಟಿಂಗ್​ ಮಾಡಬೇಕಾದ ಅನಿವಾರ್ಯತೆ ಕೂಡ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಳೇ ಹುಡುಗನ ಕಹಿನೆನಪು ಹಂಚಿಕೊಂಡ ಕಂಗನಾ ರಣಾವತ್!

Sun May 22 , 2022
  ಬಾಲಿವುಡ್ ನಟಿ ಕಂಗನಾ ರನೌಟ್ ಪ್ರಸ್ತುತ ‘ಧಾಕಡ್’ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಇದೇ ಮೇ 20ರಂದು ಬಿಡುಗಡೆಯಾಗಲಿದೆ ಮತ್ತು ದೊಡ್ಡ ಪ್ರಮಾಣದ ಚಿತ್ರದ ಪ್ರಚಾರವನ್ನು ಒಳಗೊಂಡಿರುತ್ತದೆ. ರಜನೀಶ್ ಘಾಯ್ ನಿರ್ದೇಶನದ ಈ ಚಿತ್ರದಲ್ಲಿ ರಣಾವತ್ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಸಿನಿಮಾ ರಿಲೀಸ್ ಬಳಿಕ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಸಿನಿಮಾಗಳ ಜೊತೆಗೆ ನಟಿ ಕಂಗನಾ ಹೆಚ್ಚಾಗಿ ಬೇರೆ, ಬೇರೆ ವಿಚಾರಗಳಿಗೆ ಸುದ್ದಿ ಆಗುತ್ತಾರೆ. ಸಿನಿಮಾರಂಗ, ಬೇರೆ […]

Advertisement

Wordpress Social Share Plugin powered by Ultimatelysocial