ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಂತರ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕ್ರಿಕೆಟ್ ಟೂರ್ನಿ ಕರ್ನಾಟಕ ಚಲನಚಿತ್ರ ಕಪ್. ಈ ಕೆಸಿಸಿ ಕಪ್ ಟೂರ್ನಿ ಫೆಬ್ರವರಿಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಹೀಗಾಗಿ ಆರು ತಂಡಗಳ ಆಟಗಾರ ಆಯ್ಕೆ ಪ್ರಕ್ರಿಯೆ ನಡೆದಿದೆ.
ಇನ್ನು ಈ ಕುರಿತು ‘ಫೇಸ್ ಆಫ್ ಕೆಸಿಸಿ, ಲಕ್ ಆಫ್ ಕೆಸಿಸಿ’ ರಾಯಭಾರಿಯಾದ ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ಮಾತನಾಡಿದ್ದಾರೆ. ಸುದೀಪ್ಗಾಗಿ ನಾನು ಇಲ್ಲಿ ಬಂದಿದ್ದೇನೆ. ಸುದೀಪ್ ಕ್ರಿಕೆಟ್ ಫ್ಯಾಷನ್ ನೋಡಿದ್ದೇನೆ. ಫ್ರಿ ಸಿಕ್ಕಾಗೆಲ್ಲ ಕಿಚ್ಚ ಕ್ರಿಕೆಟ್ ಆಡ್ತಾರೆ. ನಾನು ಬಾಸ್ಕೆಟ್ ಬಾಲ್ ಪ್ಲೇಯರ್. ನಾನು ಆರ್ಸಿಬಿ ರಾಯಭಾರಿಯಾಗಿದ್ದಾಗ ಒಂದು ಪ್ರಶ್ನೆ ಬಂದಾಗ ನಾನು ಶೇನ್ ವಾರ್ನ್ ನನ್ನ ಇಷ್ಟದ ಆಟಗಾರ ಅಂದಿದ್ದೆ ಎಂದರು.
ಇನ್ನು, ಸುದೀಪ್ ಮಾತ್ರವಲ್ಲ ಟೂರ್ನಿಯಲ್ಲಿ ನಟ ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ಧನಂಜಯ್, ಧ್ರುವ ಸರ್ಜಾ ಸೇರಿದಂತೆ ನಟರು ಹಾಗು ನಿರ್ದೇಶಕರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
https://play.google.com/store/apps/details?id=com.speed.newskannada