‘ಸುದೀಪ್​​ಗಾಗಿ ಬಂದಿದ್ದೇನೆ’ ಎಂದ ಸ್ಯಾಂಡಲ್​ವುಡ್​​ ಕ್ವೀನ್​​ ರಮ್ಯಾ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಂತರ ಸೌತ್ ಸಿನಿಮಾ‌ ಇಂಡಸ್ಟ್ರಿಯಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕ್ರಿಕೆಟ್ ಟೂರ್ನಿ ಕರ್ನಾಟಕ ಚಲನಚಿತ್ರ ಕಪ್. ಈ ಕೆಸಿಸಿ ಕಪ್ ಟೂರ್ನಿ ಫೆಬ್ರವರಿಯಲ್ಲಿ ಬೆಂಗಳೂರಿನ‌ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಹೀಗಾಗಿ ಆರು ತಂಡಗಳ ಆಟಗಾರ ಆಯ್ಕೆ ಪ್ರಕ್ರಿಯೆ ನಡೆದಿದೆ.

ಇನ್ನು ಈ ಕುರಿತು ‘ಫೇಸ್ ಆಫ್ ಕೆಸಿಸಿ, ಲಕ್ ಆಫ್ ಕೆಸಿಸಿ’ ರಾಯಭಾರಿಯಾದ ಸ್ಯಾಂಡಲ್​​ವುಡ್​​​ ಮೋಹಕ ತಾರೆ ರಮ್ಯಾ ಮಾತನಾಡಿದ್ದಾರೆ. ಸುದೀಪ್​ಗಾಗಿ ನಾನು ಇಲ್ಲಿ ಬಂದಿದ್ದೇನೆ. ಸುದೀಪ್ ಕ್ರಿಕೆಟ್ ಫ್ಯಾಷನ್ ನೋಡಿದ್ದೇನೆ. ಫ್ರಿ ಸಿಕ್ಕಾಗೆಲ್ಲ ಕಿಚ್ಚ ಕ್ರಿಕೆಟ್ ಆಡ್ತಾರೆ. ನಾನು ಬಾಸ್ಕೆಟ್ ಬಾಲ್ ಪ್ಲೇಯರ್. ನಾನು ಆರ್​​ಸಿಬಿ ರಾಯಭಾರಿಯಾಗಿದ್ದಾಗ ಒಂದು ಪ್ರಶ್ನೆ ಬಂದಾಗ ನಾನು ಶೇನ್ ವಾರ್ನ್ ನನ್ನ ಇಷ್ಟದ ಆಟಗಾರ ಅಂದಿದ್ದೆ ಎಂದರು.

ಇನ್ನು, ಸುದೀಪ್​ ಮಾತ್ರವಲ್ಲ ಟೂರ್ನಿಯಲ್ಲಿ ನಟ ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್, ಧನಂಜಯ್, ಧ್ರುವ ಸರ್ಜಾ ಸೇರಿದಂತೆ ನಟರು ಹಾಗು ನಿರ್ದೇಶಕರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಓಟ್ಸ್ ಅತ್ಯಂತ ಆರೋಗ್ಯಕರ ಆಹಾರ ಅನ್ನೋದು ನಮಗೆಲ್ಲ ಗೊತ್ತಿದೆ.

Fri Jan 27 , 2023
ಓಟ್ಸ್ ಅತ್ಯಂತ ಆರೋಗ್ಯಕರ ಆಹಾರ ಅನ್ನೋದು ನಮಗೆಲ್ಲ ಗೊತ್ತಿದೆ. ಓಟ್ಸ್, ಗ್ಲುಟನ್ ಮುಕ್ತವಾಗಿರುವುದು ವಿಶೇಷ. ಅದಕ್ಕಾಗಿಯೇ ತೂಕ ಇಳಿಸಲು ಜನರು ತಮ್ಮ ಆಹಾರದಲ್ಲಿ ಓಟ್ಸ್ ಅನ್ನು ಖಂಡಿತವಾಗಿ ಸೇರಿಸುತ್ತಾರೆ. ಇದರ ಹೊರತಾಗಿ ಓಟ್ಸ್ ಅಂತಹ ಅನೇಕ ಗುಣಗಳಿಂದ ಸಮೃದ್ಧವಾಗಿದೆ. ನಿಮಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಓಟ್ಸ್ ಸೌಂದರ್ಯವರ್ಧಕವೂ ಹೌದು. ಓಟ್ಸ್ ಫೇಸ್ ಮಾಸ್ಕ್ ನಮ್ಮ ಮುಖದ ಚೆಲುವನ್ನು ದುಪ್ಪಟ್ಟು ಮಾಡುತ್ತದೆ. ಓಟ್ಸ್ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಲು […]

Advertisement

Wordpress Social Share Plugin powered by Ultimatelysocial