ಸ್ಯಾಂಡಲ್ವುಡ್ನಹಿರಿಯನಿರ್ದೇಶಕಎಸ್.ಕೆ. ಭಗವಾನ್ನಿಧನರಾಗಿದ್ದಾರೆ. ವಯೋಸಹಜಕಾಯಿಲೆಯಿಂದಬಳಲುತ್ತಿದ್ದಭಗವಾನ್ ಚಿಕಿತ್ಸೆಫಲಕಾರಿಯಾಗದೇಕೊನೆಯುಸಿರೆಳೆದಿದ್ದಾರೆ. ಕನ್ನಡಸಿನಿಮಾರಂಗದಲ್ಲಿದೊರೈಭಗವಾನ್ಎಂದೇಜೋಡಿಖ್ಯಾತಿಯಾಗಿತ್ತು. ಈಗಾಗಲೇದೊರೆನಿಧನರಾಗಿದ್ದು, ಅವರನ್ನು ಅರಸಿಕೊಂಡು ಭಗವಾನ್ ಹೊರಟಿದ್ದಾರೆ .
ಶ್ರೀನಿವಾಸ್ಕೃಷ್ಣಅಯ್ಯಂಗಾರ್ಭಗವಾನ್ಭಗವಾನ್ ಪೂರ್ಣಹೆಸರು. 1933ರಲ್ಲಿಮೈಸೂರಿನತಮಿಳುಅಯ್ಯಂಗಾರ್ಕುಟುಂಬದಲ್ಲಿಜನಿಸಿದ್ದಇವರು, ರಂಗಭೂಮಿಹಿನ್ನೆಲೆಯುಳ್ಳವರು. ಕಾಲೇಜುದಿನಗಳಲ್ಲಿರಂಗಭೂಮಿಯಸಾಕಷ್ಟುಚಟುವಟಿಕೆಗಳಲ್ಲಿತೊಡಗಿಕೊಂಡವರು. 1956ರಲ್ಲಿಕಣಗಾಲ್ಪ್ರಭಾಕರಶಾಸ್ತ್ರಿಗಳಿಗೆಸಹಾಯಕನಿರ್ದೇಶಕರಾಗಿಸಿನಿಮಾರಂಗಕ್ಕೆಪ್ರವೇಶಮಾಡಿದವರು.
1966ರಲ್ಲಿತೆರೆಕಂಡಸಂಧ್ಯಾರಾಗಚಿತ್ರದಮೂಲಕಸಹಾಯಕನಿರ್ದೇಶಕರಾಗಿಭಡ್ತಿಪಡೆದವರು. ನಂತರನಿರ್ದೇಶಕದೊರೈರಾಜ್ಜೊತೆಗೂಡಿಸ್ವತಂತ್ರನಿರ್ದೇಶಕರಾದವರು. 1993ರಲ್ಲಿದೊರೈರಾಜ್ನಿಧನದನಂತರಒಂಟಿಯಾದರುಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನುಈಜೋಡಿನಿರ್ದೇಶನಮಾಡಿದ್ದುವಿಶೇಷ. ಈಜೋಡಿಯಮತ್ತೊಂದುದಾಖಲೆಯೆಂದರೆ 24 ಕಾದಂಬರಿಆಧರಿಸಿದಸಿನಿಮಾಗಳನ್ನುಈಜೋಡಿನಿರ್ದೇಶನಮಾಡಿದೆ.
ಕನ್ನಡದಅಷ್ಟೂಸೂಪರ್ಸ್ಟಾರ್ಸಿನಿಮಾಗಳಿಗೆನಿರ್ದೇಶನಮಾಡಿದಹೆಗ್ಗಳಿಕೆಈಜೋಡಿಯದ್ದು. ಜೇಡರಬಲೆ, ಕಸ್ತೂರಿನಿವಾಸ, ಎರಡುಕನಸು, ಬಯಲುದಾರಿ, ಗಿರಿಕನ್ಯೆ, ಚಂದನದಗೊಂಬೆ, ಜೀವನಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನಮಾದರಿಸೇರಿದಂತೆ ಇನ್ನೂ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada