ತಮಿಳು ನಟ ವಿಶಾಲ್‌ ಪಾರು.

ಚೆನ್ನೈ: ‘ಮಾರ್ಕ್ ಆಂಟೋನಿ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದ ತಮಿಳು ನಟ-ನಿರ್ಮಾಪಕ ವಿಶಾಲ್ ಕೃಷ್ಣಾ ರೆಡ್ಡಿ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿಡಿಯೊವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿರುವ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ಸಿನಿಮಾದ ಚಿತ್ರೀಕರಣದ ವೇಳೆ ವಿಶಾಲ್‌ ನೆಲದ ಮೇಲೆ ಬೀಳುತ್ತಾರೆ. ಅದೇ ಹೊತ್ತಿಗೆ, ನಿಯಂತ್ರಣ ಕಳೆದುಕೊಂಡ ಭಾರೀ ವಾಹನವೊಂದು ಸಿನಿಮಾ ಸೆಟ್‌ ಅನ್ನು ಗುದ್ದಿಕೊಂಡು ಬಂದು ವಿಶಾಲ್‌ ಪಕ್ಕದಲ್ಲೇ ಬಂದು ನಿಲ್ಲುತ್ತದೆ. ಸಹಕಲಾವಿದರೂ ವಿಶಾಲ್‌ ಅವರನ್ನು ಮತ್ತಷ್ಟು ದೂರಕ್ಕೆ ಒಯ್ಯುವುದು ವಿಡಿಯೊದಲ್ಲಿದೆ.ಈ ಬಗ್ಗೆ ಟ್ವೀಟ್‌ ಮಾಡಿರುವ ವಿಶಾಲ್‌, ‘ಕೆಲವೇ ಸೆಕೆಂಡ್‌, ಕೆಲವೇ ಇಂಚುಗಳಲ್ಲಿ ನನ್ನ ಜೀವ ಉಳಿಯಿತು. ದೇವರಿಗೆ ಧನ್ಯವಾದಗಳು. ಈ ಘಟನೆಯಿಂದ ನಾನು ದಿಗ್ಭ್ರಾಂತನಾಗಿದ್ದೇನಾದರೂ, ಶೂಟಿಂಗ್‌ಗೆ ಹಿಂದಿರುಗಿದ್ದೇನೆ’ ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹದೇಶ್ವರ ಬೆಟ್ಟದ ಕಡೆ": ಪಾದಯಾತ್ರೆಗೆ ನಟ ಧನಂಜಯ ಚಾಲನೆ.

Fri Feb 24 , 2023
ಬ್ರಹ್ಮಚಾರಿ ರೈತರ ಮಕ್ಕಳ ಗೋಳು ಕೇಳುವವರು ಯಾರು? ಮದುವೆ ವಯಸ್ಸು ಮೀರಿದರೂ ಹೆಣ್ಣು ಮಾತ್ರ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಮಂಡ್ಯದ ಬ್ರಹ್ಮಚಾರಿ ಯುವಕರ ತಂಡ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದಾರೆ. ನೊಂದ ಯುವಕರಿಗೆ ಹೆಣ್ಣು ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಲು ಮುಂದಾಗಿದ್ದಾರೆ.ಈ ಪಾದಯಾತ್ರೆಗೆ ನಟ ಧನಂಜಯ ಚಾಲನೆ ನೀಡಿರುವುದು ವಿಶೇಷ.ದೇಶದಲ್ಲಿ ಪುರುಷ ಹಾಗೂ ಮಹಿಳೆಯರ ನಡುವಿನ ಲಿಂಗಾನುಪಾತವು ಸರಿಯಾಗಿಲ್ಲದಿರುವುದು ಹಲವು ಭಾಗಗಳಲ್ಲಿ ಯುವಕರಿಗೆ ಹುಡುಗಿ ಸಿಗದಿರುವುದಕ್ಕೆ ಕಾರಣವಾಗಿದೆ. ಅದರಲ್ಲೂ ರೈತರ […]

Advertisement

Wordpress Social Share Plugin powered by Ultimatelysocial