ಅಣ್ಣಾಸಾಬ ಜೊಲ್ಲೆ ಕಾರಿಗೆ ಮುತ್ತಿಗೆ ಹಾಕಿದ ಸವದಿ ಕಾರ್ಯಕರ್ತರು.!

ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ ಅವರ ಕಾರಿಗೆ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಅವರ ಬೆಂಬಲಿಗರು ಮುತ್ತಿಗೆ ಹಾಕಿದ ಪ್ರಸಂಗ ಜರುಗಿದೆ. ಇಂದು ಅಥಣಿಯ ಲಕ್ಷ್ಮಣ ಸವದಿ ಅವರ ನಿವಾಸಕ್ಕೆ ಆಗಮಿಸಿ ಸುಮಾರು ಎರಡು ಗಂಟೆಗಳ ಕಾಲ ಸವದಿ ಅವರ ಜೊತೆ ಚರ್ಚಿಸಿ ಮರಳುವ ವೇಳೆ ಸವದಿ ಅವರ ಕಾರ್ಯಕರ್ತರು ಬಿಜೆಪಿಗೆ ಧಿಕ್ಕಾರ, ಹೈಕಮಾಂಡ್ ಗೆ ದಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸುತ್ತಾ ಜೊಲ್ಲೆ ಅವರ ಕಾರಿಗೆ ಮುತ್ತಿಗೆ ಹಾಕಿದರು.

ಮುತ್ತಿಗೆ ಹಾಕಿದ ಕಾರ್ಯಕರ್ತರನ್ನು ಚದುರಿಸಲು ಪೋಲಿಸರು ಹರಸಾಹಸ ಪಟ್ಟರು, ಬೆಳಿಗ್ಗೆ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ ರಾಜೇಶ ನೇರ್ಲಿ ಅವರ ಕಾರಿಗೂ ಕೂಡ ಮುತ್ತಿಗೆ ಹಾಕಿದ್ದರು.. ಅನಂತರ ಮಾಧ್ಯಮದವರ ಜೊತೆ ಮಾತನಾಡಿ ಸವದಿ ಅವರು ಪಕ್ಷದಲ್ಲಿ ಉಳೊಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೇರದಾಳ ಮತಕ್ಷೇತ್ರದಲ್ಲಿ ಬೃಹತ ಪ್ರತಿಭಟನೆ..!

Thu Apr 13 , 2023
ಸಿದ್ದು ಸವದಿ ಹಟಾವೋ ತೇರದಾಳ್ ಬಚಾವೋ, ತೇರದಾಳ ಮತಕ್ಷೇತ್ರದಲ್ಲಿ ಬೃಹತ ಪ್ರತಿಭಟನೆ, ಸಿದ್ದು ಸವದಿ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದಕ್ಕೆ ಸ್ಥಳೀಯರ ಆಕ್ರೋಶ,  ಕೇವಲ ಸುಳ್ಳು ಹೇಳುತ್ತಾ ನೇಕಾರ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಕ್ಷೇತ್ರವನ್ನು ಅಭಿವೃದ್ಧಿ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿರುವ,  ಸಿದ್ದು ಸವದಿಯವರಿಗೆ ನೀಡಿದ ಬಿಜೆಪಿ ಟಿಕೆಟ್ ಹಿಂಪಡೆಯಬೇಕು ಎಂದು ವರಿಷ್ಟರಿಗೆ ಆಗ್ರಹಿಸಿದರು. ಸಿದ್ದು ಸವದಿ ಹಟಾವೋ ಬಿಜೆಪಿ ಬಚಾವೋ ಎಂದು ಘೋಷಣೆ ಕೂಗಿದ ಕಾರ್ಯಕರ್ತರು. ಬಾಗಲಕೋಟೆ ಜಿಲ್ಲೆಯ ತೇರದಾಳ […]

Advertisement

Wordpress Social Share Plugin powered by Ultimatelysocial