ಸೆಕ್ಸ್ ಗೆ ಪೀಡಿಸ್ತಾಳೆ, ಊಟ ಹಾಕದೇ ಹಿಂಸೆ ನೀಡ್ತಾಳೆ: ಪತ್ನಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪತಿ

Bengaluru: ಸೆಕ್ಸ್ ಗೆ ಪೀಡಿಸ್ತಾಳೆ, ಊಟ ಹಾಕದೇ ಹಿಂಸೆ ನೀಡ್ತಾಳೆ: ಪತ್ನಿಯ ವಿರುದ್ಧ ಠಾಣೆ ಮೆಟ್ಟಿಲೇರಿದ ಪತಿ
ಗಂಡ-ಹೆಂಡತಿ  ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದ್ರೆ ಕೆಲವೊಂದು ಸಮಸ್ಯೆಗಳು ಬಗೆಹರಿಯದ ಕಾರಣ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತವೆ. ಕೊನೆಗೆ ವಿಚ್ಛೇದನ  ಪಡೆದುಕೊಳ್ಳುವ ಮೂಲಕ ದಂಪತಿ  ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ.
ಆದ್ರೆ ಇಲ್ಲೊಬ್ಬ ಪತಿ ತನ್ನ ಪತ್ನಿಯ ತನ್ನನ್ನು ಪೀಡಿಸುತ್ತಾಳೆ ಎಂದು ದೂರು ದಾಖಲಿಸಿದ್ದಾನೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಿಖಿಲ್ ರಾಜೇಂದ್ರನಾಥ್ ಎಂಬವರು ದೂರು ದಾಖಲಿಸಿದ್ದಾರೆ. 2010ರಲ್ಲಿ ನಿಖಿಲ್ ರಾಜೇಂದ್ರನಾಥ್ ಮದುವೆ ಕೇರಳದ ಯುವತಿ ಜೊತೆ ನಡೆದಿತ್ತು. ಮದುವೆಯಾದ ಕೆಲವೇ ವರ್ಷಗಳಲ್ಲಿ ಪತ್ನಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು.
ಅಕ್ರಮ ಸಂಬಂಧದ ವಿಚಾರ ಪತಿಗೆ ತಿಳಿದರೂ ಮಹಿಳೆ ತನ್ನ ನಡವಳಿಕೆಯನ್ನು ಬದಲಿಸಿಕೊಂಡಿರಲಿಲ್ಲ. ಈ ಬಗ್ಗೆ ನಿಖಿಲ್ ಪ್ರಶ್ನೆ ಮಾಡಿದ್ರೆ, ನೀನು ನನ್ನ ಲೆವಲ್ ಗೆ ಇರುವದಿಲ್ಲ. ನಿನ್ನ ಜೊತೆ ದೈಹಿಕ ಸಂಪರ್ಕ ಹೊಂದಲು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದಳು. ಪತಿಗೆ ಅಕ್ರಮ ಸಂಬಂಧದ ಬಗ್ಗೆ ಗೊತ್ತಾದ್ರೂ ಅದನ್ನು ಮುಂದುವರಿಸಿದ್ದಳು. ನಂತರ ಐವಿಎಫ್ ಮೂಲಕ ಮಗು ಪಡೆಯಲು ಒಪ್ಪಿಕೊಂಡಿದ್ದಳು. 2015ರಲ್ಲಿ ದಂಪತಿಗೆ ಗಂಡು ಮಗು ಜನಿಸಿತ್ತು.

ಪತ್ನಿಯಿಂದ ನಿಂದನೆ, ಆಕೆಯ ಪೋಷಕರಿಂದಲೂ ಬೈಗುಳ;

ಮಗು ಜನಿಸಿದ ಬಳಿಕ ನಿನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇಲ್ಲ ಎಂದು ಆಗಾಗ ಪತಿಯನ್ನು ನಿಂದಿಸುತ್ತಿದ್ದಳು. ಪತ್ನಿಯ ಬಗ್ಗೆ ಆಕೆಯ ಪೋಷಕರ ಗಮನಕ್ಕೆ ತಂದ್ರೂ ಅವರು ಸಹ ಮಗಳ ಪರವಾಗಿ ನಿಂತು ಅಳಿಯನನ್ನು ಬೈದು ಕಳುಹಿಸಿದ್ದಾರೆ. ಇಷ್ಟಾದ್ರು ನಿಖಿಲ್ ಎಲ್ಲವನ್ನು ಸಹಿಸಿಕೊಂಡು ಸಂಸಾರ ನಡೆಸುತ್ತಿದ್ದನು.

ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ನಿಖಿಲ್;

ನಿಖಿಲ್ ಪತ್ನಿಯ ಹೆಸರಿನಲ್ಲಿ ನಿರ್ಮಾಣ ಹಂತದ ಫ್ಯಾಟ್ 68 ಲಕ್ಷ ರೂ.ಗೆ ಖರೀಸಿದ್ದನು. 68 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ನಿಖಿಲ್, ಪ್ರತಿ ತಿಂಗಳು ಇಎಂಐ ಮೂಲಕ ಸಾಲ ಪಾವತಿಸುತ್ತಿದ್ದನು. ಆದ್ರೆ ಕೊರೊನಾ ಲಾಕ್ ಡೌನ್ ಕೆಲಸ ಕಳೆದುಕೊಂಡಿದ್ದ ನಿಖಿಲ್ ರಾಜೇಂದ್ರನಾಥ್ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು.
ಕೆಲಸ ಕಳೆದುಕೊಂಡಿದ್ದರಿಂದ ನಿಖಿಲ್ ನಿಗದಿತ ಸಮಯಕ್ಕೆ ಇಎಂಐ ಪಾವತಿಸಲು ಆಗುತ್ತಿರುಲಿಲ್ಲ. ಇಎಂಐ ಪಾವತಿ ಮಾಡದಕ್ಕೆ ಕೋಪಗೊಂಡ ಪತ್ನಿ ಪ್ರತಿನಿತ್ಯ ಬೈದು ಊಟಕ್ಕೆ ಹಾಕದೇ ಹಿಂಸೆ ನೀಡುತ್ತಿದ್ದಳು.

ಪ್ರಿಯಕರನೊಂದಿಗೆ ಸೇರಿ ಬೆದರಿಕೆ;

ಒಂದು ಮಗುವಾದ್ರೂ ಪ್ರಿಯಕರನೊಂದಿಗೆ ಸಂಪರ್ಕ ಹೊಂದಿರುವ ಮಹಿಳೆ, ಆತನ ಜೊತೆ ಸೇರಿ ಗಂಡ ನಿಖಿಲ್ ಗೆ ಬೆದರಿಕೆ ಹಾಕುತ್ತಿದ್ದಾಳೆ. ಕೆಲ ದಿನಗಳ ಮನೆಗೆ ಅಕ್ರಮವಾಗಿ ನುಗ್ಗಿರುವ ಪತ್ನಿಯ ತಂದೆ ಮತ್ತು ಸಹೋದರರ ಮೌಲ್ಯಯುತ ವಸ್ತುಗಳನ್ನು ಹಾನಿಗೊಳಿಸಿದ್ದಾರೆ. ಜೊತೆಗೆ ದುಬಾರಿ ವಸ್ತುಗಳನ್ನು ಹೊತ್ತುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ನಿಖಿಲ್ ರಾಜೇಂದ್ರನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ನಿಖಿಲ್ ರಾಜೇಂದ್ರನಾಥ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತ ನಿಖಿಲ್ ಪತ್ನಿಯಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪತಿಯನ್ನು ಕೊಂದ ಪತ್ನಿ;

ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗಬಾರದು ಎಂದು ಪತ್ನಿಯೇ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನ ಕೊಲೆಗೈದಿದ್ದ ಪ್ರಕರಣವನ್ನ ನೆಲಮಂಗಲ ಪೊಲೀಸರು ಭೇದಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ದೊಡ್ಡರಾಯಪ್ಪನಹಳ್ಳಿ ನಿವಾಸಿ ಟಾಟಾ ಏಸ್ ಚಾಲಕ 40 ವರ್ಷದ ಬೀರೇಗೌಡನನ್ನು ಆತನ ಪತ್ನಿ ಕಲ್ಪನಾ ಹಾಗೂ ಪ್ರಿಯಕರ ಲಕ್ಷಣ ಹಾಗೂ ಆತನ ಸ್ನೇಹಿತರಾದ ದರ್ಶನ್, ಅಜಯ್, ಪ್ರದೀಪ್ ಸೇರಿಕೊಂಡು ಕೊಲೆಗೈದಿದ್ದರು.
ಕೊಲೆ ಮಾಡಿ ಮೃತ ದೇಹವನ್ನು ಸುಟ್ಟು ಹಾಕುವ ಸಲುವಾಗಿ ಕಾರಿನಲ್ಲಿ ತೆಗೆದುಕೊಂಡು ಹೋಗವ ವೇಳೆ, ಪೊಲೀಸರ ಗಾಡಿ ಗಮನಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಅಪ್ಪಕಾರನಹಳ್ಳಿ ಬಳಿ ಮೃತ ದೇಹವನ್ನು ಮೃತ ಬೀರೇಗೌಡ ಚಲಾಯಿಸುತ್ತಿದ್ದ ಟಾಟಾ ಏಸ್ ವಾಹನಕ್ಕೆ ಹಾಕಿ ಪರಾರಿಯಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ KSRTC ಬಸ್ ಡಿಕ್ಕಿ: ಇಬ್ಬರು ಪ್ರಯಾಣಿಕರಿಗೆ ಗಾಯ

Wed Dec 29 , 2021
ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಬಸ್ ( KSRTC Bus ) ಸೇತುವೆಗೆ ಡಿಕ್ಕಿಯಾದ ಪರಿಣಾಮ, ಪ್ರಯಾಣಿಕರಿಬ್ಬರು ಗಾಯಗೊಂಡಿರೋ ಘಟನೆ ದಾವಣಗೆರೆಯ ನ್ಯಾಮತಿ ಬಳಿ ನಡೆದಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗೋವಿನಕೋವಿ ಬಳಿಯಲ್ಲಿ ಮೈಸೂರಿನಿಂದ ಹೊನ್ನಾಳ್ಳಿಗೆ ತೆರಳುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬಸ್ ನಲ್ಲಿದ್ದಂತ ಇಬ್ಬರು ಪ್ರಯಾಣಿಕರು […]

Advertisement

Wordpress Social Share Plugin powered by Ultimatelysocial