ಸಹನಾ-ಮುರಳಿ ಲಗ್ನಕ್ಕೆ ಮೇಷ್ಟ್ರ ಮನೆಯವರ ಒಪ್ಪಿಗೆ!

ಪುಟ್ಟಕ್ಕನ ಮಕ್ಕಳು  ಜೀ ಕನ್ನಡದ ಹೆಸರಾಂತ ಧಾರಾವಾಹಿ . ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ.
ಪುಟ್ಟಕ್ಕನ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಇನ್ನು ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಸಹನಾ, ಸ್ನೇಹ, ಸುಮಾ. ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ದೊಡ್ಡ ಮಗಳುಸಹನಾ ಪ್ರೀತಿ ಮಾಡ್ತೀರೋ ಮುರಳಿ ಮೇಷ್ಟ್ರು ಜೊತೆ ಮದುವೆ ಮಾಡಿಸಬೇಕು ಎಂದು ಒದ್ದಾಡ್ತಾ ಇದ್ರು. ಈಗ ಅದು ನನಸಾಗಿದೆ. ಮುರುಳಿ ಮನೆಯವರು ಮದುವೆಗೆ  ಒಪ್ಪಿದ್ದಾರೆ.
ಸಹನಾಳನ್ನು ಒಪ್ಪಿದ ಮುರುಳಿ ಮನೆಯವರುಸಹನಾ ಮತ್ತು ಮುರಳಿ ಮೇಷ್ಟ್ರು ಒಬ್ಬರನ್ನೊಬ್ಬರು ಇಷ್ಟ ಪಡ್ತಾ ಇದ್ರು. ಇದಕ್ಕೆ ಪುಟ್ಟಕ್ಕನ ಒಪ್ಪಿಗೆ ಸಿಕ್ಕಿತ್ತು. ಆದ್ರೆ, ಮುರಳಿ ಮೇಷ್ಟ್ರು ಮನೆಯಒಪ್ಪಿರಲಿಲ್ಲ. ಈಗ ಮುರಳಿ ಸರ್ ಮನೆಯಲ್ಲೂ ಮದುವೆಗೆ ಒಪ್ಪಿದ್ದಾರೆ. ಸಹನಾಳನ್ನು ಸೊಸೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.ಮೊದಲು ಸಹನಾಳನ್ನು ಬೇಡ ಎಂದು ಮುರಳಿ ಅಮ್ಮ ಹಠ ಹಿಡಿದಿದ್ದರು. ಆದ್ರೆ ಮನೆಯವರೆಲ್ಲಾ ಒಪ್ಪಿದ ಮೇಲೆ ತಾನು ಒಪ್ಪದಿದ್ರೆ ಸರಿ ಹೋಗಲ್ಲ. ನನಗೆ ಈ ಮದುವೆಗೆ ಒಪ್ಪಿಗೆ ಇದೆ. ನನ್ನ ಮಗನಿಗೆ ನಾನು ಬೇಡ ಆಗಿರಬಹುದು. ಆದ್ರೆ ನನಗೆ ನನ್ನ ಮಗನ ಖುಷಿ ಮುಖ್ಯ ಎಂದು ಹೇಳಿದ್ದಾರೆ. ಆದ್ರೆ ಮನಸ್ಸಿನಲ್ಲಿ ಅವಳು ಬಂದು ಅದ್ಯಾಗೆ ಖುಷಿಯಾಗಿರ್ತಾಳೋ ನೋಡ್ತೀನಿ ಎಂದುಕೊಂಡಿದ್ದಾಳೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ನಟ ಸುಶಾಂತ್​ ಸಿಂಗ್‌​ರದ್ದು ಆತ್ಮಹತ್ಯೆಯಲ್ಲ ಕೊಲೆ

Mon Dec 26 , 2022
ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸುಶಾಂತ್ ಮೃತದೇಹ​ 2020ರ ಜೂನ್​ 14ರಂದು ಮುಂಬಯಿಯ ಬಾಂದ್ರಾದ ಅಪಾರ್ಟ್​​ಮೆಂಟ್​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸಿಬಿಐ ತನಿಖೆಯೂ ಪ್ರಾರಂಭವಾಯಿತು.ಸುಶಾಂತ್ ಸಾವಿನ ಕೇಸ್​​ನಲ್ಲಿ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಜೈಲು ಪಾಲಾಗಿ, ಸಿಬಿಐ ವಿಚಾರಣೆಗೆ ಒಳಪಟ್ಟಿದ್ದಾರೆ. ಸದ್ಯ ಜಾಮೀನಿನ ಆಧಾರದಲ್ಲಿ ಹೊರಗಿದ್ದಾರೆ.ಇನ್ನು ಸುಶಾಂತ್​ ಸಾವಿನೊಂದಿಗೆ ಡ್ರಗ್ಸ್​ ಕೂಡ ಲಿಂಕ್​ […]

Advertisement

Wordpress Social Share Plugin powered by Ultimatelysocial