ನಟ ಸುಶಾಂತ್​ ಸಿಂಗ್‌​ರದ್ದು ಆತ್ಮಹತ್ಯೆಯಲ್ಲ ಕೊಲೆ

ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಸುಶಾಂತ್ ಮೃತದೇಹ​ 2020ರ ಜೂನ್​ 14ರಂದು ಮುಂಬಯಿಯ ಬಾಂದ್ರಾದ ಅಪಾರ್ಟ್​​ಮೆಂಟ್​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಸಿಬಿಐ ತನಿಖೆಯೂ ಪ್ರಾರಂಭವಾಯಿತು.ಸುಶಾಂತ್ ಸಾವಿನ ಕೇಸ್​​ನಲ್ಲಿ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಜೈಲು ಪಾಲಾಗಿ, ಸಿಬಿಐ ವಿಚಾರಣೆಗೆ ಒಳಪಟ್ಟಿದ್ದಾರೆ. ಸದ್ಯ ಜಾಮೀನಿನ ಆಧಾರದಲ್ಲಿ ಹೊರಗಿದ್ದಾರೆ.ಇನ್ನು ಸುಶಾಂತ್​ ಸಾವಿನೊಂದಿಗೆ ಡ್ರಗ್ಸ್​ ಕೂಡ ಲಿಂಕ್​ ಹಾಕಿಕೊಂಡಿದ್ದು, ಎನ್​ಸಿಬಿ, ಸಿಬಿಐ ತನಿಖೆ ನಡೆಯುತ್ತಲೇ ಇದೆ. ಹಾಗೇ ಇಲ್ಲಿ ಹಣಕಾಸಿನ ವಿಷಯದ ನಂಟೂ ಇದ್ದಿದ್ದರಿಂದ ಇಡಿ ಕೂಡ ಹಲವರ ವಿಚಾರಣೆ ಮಾಡಿತ್ತು. ಒಂದು ಹಂತದಲ್ಲಿ ಸುಶಾಂತ್​​ರದ್ದು ಆತ್ಮಹತ್ಯೆ ಎಂದೂ ಹೇಳಲಾಗಿದೆ. ಆದರೆ ಸುಶಾಂತ್ ಕುಟುಂಬದವರು ಮಾತ್ರ, ಇದೊಂದು ಕೊಲೆ ಎಂದೇ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಸದ್ಯ ಈ ಕೇಸ್​​ನ ತನಿಖೆ ಯಾವ ಹಂತದಲ್ಲಿದೆ ಎಂಬುದು ಅಜ್ಞಾತ ಆಗಿರುವ ಹೊತ್ತಲ್ಲೇ ಒಂದು ಮಹತ್ವದ ವಿಷಯ ಬೆಳಕಿಗೆ ಬಂದಿದೆ. ‘ಸುಶಾಂತ್​ ಸಿಂಗ್​ ರಜಪೂತ್​ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ’ ಎಂದು ರೂಪ್​ಕುಮಾರ್ ಶಾ ಎಂಬುವರು ಹೇಳಿದ್ದಾರೆ.ಸುಶಾಂತ್​ ಸಿಂಗ್​ ಮರಣೋತ್ತರ ಪರೀಕ್ಷೆ ನಡೆದ ಕೂಪರ್ ಆಸ್ಪತ್ರೆಯ ಪೋಸ್ಟ್​ಮಾರ್ಟಮ್​ ವಿಭಾಗದ ಸಿಬ್ಬಂದಿಯಾಗಿರುವ ರೂಪ್​ಕುಮಾರ್ ಶಾ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತ ‘ಸುಶಾಂತ್​ ಸಿಂಗ್​ ರಜಪೂತ್​ ಮರಣೋತ್ತರ ಪರೀಕ್ಷೆ ವೇಳೆ ನಾನು ಇದ್ದೆ. ಅಂದು ಸುಶಾಂತ್​ ಮೃತಪಟ್ಟ ದಿನ ನಮ್ಮ ಆಸ್ಪತ್ರೆಗೆ ಒಟ್ಟು ಐದು ಮೃತದೇಹಗಳು ಬಂದಿದ್ದವು. ಒಟ್ಟು ಐದು ಶವಗಳಲ್ಲಿ ಒಂದು ವಿಐಪಿಯೊಬ್ಬರ ಮೃತದೇಹ ಎಂದು ಹೇಳಲಾಗಿತ್ತು. ಆದರೆ ಯಾರದ್ದು ಎಂದು ಗೊತ್ತಾಗಿರಲಿಲ್ಲ. ಬಳಿಕ ಅದು ಸುಶಾಂತ್​ ಸಿಂಗ್​ ರಜಪೂತ್​​ದು ಎಂಬುದು ಗೊತ್ತಾಯಿತು. ಶವ ಪರೀಕ್ಷೆ ವೇಳೆ ಅವರ ದೇಹವನ್ನ ನೋಡಿದಾಗ ಅಲ್ಲಿ ಅನೇಕ ಗಾಯದ ಗುರುತುಗಳು ಕಂಡುಬಂದವು. ಕುತ್ತಿಗೆಯ ಮೇಲೆ ಎರಡರಿಂದ ಮೂರು ಗಾಯದ ಗುರುತು ಇದ್ದವು. ಇಡೀ ಪೋಸ್ಟ್​ಮಾರ್ಟಮ್​​ನ್ನು ವಿಡಿಯೊ ರೆಕಾರ್ಡ್ ಮಾಡುವುದು ನಿಯಮ. ಆದರೆ ಹಿರಿಯ ಅಧಿಕಾರಿಗಳು ಅದು ಬೇಡ ಎಂದರು. ಕೆಲವು ಫೋಟೋಗಳನ್ನು ಮಾತ್ರ ತೆಗೆದಿಟ್ಟುಕೊಳ್ಳುವಂತೆ ಹೇಳಿದರು. ಹಾಗಾಗಿ ಅಷ್ಟನ್ನೇ ಮಾಡಿದೆವು’ ಎಂದು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕಳೆದು ಹೋದ ತಾಳಿ ಬದಲು ಅರಿಶಿನ ದಾರ ಕಟ್ಟಿದ ಭೂಪತಿ

Mon Dec 26 , 2022
  ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ  ಧಾರಾವಾಹಿ  ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ  ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ […]

Advertisement

Wordpress Social Share Plugin powered by Ultimatelysocial