ಕಲರ್ಸ್ ಕನ್ನಡದಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ.
ನಾಯಕಿ ನಕ್ಷತ್ರಾ ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದನಾಯಕಿ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ, ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈ ಎಲ್ಲಾ ಸಮಸ್ಯೆಗಳ ಮಧ್ಯೆ ನಕ್ಷತ್ರಾ ತಾಳಿ ಕಟ್ ಆಗಿದೆ. ಅದಕ್ಕೆ ಭೂಪತಿ ಮತ್ತೊಮ್ಮೆ ನಕ್ಷತ್ರಾಗೆ ಅರಿಶಿನ ದಾರ ಕಟ್ಟಿದ್ದಾನೆ.ಕಟ್ ಆಗಿತ್ತು ನಕ್ಷತ್ರಾ ತಾಳಿಭೂಪತಿ ಮನವೊಲಿಸಿಕೊಳ್ಳೋ ಪ್ರಯತ್ನದಲ್ಲಿದ್ದ ನಕ್ಷತ್ರಾಗೆ ಆತಂಕವೊಂದು ಎದುರಾಗಿತ್ತು. ಆಕೆಯ ಕತ್ತಿನಲ್ಲಿದ್ದ ತಾಳಿ ಕಟ್ ಆಗಿ ಬಿದ್ದಿತ್ತು. ಅದಕ್ಕೆ ಗಾಬರಿಗೊಂಡಿದ್ದಳು. ಏನಾದ್ರೂ ಅನಾಹುತ ಆಗುತ್ತಾ ಅಂತ ಭಯಗೊಂಡಿದ್ದಳು. ತಾಯಿ ಸಹಲೆಯಂತೆ ಅಕ್ಕೆ ಪೂಜೆ ಮಾಡಬೇಕು ಎನ್ನುವಷ್ಟರಲ್ಲಿ ಅದು ಕಳೆದು ಹೋಗಿರುತ್ತೆ.ತಾಳಿ ಕದ್ದಿದ್ದ ಶ್ವೇತಾನಕ್ಷತ್ರಾಳಿಗೆ ತೊಂದ್ರೆ ಕೊಡಬೇಕು ಎಂದು ಶ್ವೇತಾ ಆ ತಾಳಿಯನ್ನು ಕದ್ದಿರುತ್ತಾಳೆ. ಅದನ್ನು ಮಾರಿ ಹಣ ಕೂಡ ತೆಗೆದುಕೊಂಡಿರುತ್ತಾಳೆ. ಅಲ್ಲದೇ ನಕ್ಷತ್ರಾ ಮುಂದೆ ತಾನೇ ತಾಳಿ ಕದ್ದಿದ್ದು ಎಂದು ಒಪ್ಪಿಕೊಂಡಿರುತ್ತಾಳೆ. ನಿನ್ನ ಕೈಯಲ್ಲಿ ಏನೂ ಮಾಡಲು ಆಗಲ್ಲ ಎಂದು ಸವಾಲು ಹಾಕಿರುತ್ತಾಳೆ.ತಾಳಿ ಕಳೆದು ಹೋಗಿದ್ದಕ್ಕೆ ನಕ್ಷತ್ರಾ ಕಂಗಾಲಾಗಿ ಹೋಗಿದ್ದಾಳೆ. ಅದು ಸಿಗಲೇ ಬೇಕು ಎಂದು ಉಪವಾಸ ವ್ರತ ಮಾಡ್ತಾ ಇದ್ದಾಳೆ. ಅಲ್ಲದೇ ಕೈ ಯಲ್ಲಿ ಕರ್ಪೂರ ಹಿಡಿದು ನಿಂತಿದ್ದಾಳೆ. ಅದನ್ನು ನೋಡಿದ ಭೂಪತಿ ಬೇಸರವಾಗಿದೆ. ಕರ್ಪೂರ್ ಕೈಯಿಂದ ಬೀಸಾಕಿ, ಆಕೆಯನ್ನು ದೇವರ ಮನೆ ಬಳಿ ಕರೆದುಕೊಂಡು ಹೋಗಿದ್ದಾನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: