ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿಯಾದ ನಟಿ ಶರ್ಮಿಳಾ ಮಾಂಡ್ರೆ !

 

ಸಧ್ಯ ಗಾಳಿಪಟ 2 ಸಿನಿಮಾ ಬಿಡುಗಡೆಯ ಹಿನ್ನೆಲೆ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿರುವ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಬ್ಯುಸಿ ಶೆಡ್ಯೂಲ್​ನ ನಡುವೆಯೂ ಬಿಡುವು ಮಾಡಿಕೊಂಡು ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡಿದ್ದಾರೆ.

ಚಂದನವನದಲ್ಲಿ ಗಾಳಿಪಟ 2, ದಸರಾ ಹಾಗೂ ಮಂಡಲ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶರ್ಮಿಳಾ ಮಾಂಡ್ರೆ ಶಿರಡಿ ಸಾಯಿ ಬಾಬಾನ ದರ್ಶನವನ್ನು ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

ಶ್ವೇತ ವರ್ಣದ ಕುರ್ತಾ ಹಾಗೂ ದುಪ್ಪಟ್ಟಾ ಧರಿಸಿರುವ ನಟಿ ಶರ್ಮಿಳಾ ದೇವತೆಯಂತೆ ಕಾಣ್ತಿದ್ದಾರೆ.

ದೇವಸ್ಥಾನದ ಹೊರಗೆ ನಿಂತು ಫೋಟೋ ಕ್ಲಿಕ್ಕಿಸಿರುವ ಶರ್ಮಿಳಾ ಇನ್​ಸ್ಟಾಗ್ರಾಂನಲ್ಲಿ ಶಿರಡಿ ಸಾಯಾಬಾಬಾ ಮಂದಿರ ವಿಸಿಟ್​ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಶಿರಡಿಯಲ್ಲಿ ಅದ್ಭುತ ದರ್ಶನವಾಯಿತು, ಓಂ ಸಾಯಿರಾಮ್​ ಎಂದು ಬರೆದುಕೊಂಡಿದ್ದಾರೆ.‌

ಸಜನಿ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿರುವ ನಟಿ ಶರ್ಮಿಳಾ ಮಾಂಡ್ರೆ ಧ್ಯಾನ್​​ಗೆ ನಾಯಕಿಯಾಗಿ ನಟಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಿವಿಯಲ್ಲಿ ನೂಪುರ್‌ ಕ್ಷಮೆ ಕೇಳಲೇಬೇಕು: ಸುಪ್ರೀಂಕೋರ್ಟ್‌ ಮಹತ್ವದ ಆದೇಶ

Fri Jul 1 , 2022
  ಪ್ರವಾದಿ ವಿರುದ್ಧ ಬಿಜೆಪಿ ಉಚ್ಛಾಟಿತ ನಾಯಕಿ ನೂಪುರ್‌ ಶರ್ಮ ನೀಡಿದ ಹೇಳಿಕೆ ಪ್ರಚೋದನೆ ಮಾಡುವ ಉದ್ದೇಶ ಹೊಂದಿದ್ದು, ಆಕೆ ಟಿವಿಯಲ್ಲಿ ಕ್ಷಮೆ ಕೇಳಲೇಬೇಕು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. ತಮ್ಮ ಮೇಲಿನ ಎಲ್ಲಾ ದೂರುಗಳನ್ನು ಒಂದೇ ಕಡೆ ವರ್ಗ ಮಾಡುವಂತೆ ನೂಪುರ್‌ ಶರ್ಮ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಪ್ರವಾದಿಗಳ ವಿರುದ್ಧ ಮಾಡಿರುವ ಹೇಳಿಕೆ ಒಂದು ಕೀಳು ಮಟ್ಟದ ಪ್ರಚಾರ ಪಡೆಯುವ ಉದ್ದೇಶ ಹೊಂದಿರಬೇಕು ಅಥವಾ ನೀಚ ಕೆಲಸದ […]

Advertisement

Wordpress Social Share Plugin powered by Ultimatelysocial