ನಟ ಶಾರುಖ್ ಖಾನ್‌ ಇಂದಾಗಿ ಪರೋಕ್ಷವಾಗಿ ವ್ಯಕ್ತಿಯೊಬ್ಬರ ಜೀವ

 ಜೀವ ನಷ್ಟವಾಗಿದ್ದ ಪ್ರಕರಣ ದಲ್ಲಿ ಶಾರುಖ್ ನಿರಾಳರಾಗಿದೆ. ನ್ಯಾಯಾಲವು ಅವರ ವಿರುದ್ಧದ ಕ್ರಿಮಿನಲ್ ಪ್ರಕರಣದಿಂದ ಖುಲಾಸೆಗೊಳಿಸಿದೆ.

2017 ರ ಸಮಯದಲ್ಲಿ ನಟ ಶಾರುಖ್ ಖಾನ್ ತಮ್ಮ ಹೊಸ ಸಿನಿಮಾ ‘ರಯೀಸ್’ ಪ್ರಚಾರದ ಸಂದರ್ಭ ಗುಜರಾತ್‌ನ ವಡೋದರಾದ ರೈಲ್ವೆ ನಿಲ್ದಾಣಕ್ಕೆ ಬಂದಾಗ, ಶಾರುಖ್ ಖಾನ್ ರೈಲ್ವೆ ನಿಲ್ದಾಣಕ್ಕೆ ಬಂದ ವಿಷಯ ತಿಳಿದು ಸಾವಿರಾರು ಜನ ಶಾರುಖ್ ರನ್ನು ನೋಡಲು ಮುಗಿಬಿದ್ದ ಪರಿಣಾಮ ದೊಡ್ಡ ಪ್ರಮಾಣದ ಕಾಲ್ತುಳಿತ ಉಂಟಾಗಿತ್ತು.

‘ರಯೀಸ್’ ಸಿನಿಮಾದ ಪ್ರಚಾರಕ್ಕಾಗಿ ಮುಂಬೈನಿಂದ ದೆಹಲಿಗೆ ಕ್ರಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ರೈಲು ವಡೋಧರಾಕ್ಕೆ ಬಂದಾಗ ಶಾರುಖ್ ಖಾನ್ ಅನ್ನು ನೋಡಲು ಜನ ಮುಗಿಬಿದ್ದರು. ಈ ಸಮಯ ಶಾರುಖ್ ಖಾನ್ ರೈಲಿನಿಂದ ಸ್ಮೈಲಿ ಬಾಲ್‌ಗಳು, ಟಿ ಶರ್ಟ್‌ಗಳನ್ನು ಜನರತ್ತ ಎಸೆದರು. ಅದನ್ನು ಎತ್ತಿಕೊಳ್ಳಲು ಹೋಗಿ ಇನ್ನಷ್ಟು ಕಾಲ್ತುಳಿತವಾಯ್ತು. ಅದೇ ಸಮಯದಲ್ಲಿ ಫರ್ಹೀದ್ ಖಾನ್ ಪಠಾಣ್ ಎಂಬ ಸ್ಥಳೀಯ ರಾಜಕಾರಣಿಯೊಬ್ಬರು ಸಹ ಕಾಲ್ತುಳಿಕ್ಕೆ ಸಿಲುಕಿದ್ದರು.

ಕಾಲ್ತುಳಿತದಿಂದಾಗಿ ಹಲವರು ಗಾಯಗೊಂಡಿದ್ದರು, ಈ ಘಟನೆಯಲ್ಲಿ ಫರ್ಹೀದ್ ಖಾನ್ ಪಠಾಣ್ ಹೆಸರಿನ ಸ್ಥಳೀಯ ರಾಜಕೀಯ ಮುಖಂಡರೊಬ್ಬರು ಕಾಲ್ತುಳಿತಕ್ಕೆ ಸಿಲುಕಿ ಅವರಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದರು.

ನಟನೆ ಸಂಬಂಧ ಜಿತೇಂಧರ್ ಸೋಲಂಕಿ ಎಂಬುವರು ಶಾರುಖ್ ಖಾನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಯತ್ನಿಸಿದ್ದರು. ಆದರೆ ಅವರ ದೂರನ್ನು ಪೊಲೀಸರು ಸ್ವೀಕರಿಸಿರಲಿಲ್ಲ. ಆಗ ವಡೋಧರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಜಿತೇಂಧರ್, ಶಾರುಖ್ ಖಾನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸುವಂತೆ ಮನವಿ ಸಲ್ಲಿಸಿದ್ದರು. ಅಂತೆಯೇ ಖಾನ್ ವಿರುದ್ಧ ಸೆಕ್ಷನ್ 336, 337, 338 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತಮ್ಮ ಮೇಲಿ ದಾಖಲಾಗಿಸಿರುವ ಪ್ರಕರಣವನ್ನು ರದ್ದು ಮಾಡಬೇಕೆಂದು ಶಾರುಖ್ ಖಾನ್ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಶಾರುಖ್ ಖಾನ್ ಪರ ವಾದ ಮಂಡಿಸಿದ ಮಿಹಿರ್ ಟೋಕ್ರೆ, ”ಸ್ಮೈಲಿ ಬಾಲ್‌ಗಳನ್ನು ಎಸೆಯುವುದು, ಟಿ ಶರ್ಟ್‌ಗಳನ್ನು ಎಸೆಯುವುದನ್ನು ಬೇಜವಾಬ್ದಾರಿ ಅಥವಾ ಜನರಿಗೆ ತೊಂದರೆ ನೀಡುವ ಉದ್ದೇಶದಿಂದ ಮಾಡಿದ್ದು ಎನ್ನಲಾಗದು” ಎಂದು ವಾದಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಗುಜರಾತ್ ನ್ಯಾಯಾಲಯ ಶಾರುಖ್ ಖಾನ್ ಅನ್ನು ಪ್ರಕರಣದಿಂದ ಖುಲಾಸೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಂಗನಾ ರಣಾವತ್​ ಅವರು ಬೇರೆ ಎಲ್ಲ ಭಾಷೆಯನ್ನೂ ಬಿಟ್ಟು ಸಂಸ್ಕೃತದ ಪರ ಬ್ಯಾಟ್​ ಬೀಸಿದ್ದಾರೆ.

Sat Apr 30 , 2022
  ಸಂಸ್ಕೃತ ನಮ್ಮ ರಾಷ್ಟ್ರ ಭಾಷೆ ಆಗಲಿ ಎಂದು ಅವರು ಹೇಳಿದ್ದಾರೆ.ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ರಾಷ್ಟ್ರ ಭಾಷೆಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಟಿ ಕಂಗನಾ ರಣಾವತ್​  ಸುಮ್ಮನೇ ಇರುತ್ತಾರಾ? ಖಂಡಿತಾ ಇಲ್ಲ. ಎಲ್ಲ ವಿಚಾರದಲ್ಲಿಯೂ ಮೂಗು ತೂರಿಸುವ ಅವರು ಈಗ ಅಜಯ್​ ದೇವಗನ್​ ವರ್ಸಸ್​ ಕಿಚ್ಚ ಸುದೀಪ್​ ವಿಷಯದಲ್ಲೂ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಹಿಂದಿ ರಾಷ್ಟ್ರ ಭಾಷೆ ಎಂದು ಅಜಯ್​ ದೇವಗನ್​ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ’ ಎಂದುಕಂಗನಾ ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial