ಹೊಸ ಬಡಾವಣೆಯಲ್ಲಿ ವಿಕ್ರಮ ರೈತ ಯುವಕರ ಕ್ಷೇಮಾಭಿವೃದ್ಧಿ ಸಂಘವು ಪ್ರತಿ ವರ್ಷದಂತೆ ಈ ವರ್ಷವೂ ಉಪ್ಪು ಮತ್ತು ಇತರೆ ಬಣ್ಣಗಳಿಂದ ಶಿವಮೂರ್ತಿಯನ್ನು ಅಲಂಕಾರ ಮಾಡಿದ್ದು, ಸಂಜೆ ಜಾಗರಣೆ ಪ್ರಯುಕ್ತ ಆರ್ಕೆಸ್ಟ್ರಾ ಇತರೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಂಡು ವಿಜೃಂಭಣೆಯಿಂದ ಆಚರಿಸಿದರು.ಹಬ್ಬದ ಪ್ರಯುಕ್ತ ಬೇತಮಂಗಲ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮ ಗಳಿಂದ ನಾಗರಿಕರು ಪಾಲ್ಗೋಂಡು ಮನರಂಜನೆ ಕಾರ್ಯಕ್ರಮ ವೀಕ್ಷಿಸಿದರು.
ಉಪ್ಪು ಮತ್ತು ಇತರೆ ಬಣ್ಣಗಳಿಂದ ಮತ್ತು ವಿದ್ಯುತ್ ದ್ವೀಪಗಳಿಂದ ಅಲಂಕಾರಗೊಂಡಿದ್ದ ಶಿವಮೂರ್ತಿ ದೇವರಿಗೆ ವಿಶೇಷ ಪೂಜೆ, ತೀರ್ಥ ಪ್ರಸಾದವನ್ನು ಸಹ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಲವಾರು ಮುಖಂಡರು ಆರ್ಥಿಕವಾಗಿ ಸಹಕಾರ ನೀಡಿರುವುದಾಗಿ ವಿಕ್ರಮ ರೈತ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada