ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಮೊದಲಿನಿಂದಲೂ ಇದೆ. ನಮ್ಮ ಸಿನಿಮಾಗಳು ಮೊದಲಿನಿಂದಲೂ ಅಲ್ಲಿಯಶಸ್ವಿಯಾಗಿವೆ. ಆದರೆ ಅದು ಟಿವಿಗಳಲ್ಲಿ ಮಾತ್ರ. ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿಬಿಡುಗಡೆ ಮಾಡುತ್ತಿದ್ದೇವೆ. ಅವು ಅವರಿಗೆ ಇಷ್ಟವಾಗುತ್ತಿವೆ. ಹಾಗಾಗಿ ನನ್ನ ಮುಂದಿನ ಸಿನಿಮಾವನ್ನು ಸಹ ಎಲ್ಲಾ ಭಾಷೆಗಳಲ್ಲಿಯೂ ರಿಲೀಸ್ ಮಾಡಲು ಪ್ಲಾನ್ ಮಾಡುತ್ತಿದ್ದೇವೆ.ನಾವು ಸುಖಾಸುಮ್ಮನೆ ಸಿನಿಮಾವನ್ನು ಬೂಸ್ಟ್ ಮಾಡುತ್ತಿಲ್ಲ. ಕಂಟೆಂಟ್ ಅನ್ನು ಜನ ಇಷ್ಟಪಟ್ಟರೆ ಸಾಕು ಎಂಬುದು ನಮ್ಮ ಅಭಿಪ್ರಾಯ. ಅದಕ್ಕೆ ತಕ್ಕಂತಹ ಪ್ರಚಾರವನ್ನೂ ಮಾಡುತ್ತೇವೆ. ನನಗೆ ಕಂಟೆಂಟ್ ಮಾತನಾಡಬೇಕು ಎಂಬ ಆಸೆ ಇದೆ. ‘ಲಾಠಿ’ ಚಿತ್ರದಲ್ಲಿ ಕಾನ್ಸ್ಟೆಬಲ್ ಒಬ್ಬರ ಕಥೆಯನ್ನು ಹೇಳಿದ್ದೇವೆ. ಸಾಮಾನ್ಯವಾಗಿ ಹಿರಿಯ ಅಧಿಕಾರಿಗಳ ಕಥೆಯನ್ನು ತೆರೆಮೇಲೆ ತರುತ್ತೇವೆ. ಮೊದಲ ಬಾರಿಗೆ ಕಾನ್ಸ್ಟೆಬಲ್ ಒಬ್ಬರ ಬದುಕನ್ನು ಸಿನಿಮಾವಾಗಿಸಿದ್ದೇವೆ. ಈ ಚಿತ್ರ ಪ್ರತಿಯೊಬ್ಬ ಕಾನ್ಸ್ಟೆಬಲ್ಗೆ ನಮ್ಮ ಕಡೆಯಿಂದ ಅರ್ಪಣೆ.ನಮ್ಮ ತಂದೆ ಕನ್ನಡಿಗರು. ನನಗೆ ಚಿಕ್ಕ ವಯಸ್ಸಿನಿಂದಲೂ ಬೆಂಗಳೂರಿನ ಕನೆಕ್ಷನ್ ಕೊಂಚ ಹೆಚ್ಚಾಗಿಯೇ ಇದೆ. ಶಾಲಾ ದಿನಗಳಲ್ಲಿ ಬೇಸಿಗೆ ರಜೆ ಬಂತು ಎಂದರೆ ಬೆಂಗಳೂರಿಗೆ ಬರುತ್ತಿದ್ದೆ. ನಮ್ಮ ಸಹೋದರರು, ಕಸಿನ್ಸ್ ಎಲ್ಲರೂ ಇಲ್ಲೇ ಇದ್ದಾರೆ. ಅವರ ಮನೆಗೆ ಬಂದು ಆರಾಮಾಗಿ ಓಡಾಡಿಕೊಂಡು ಹೋಗುತ್ತಿದ್ದೆ. ಹಾಗಾಗಿ ಕನ್ನಡ ಸ್ವಲ್ಪ ಗೊತ್ತು. ಕರ್ನಾಟಕವೂ ಗೊತ್ತು. ಈಗ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸ್ನೇಹಿತರಿದ್ದಾರೆ. ಯಶ್, ಶಿವಣ್ಣ, ಅಪ್ಪು ಅವರು ಹೀಗೆ ಹಲವರು ಪರಿಚಯ.ಹೌದು, ಸಿನಿಮಾ ಇಷ್ಟವಾಗಲು ಕಂಟೆಂಟ್ ಮೊದಲು, ನಂತರ ಆ್ಯಕ್ಷನ್, ಮಾಸ್ಗೆ ಬೇಕಾಗುವ ಅಂಶಗಳು ಹೀಗೆ ಹಲವು ಸೇರಿಕೊಳ್ಳುತ್ತವೆ. ‘ಲಾಠಿ’ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳಿವೆ. ಹೊಸ ನಿರ್ದೇಶಕರು ಹೊಸ ರೀತಿಯಲ್ಲಿ ಆಲೋಚನೆ ಮಾಡಿಕೊಂಡು ಬರುತ್ತಾರೆ. ನನಗೆ ಈ ಸಿನಿಮಾದ ಕಂಟೆಂಟ್ ಇಷ್ಟವಾಗಿ ಒಪ್ಪಿಕೊಂಡೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….