ಶಾರ್ಟ್ ಸರ್ಕ್ಯೂಟ್:ಒಂದು ಎಕರೆ ಕಬ್ಬಿನ ಬೆಳೆ ಭಸ್ಮ ..!

 

ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಆಕಸ್ಮಿಕದಲ್ಲಿ, ಒಂದು ಎಕರೆ ಕಬ್ಬಿನ ಬೆಳೆ ಭಸ್ಮವಾಗಿರುವ ಘಟನೆ ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.

ರೈತ ಎಂ.ಕೆ.ದೊರೆಸ್ವಾಮಿ ಅವರಿಗೆ ಸೇರಿದ ಜಮೀನಿಗೆ , ಕಬ್ಬಿನ ಗದ್ದೆಗೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿ ಒಂದು ಎಕರೆಗೂ ಹೆಚ್ಚು ಕಬ್ಬು ನಾಶವಾಗಿದೆ ಎಂದು ಅಂದಾಜಿಸಲಾಗಿದೆ. ಕಬ್ಬಿನ ಗದ್ದೆಗೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ತಗುಲಿ ಒಂದು ಎಕರೆಗೂ ಹೆಚ್ಚು ಬೆಳೆ ಭಸ್ಮವಾಗಿರುವ ಈ ಘಟನೆಯು ಶನಿವಾರ ನಡೆದ್ದಿದೆ. ಸಾಲ ಮಾಡಿ ತಮ್ಮ ಜಮೀನಿನಲ್ಲಿ ಕಬ್ಬು ಬೆಳೆದಿಂದ ರೈತ ಎಂ.ಕೆ.ದೊರೆಸ್ವಾಮಿ.

ಈಗಾಗಲೇ ಕಟಾವಿಗೆ ಬಂದಿದ್ದ ಕಬ್ಬು ಸಂರ್ಪೂಣ ನಾಶವಾಗಿದ್ದೆ . ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರು 20ತಿಂಗಳದರೂ ಕಬ್ಬು ಕಟಾವು ಮಾಡಿರುವುದಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಹೋಗಿ ನಾಶವಾಗಿದು, ರೈತ ಕಂಗಾಲಾಗಿದ್ದಾನೆ ಸುಟ್ಟು ಹೋದ ಕಬ್ಬಿನ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ದೊರೆಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ .

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಡುಗೆ ಮನೆಯಲ್ಲೇ ಇರುವ ಈ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳಿ.

Sun Feb 26 , 2023
ನಮ್ಮನ್ನು ನಿತ್ಯವೂ ಕಾಡುವ ಅದೆಷ್ಟೋ ನೋವುಗಳಿಗೆ ಆಸ್ಪತ್ರೆಗೆ ಅಲೆಯಬೇಕಾಗಿಲ್ಲ. ಅದಕ್ಕೆಲ್ಲ ಮದ್ದು ನಿಮ್ಮ ಅಡುಗೆ ಮನೆಯಲ್ಲೇ ಇದೆ. ಅದು ಕೂಡ ನೈಸರ್ಗಿಕವಾದ ಮನೆ ಮದ್ದು. ಹಾಗಿದ್ರೆ ಆ ನೋವು ಯಾವುದು? ಅದಕ್ಕೇನು ಮದ್ದು ಅನ್ನೋದನ್ನು ನೋಡೋಣ.ಮುಟ್ಟಿನ ನೋವು :ಸ್ತ್ರೀಯರಿಗೆ ಪ್ರತಿ ತಿಂಗಳು ಮುಟ್ಟಿನ ನೋವು ಸಾಮಾನ್ಯ.ಆ ನೋವಿನಿಂದ ಪಾರಾಗಲು ಪ್ರತಿನಿತ್ಯ ತಣ್ಣೀರಿಗೆ 2-3 ನಿಂಬೆಹಣ್ಣಿನ ರಸ ಬೆರೆಸಿ ಕುಡಿಯಿರಿ.ದೀರ್ಘ ಕಾಲದ ತಲೆನೋವು : ನಿಮಗೆ ಆಗಾಗ ತಲೆನೋವು ಬರ್ತಾ ಇದ್ರೆ […]

Advertisement

Wordpress Social Share Plugin powered by Ultimatelysocial