ನಾಯಕಿ ಶ್ರೀನಿಧಿ ಶೆಟ್ಟಿ ‘ಕೆಜಿಎಫ್ 2’ ಸಿನಿಮಾದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ.

‘ಕೆಜಿಎಫ್ 2’ ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಆಗಲಿದೆ ಆದರೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಪೂರ್ಣವಾಗಿ ಮುಗಿದಿಲ್ಲ. ಇನ್ನೂ ಕೆಲವು ಕೆಲಸಗಳು ಬಾಕಿ ಇವೆ.ನಿನ್ನೆಯಷ್ಟೆ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ ‘ಕೆಜಿಎಫ್ 2′ ಸಿನಿಮಾದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ.ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ಮುಗಿಸಿದ್ದಾರಾದರೂ ಇನ್ನೂ ಕೆಲವು ನಟರ ಡಬ್ಬಿಂಗ್ ಬಾಕಿ ಇದೆ ಎನ್ನಲಾಗುತ್ತಿದೆ.’ಕೆಜಿಎಫ್ 2’ಸಿನಿಮಾದ ಡಬ್ಬಿಂಗ್ ಮುಗಿಸಿದ ವಿಷಯವನ್ನು ಸಾಮಾಜಿಕ ಜಾಲತಾಣದ ಮೂಲಕ ನಟಿ ಶ್ರೀನಿಧಿ ಶೆಟ್ಟಿ ಹಂಚಿಕೊಂಡಿದ್ದಾರೆ. ಸಿನಿಮಾಕ್ಕೆ ಡಬ್ಬಿಂಗ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಸಹ ಶ್ರೀನಿಧಿ ಶೆಟ್ಟಿ ಹಂಚಿಕೊಂಡಿದ್ದಾರೆ’ಕೆಜಿಎಫ್ 2’ ಸಿನಿಮಾಕ್ಕೆ ಡಬ್ಬಿಂಗ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಶ್ರೀನಿಧಿ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ”ಇದಕ್ಕಾಗಿ ನನ್ನ ಪೂರ್ಣ ಹೃದಯವನ್ನು ಅರ್ಪಿಸಿ ಎಲ್ಲವನ್ನೂ ಮುಗಿಸಿದ್ದೇನೆ. ನಿಮ್ಮನ್ನೆಲ್ಲ ಏಪ್ರಿಲ್ 14 ರಂದು ಭೇಟಿ ಆಗಲಿದ್ದೇನೆ. ‘ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ’ ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಶ್ರೀನಿಧಿ ಬರೆದುಕೊಂಡಿದ್ದಾರೆ.’ಕೆಜಿಎಫ್ 2′ ಸಿನಿಮಾದ ಚಿತ್ರೀಕರಣವನ್ನು ಶ್ರೀನಿಧಿ ಶೆಟ್ಟಿ ಮುಗಿಸಿದ್ದು ಒಂದು ತಿಂಗಳ ಹಿಂದೆಯಷ್ಟೆ. ಡಿಸೆಂಬರ್ 21, 2021ರಂದು ಶ್ರೀನಿಧಿ ಶೆಟ್ಟಿ ‘ಕೆಜಿಎಫ್ 2’ ಸಿನಿಮಾದ ಚಿತ್ರೀಕರಣ ಮುಗಿಸಿದ್ದರು. ‘2016ರಲ್ಲಿ ಈ ಸಿನಿಮಾಕ್ಕೆ ಸಹಿ ಹಾಕಿದೆ. ಮೂರು ವರ್ಷಗಳ ಬಳಿಕ ಇಂದು ಚಿತ್ರೀಕರಣ ಮುಗಿಸುತ್ತಿದ್ದೇನೆ” ಎಂದು ಶ್ರೀನಿಧಿ ಶೆಟ್ಟಿ ಬರೆದುಕೊಂಡಿದ್ದರು. ಈ ಸಿನಿಮಾ ನನ್ನ ಪಾಲಿಗೆ ಬಹಳ ವಿಶೇಷವಾದುದು ಎಂದು ಸಹ ಶ್ರೀನಿಧಿ ಶೆಟ್ಟಿ ಬರೆದುಕೊಂಡಿದ್ದರು.ಕೆಲವು ದಿನಗಳ ಹಿಂದಷ್ಟೆ ‘ಕೆಜಿಎಫ್ 2′ ಚಿತ್ರತಂಡ ಕರಾವಳಿ, ಮಲೆನಾಡು ಭಾಗದ ಕೆಲವು ದೇವಾಲಯಗಳಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದಿದ್ದಾರೆ. ಸಿನಿಮಾದ ಪ್ರಚಾರ ಕಾರ್ಯ ಆರಂಭಿಸುವ ಮುನ್ನ ನಟ ಯಶ್, ನಿರ್ಮಾಪಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಇನ್ನೂ ಕೆಲವರು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಕೆಲವೇ ದಿನಗಳಲ್ಲಿ ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಲಿರುವ ಕಾರಣ ಈ ಟೆಂಪಲ್ ರನ್ ಅನ್ನು ಚಿತ್ರತಂಡ ಮಾಡಿದೆ.’ಕೆಜಿಎಫ್ 2’ ಸಿನಿಮಾವು ಏಪ್ರಿಲ್ 24 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಯಶ್ ಜೊತೆಗೆ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರುಗಳ ಪಾತ್ರಗಳು ಸಹ ಮುಖ್ಯ ಆಕರ್ಷಣೆಯಾಗಿರಲಿವೆ. ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗುವ ದಿನವೇ ಅಮೀರ್ ಖಾನ್‌ರ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ ಸಹ ಬಿಡುಗಡೆ ಆಗಲಿದೆ. ಆದರೆ ಆ ಸಿನಿಮಾ ‘ಕೆಜಿಎಫ್ 2’ ಗೆ ಯಾವುದೇ ಪೈಪೋಟಿ ನೀಡುವುದಿಲ್ಲ ಎನ್ನಲಾಗುತ್ತಿದೆ. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ 2018 ರ ಡಿಸೆಂಬರ್ ನಲ್ಲಿ ಬಿಡುಗಡೆ ಆಗಿತ್ತು. ಅದಾದ ಬಹುತೇಕ ಮೂರು ವರ್ಷಗಳ ಬಳಿಕ ‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆ ಆಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಅಲ್ಲು ಅರ್ಜುನ್ನ ಪುಷ್ಪ ಹಿಂಸೆಯನ್ನು ಉತ್ತೇಜಿಸುತ್ತದೆ' ಎಂದು ಪದ್ಮಶ್ರೀ ಗರಿಕಪತಿ ನರಸಿಂಹರಾವ್ ಚಿತ್ರಕ್ಕೆ ಮೆಚ್ಚುಗೆ;

Fri Feb 4 , 2022
ಜನಪ್ರಿಯ ದೂರದರ್ಶನ ವ್ಯಕ್ತಿತ್ವ ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತ ಗರಿಕಪತಿ ನರಸಿಂಹ ರಾವ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್ ಅವರ ಪುಷ್ಪವನ್ನು ಟೀಕಿಸಿದ್ದಾರೆ. ಚಿತ್ರವು ಕಳ್ಳಸಾಗಾಣಿಕೆದಾರನನ್ನು ವೈಭವೀಕರಿಸುತ್ತದೆ ಎಂದ ಅವರು, ಪುಷ್ಪಾ ಅಭಿಮಾನಿಗಳಿಗೆ ಸ್ಫೂರ್ತಿ ನೀಡಿದರೆ ತಯಾರಕರು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು. ಅವಕಾಶ ಸಿಕ್ಕಾಗ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರನ್ನು ಎದುರಿಸುತ್ತೇನೆ ಎಂದು ಅವರು ಹೇಳಿದರು. ಪದ್ಮಶ್ರೀ ವಿಜೇತ ಗರಿಕಪತಿ ನರಸಿಂಹ […]

Advertisement

Wordpress Social Share Plugin powered by Ultimatelysocial