ಶ್ರೀಲೀಲಾ ಇದೀಗ ಅನಾಥಾಶ್ರಮ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಳ್ಳುವ ಮೂಲಕವಾಗಿ ಮಾನವೀಯತೆ ಮೆರೆದಿದ್ದಾರೆ.

ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ಶ್ರೀಲೀಲಾ ತಮ್ಮ ಉತ್ತಮ ನಟನೆಯ ಮೂಲಕವಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಗಿಟ್ಟಿಸಿ ಕೊಂಡಿದ್ದಾರೆ. ಇದೀಗ ಅನಾಥಾಶ್ರಮ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಳ್ಳುವ ಮೂಲಕವಾಗಿ ಮಾನವೀಯತೆ ಮೆರೆದಿದ್ದಾರೆ.ಶ್ರೀಲೀಲಾ ಬೈ ಟು ಲವ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಈ ವೇಳೆ ಅವರು ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿದ್ದಾರೆ. ಆ ವೇಳೆ ಅವರಿಗೆ ಬೈ ಟು ಲವ್ ಚಿತ್ರದ ನಿರ್ದೇಶಕ ಹರಿ ಸಂತೋಷ್ ಕೂಡ ಸಾಥ್ ನೀಡಿದ್ದರು. ಅಲ್ಲಿನ ಮಕ್ಕಳ ಸ್ಥಿತಿಯನ್ನು ನೋಡಿ, ಕೇಳಿ ಇನ್ನಷ್ಟು ತಿಳಿದುಕೊಂಡು ಅವರು ಇಬ್ಬರು ಪುಟ್ಟ ಮಕ್ಕಳನ್ನು ದತ್ತು ಪಡೆದಿದ್ದಾರೆ.10 ತಿಂಗಳ ಗುರು ಹಾಗೂ ಶೋಭಿತಾ ಎನ್ನುವ ಪುಟ್ಟ ಕಂದಮ್ಮನನ್ನು ದತ್ತು ಪಡೆದಿದ್ದಾರೆ. ಈ ವೇಳೆ ಅನಾಥಾಶ್ರಮದ ಮಕ್ಕಳಿಗೆ ತಿಂಡಿ ಕೂಡ ಹಂಚಿ, ಒಂದಷ್ಟು ಸಮಯ ಅವರ ಜೊತೆ ಕಳೆದಿದ್ದಾರೆ. ಮಕ್ಕಳ ಜೊತೆ ಡ್ಯಾನ್ಸ್ ಮಾಡಿ, ಮಾತನಾಡುತ್ತಾ ಕೆಲವು ಸಮಯವನ್ನು ಕಳೆದಿದ್ದಾರೆ. ಶಿಕ್ಷಣ, ನಟನೆ ಜೊತೆಗೆ ಶ್ರೀಲೀಲಾ ಸಾಮಾಜಿಕ ಕೆಲಸ ಮಾಡಲು ಮುಂದಾಗಿದ್ದಾರೆ. ಅರ್ಥಾತ್ ಅವರು ವಿಕಲಚೇತನ ಎರಡು ಪುಟ್ಟ ಮಕ್ಕಳನ್ನು ದತ್ತು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರವು ರಾಜ್ಯಗಳು/UTಗಳಿಂದ ಮೆಟ್ರೋ ಯೋಜನೆಗಳಿಗೆ 16 ಪ್ರಸ್ತಾವನೆಗಳನ್ನು ಸ್ವೀಕರಿಸುತ್ತದೆ!!

Mon Feb 14 , 2022
ಸಾರ್ವಜನಿಕರಿಗೆ ತ್ವರಿತ ಮತ್ತು ಸ್ವಚ್ಛ ನಗರ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಉದ್ದೇಶದಿಂದ, ಏಳು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಮೆಟ್ರೋ ರೈಲು ಯೋಜನೆಗಳ ವಿಸ್ತರಣೆ/ಹೊಸ ನಿರ್ಮಾಣಕ್ಕಾಗಿ 16 ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಕಳುಹಿಸಿವೆ. ಪ್ರಸ್ತಾವನೆಗಳು ಮೂರು ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳನ್ನು ಒಳಗೊಂಡಿವೆ, ಅದು ಹರಿಯಾಣ ಮತ್ತು ರಾಜಸ್ಥಾನದ ವಿವಿಧ ಭಾಗಗಳನ್ನು ದೆಹಲಿಯೊಂದಿಗೆ ಸಂಪರ್ಕಿಸುತ್ತದೆ, ಹಾಗೆಯೇ ಜಮ್ಮು ಮತ್ತು ಕಾಶ್ಮೀರದಿಂದ ಎರಡು. ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ […]

Advertisement

Wordpress Social Share Plugin powered by Ultimatelysocial