ಬಿ ರಿಪೋರ್ಟ್ ಹಾಕ್ತಾರೆ ಅಂತ ಮೊದಲೇ ನಂಗೆ ಗೊತಿತ್ತು.ಅವರ ಮೊಬೈಲ್ ನಲ್ಲಿ ಡೆತ್ ನೋಟ್ ಸಾಕ್ಷಿ ಇರಬೇಕಾದರೆ ಬಿರಿಪೋರ್ಟ್ ಹೇಗೆ ಹಾಕ್ತಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟಾಂಗ್ಕೊಟ್ಟಿದ್ದಾರೆ. ತುಮಕೂರಿನ ಶಿರಾ ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಮಾಜಿ ಸಚಿವ ಈಶ್ವರಪ್ಪ ವಿರುದ್ದದ ಪ್ರಕರಣಕ್ಕೆ ಬಿರಿಪೋರ್ಟ್ ಸಲ್ಲಿಕೆ ವಿಚಾರ ಪ್ರತಿಕ್ರಿಯಿಸಿ ಬಿ-ರಿಪೋರ್ಟ್ ಹಾಕ್ತಾರೆ ಅಂತಾ ನನಗೆ ಮೊದಲೇ ಗೊತ್ತಿತ್ತು. ಕಾಮಗಾರಿ ಮಾಡಿ ನನಗೆ ದುಡ್ಡು ಬಂದಿಲ್ಲಾ,ಈಶ್ವರಪ್ಪ ದುಡ್ಡು ಕೇಳಿದ್ರು..ಹಾಗಾಗಿ ನನಗೆ ಕೋಡೋಕೆ ಆಗಿಲ್ಲಾ,ನನ್ನ ಸಾವಿಗೆ ಇವರೇ ಕಾರಣ ಅಂತಾ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಮತ್ತೆ ಒತ್ತಾಯಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: