ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು

ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್​ ಹಿರಿಯ ನಾಯಕ ಸಿದ್ದರಾಮಯ್ಯ  ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ  ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಸಂಜೆ ವೇಳೆಗೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದ್ದು, ಮುಂದಿನ ನಾಲ್ಕೈದು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.ಹಳೆ ಏರ್ ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಸಿದ್ದರಾಮಯ್ಯ ದಾಖಲಾಗಿದ್ದು, ಅವರ ಪತ್ನಿಯೂ ಜೊತೆಗೆ ತೆರಳಿದ್ದಾರೆ. ಇಂದು ಸಂಜೆ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ. ಸರ್ಜರಿಯಿಂದಾಗಿ ಮುಂದಿನ ನಾಲ್ಕರಿಂದ ಐದು ದಿನಗಳ ಕಾಲ ವೈದ್ಯರು ಸಿದ್ದರಾಮಯ್ಯ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.ಈ ವಿಚಾರವಾಗಿ ಪ್ರತಿಕ್ರಿಯಿಸಿದ ಆಸ್ಪತ್ರೆ ಸಿಬ್ಬಂದಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರರೋಗಿಯಾಗಿ ಆಸ್ಪತ್ರೆಗೆ ಆಗಮಿಸಿದ್ದಾರೆ ಮುಂದಿನ ಪರಿಶೀಲನೆ ಬಳಿಕ ವೈದ್ಯರು ಹೆಚ್ಚಿನ ಮಾಹಿತಿ ನೀಡಲಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

4 ಏರ್​ಲೈನ್​ಗಳನ್ನು ಏರ್​ಇಂಡಿಯಾದ ಜೊತೆ ವಿಲೀನಗೊಳಿಸಲು ಮುಂದಾಗಿದೆ ಟಾಟಾ ಗ್ರೂಪ್

Thu Dec 29 , 2022
  ಟಾಟಾ ಗ್ರೂಪ್ ಕಡಿಮೆ ವೆಚ್ಚದ ವಾಹಕದ  ವಿಲೀನಕ್ಕೂ ಮೊದಲು ಏರ್‌ಏಷ್ಯಾ ಇಂಡಿಯಾವನ್ನು ಎಐಎಕ್ಸ್ ಕನೆಕ್ಟ್ ಎಂದು ಮರುನಾಮಕರಣ ಮಾಡಿದೆ. 2014 ರಲ್ಲಿ ತನ್ನ ವಿಮಾನ ಯಾನ ಸೇವೆ ಆರಂಭಿಸಿದ ಏರ್‌ಏಷ್ಯಾ ಏವಿಯೇಷನ್ ಗ್ರೂಪ್‌ನ ಉಳಿದಿರುವ 16.3% ಷೇರನ್ನು ಟಾಟಾ ಗ್ರೂಪ್ ಇತ್ತೀಚೆಗೆ ಖರೀದಿಸಿದ ಕಾರಣ ಹಳೆಯ ಏರ್‌ಏಷ್ಯಾ ಇಂಡಿಯಾದ 100% ಮಾಲೀಕರು ಎಂದೆನಿಸಿದ್ದಾರೆ. ಟಾಟಾ ಗ್ರೂಪ್ ತಮ್ಮ ನಾಲ್ಕು ಏರ್‌ಲೈನ್ ಸೇವೆಗಳನ್ನು ಒಗ್ಗೂಡಿಸುತ್ತಿದ್ದಾರೆ ವಿಸ್ತಾರಾದ ಪೂರ್ಣ ಸೇವೆಯನ್ನು ಏರ್ […]

Advertisement

Wordpress Social Share Plugin powered by Ultimatelysocial